HEALTH TIPS

No title

             ಮಾ.22-24 : ರಕ್ತೇಶ್ವರಿ ಗುಡ್ಡೆ ಪುನರ್ಪ್ರತಿಷ್ಠಾ ಬ್ರಹ್ಮಕಲಶೋತ್ಸವ
    ಕಾಸರಗೋಡು: ಕೂಡ್ಲು ರಕ್ತೇಶ್ವರಿ ಗುಡ್ಡೆ ಶ್ರೀ ರಕ್ತೇಶ್ವರಿ ದೈವಸ್ಥಾನದ ಪುನರ್ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ.22 ರಿಂದ 24 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
   ಮಾ.22 ರಂದು ಅಪರಾಹ್ನ 3 ಕ್ಕೆ ಉಗ್ರಾಣ ಮುಹೂರ್ತ, 3.30 ಕ್ಕೆ ಕಾವುಗೋಳಿ ಶ್ರೀ ಮಹಾವಿಷ್ಣು ದೇವಸ್ಥಾನದ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ, ಸಂಜೆ 5 ರಿಂದ ತಂತ್ರಿವರ್ಯರಾದ ಬ್ರಹ್ಮಶ್ರೀ ವಿಷ್ಣುಪ್ರಕಾಶ ತಂತ್ರಿ ಕಾವುಮಠ ಹಾಗೂ ವೈದಿಕರಿಗೆ ಪೂರ್ಣಕುಂಭ ಸ್ವಾಗತ, ಸಂಜೆ 6 ರಿಂದ ಆಚಾರ್ಯವರಣ, ಸಾಮೂಹಿಕ ಪ್ರಾರ್ಥನೆ, ಹೊಸಕಟ್ಟೆಯನ್ನು ಒಪ್ಪಿಸುವುದು, ಪಶುದಾನ ಪುಣ್ಯಾಹ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ,ಭೂಪರಿಗ್ರಹ ಪೂಜೆ, ಖನನಾದಿ ಸ್ಥಳ ಶುದ್ಧಿ, ವಾಸ್ತು ಹೋಮ, ರಕ್ಷೋಘ್ನ ಹೋಮ, ವಾಸ್ತು ಬಲಿ, ರಾತ್ರಿ 9.30 ರಿಂದ ಬಾಲಗೋಕುಲ ಮಕ್ಕಳಿಂದ ನೃತ್ಯ ವೈವಿಧ್ಯ, 23 ರಂದು ಬೆಳಗ್ಗೆ 5 ಕ್ಕೆ ಮಹಾಗಣಪತಿ ಹೋಮ, ಜೀವೋದ್ಧ್ವಾಸನ, ಬ್ರಹ್ಮಕಲಶ ಪೂಜೆ, 6.32 ರಿಂದ ಶ್ರೀ ರಕ್ತೇಶ್ವರಿ, ನಾಗ, ಬ್ರಹ್ಮರಕ್ಷಸ್, ಗುಳಿಗ ದೈವಗಳ ಪುನರ್ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಸರ್ಪಬಲಿ, ಮಹಾಪೂಜೆ, ನಿತ್ಯನೈಮಿತ್ತಿಕ ನಿಶ್ಚಯ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, 9 ರಿಂದ ಭಜನೆ, ಮಧ್ಯಾಹ್ನ 1 ರಿಂದ ಅನ್ನದಾನ, ಸಂಜೆ 4 ರಿಂದ ಧಾಮರ್ಿಕ ಸಭೆ, ರಾತ್ರಿ 7 ರಿಂದ ಬಳ್ಳಿಮೊಗರು ಶ್ರೀ ರಕ್ತೇಶ್ವರೀ ದೈವಸ್ಥಾನದಿಂದ ಶ್ರೀ ದೈವಗಳ ಭಂಡಾರ ಬರುವುದು ಹಾಗೂ ದೈವಗಳ ತೊಡಂಙಲ್, ರಾತ್ರಿ 10 ರಿಂದ ಯಕ್ಷಗಾನ ಬಯಲಾಟ, 24 ರಂದು ಬೆಳಗ್ಗೆ 8 ಕ್ಕೆ ಶ್ರೀ ರಕ್ತೇಶ್ವರಿ ದೈವದ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ 1 ಕ್ಕೆ ಅನ್ನದಾನ, 2.30 ರಿಂದ ಗುಳಿಗ ದೈವದ ಕೋಲ, ಪ್ರಸಾದ ವಿತರಣೆ, ಭಂಡಾರ ಸ್ವಸ್ಥಾನಕ್ಕೆ ನಿರ್ಗಮನ ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries