HEALTH TIPS

No title

           ಶ್ರೀಬ್ರಹ್ಮೇಶ್ವರ ದೇವಸ್ಥಾನ ಶಿಲಾನ್ಯಾಸ
   ಮಂಜೇಶ್ವರ:ಕ್ಷೇತ್ರಗಳ ಅಭಿವೃದ್ದಿ ಚಟುವಟಿಕೆಗಳು ಸಾನ್ನಿಧ್ಯ ವೃದ್ದಿಯ ಜೊತೆಗೆ ಸಾಮಾಜಿಕ ಒಗ್ಗಟ್ಟಿಗೆ, ಆತ್ಮಬಲ ವೃದ್ದಿಗೊಳ್ಳಲು ಕಾರಣವಾಗುತ್ತದೆ. ಧನಾತ್ಮಕ ಶಕ್ತಿಸಂಚಯಕ್ಕೆ ಪ್ರಧಾನ ಕೇಂದ್ರಗಳಾಗಿರುವ ಆರಾಧನಾಲಯಗಳು ಸಮಾಜ, ವ್ಯಕ್ತಿ-ವ್ಯವಸ್ಥೆಗಳ ಸಮೃದ್ದತೆಗೆ ಕಾರಣವಾಗುತ್ತದೆ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಆಶೀರ್ವಚನ ನೀಡಿದರು.
   ಕಣ್ವತೀರ್ಥದ ಶ್ರೀ ಬ್ರಹ್ಮೇಶ್ವರ ಕ್ಷೇತ್ರದ ಸುತ್ತು ಪೌಳಿಗೆ ಶಿಲಾನ್ಯಾಸವನ್ನು ಇತ್ತೀಚೆಗೆ  ಶಾಸ್ತ್ರೋಕ್ತವಾಗಿ ನೆರವೇರಿಸಿ ಬಳಿಕ ನಡೆದ ಧಾಮರ್ಿಕ ಸಭೆಯಲ್ಲಿ ಅವರು ಮಾತನಾಡಿದರು.
   ಕ್ಷೇತ್ರ ಪುರೋಹಿತ ಕೃಷ್ಣ ಭಟ್ ಉಪಸ್ಥಿತರಿದ್ದ ಸಭೆಯ ಅಧ್ಯಕ್ಷತೆಯನ್ನು ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ ವಹಿಸಿದ್ದರು. ದ.ಕ.ಕ.ಸಾ.ಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಗದೀಶ ಶೆಟ್ಟಿ ಮಂಗಳೂರು, ಚಂದ್ರಹಾಸ ಪಂಡಿತ್ ಹೌಸ್, ಕೃಷ್ಣಪ್ಪ ಬೆಂಗರೆ, ಶ್ರೀನಿವಾಸ ಸಿ.ಉದ್ಯಾವರ, ಮೋಹನ ಮೊದಲಾದವರು ಉಪಸ್ಥಿತರಿದ್ದರು.
   ತಂತ್ರಿವರ್ಯ ಚಿತ್ರಾಪುರ ಗೋಪಾಲಕೃಷ್ಣ ತಂತ್ರಿ ವಿಧಿವಿಧಾನಗಳ ಪೌರೋಹಿತ್ಯ ವಹಿಸಿದ್ದರು. ಅರ್ಚಕ ರಮೇಶ್ ಉಪಾಧ್ಯಾಯ ಪೂಜಾ ಕಾರ್ಯಕ್ರಮ ನಿರ್ವಹಿಸಿದರು.
   ಸುಧಾಕರ ರಾವ್ ಪೇಜಾವರ ಸ್ವಾಗತಿಸಿ, ಗೋಪಾಲ ಶೆಟ್ಟಿ ಅರಿಬೈಲು ವಂದಿಸಿದರು. ಮಧುಸೂದನ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries