ದಾರಿದೀಪ ದುರಸ್ತಿಗೆ ಆಗ್ರಹ
ಮಂಜೇಶ್ವರ: ಕಡಂಬಾರು - ಬಟ್ಯಪದವು - ತಲೇಕಳ ರಸ್ತೆಯಲ್ಲಿ ಅಳವಡಿಸಿದ ದಾರಿದೀಪಗಳು ಉರಿಯದೆ ವರ್ಷಗಳೇ ಕಳೆದರೂ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ರಾತ್ರಿ ಹೊತ್ತಿನಲ್ಲಿ ನಡೆದು ಹೋಗುವವರು ಈ ರಸ್ತೆಯಲ್ಲಿ ಬೆಳಕಿಲ್ಲದೆ ಪರದಾಡಬೇಕಾದ ಸ್ಥಿತಿಯುಂಟಾಗಿದೆ. ಮೀಂಜ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಈ ರಸ್ತೆ ಇದ್ದು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಈ ಕುರಿತು ಗಮನಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕ ವಲಯ ಒತ್ತಾಯಿಸಿದೆ.
ಮಂಜೇಶ್ವರ: ಕಡಂಬಾರು - ಬಟ್ಯಪದವು - ತಲೇಕಳ ರಸ್ತೆಯಲ್ಲಿ ಅಳವಡಿಸಿದ ದಾರಿದೀಪಗಳು ಉರಿಯದೆ ವರ್ಷಗಳೇ ಕಳೆದರೂ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ರಾತ್ರಿ ಹೊತ್ತಿನಲ್ಲಿ ನಡೆದು ಹೋಗುವವರು ಈ ರಸ್ತೆಯಲ್ಲಿ ಬೆಳಕಿಲ್ಲದೆ ಪರದಾಡಬೇಕಾದ ಸ್ಥಿತಿಯುಂಟಾಗಿದೆ. ಮೀಂಜ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಈ ರಸ್ತೆ ಇದ್ದು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಈ ಕುರಿತು ಗಮನಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕ ವಲಯ ಒತ್ತಾಯಿಸಿದೆ.