HEALTH TIPS

No title

              ವಿದ್ಯಾಗಿರಿ ಶಾಲಾ ವಾಷರ್ಿಕೋತ್ಸವ-ಪುರಸ್ಕಾರ ಪ್ರಧಾನ
     ಬದಿಯಡ್ಕ : ಶಾಲಾ ವಾಷರ್ಿಕೋತ್ಸವವನ್ನು ಆಚರಿಸುವ ಮೂಲಕ ಪ್ರತಿಭಾವಂತ ವಿದ್ಯಾಥರ್ಿಗಳನ್ನು ಬೆಳಕಿಗೆ ತರಬಹುದು. ಸಾರ್ವಜನಿಕರೆದುರು ಪ್ರತಿಭೆಗಳನ್ನು ಗುರುತಿಸುವುದರಿಂದ ಅವರಿಗೆ ಪ್ರೋತ್ಸಾಹ ಲಭಿಸಿದಂತಾಗುತ್ತದೆ. ಇನ್ನಷ್ಟು ಶ್ರಮ ಪಡಬೇಕೆಂಬ ಹಂಬಲ ಮಕ್ಕಳಲ್ಲಿ ಉಂಟಾಗುತ್ತದೆ ಎಂದು ಗ್ರಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು ಹೇಳಿದರು.
ಅವರು ವಿದ್ಯಾಗಿರಿ ಶಾಲೆಯ ವಾಷರ್ಿಕೋತ್ಸವ ಮತ್ತು ವಿದ್ಯಾದೀಪ್ತಿ ಪುರಸ್ಕಾರ ಪ್ರಧಾನ ಕಾರ್ಯಕ್ರಮವು ವನ್ನು ಉದ್ಘಾಟಿಸಿ ಮಾತನಾಡಿದರು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸ ಮೂತರ್ಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ ಸಾರ್ವಜನಿಕ ಶಿಕ್ಷಣ ನೀತಿಯನ್ನು ಜ್ಯಾರಿಗೊಳಿಸಲು ಸಾರ್ವಜನಿಕರು, ಪೋಷಕರು ಶಾಲೆಯೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ಸಹಕರಿಸಬೇಕು. ತನ್ಮೂಲಕ ಊರಿನ ಶಾಲೆಯ ಅಭಿವೃದ್ಧಿಯಲ್ಲಿ ಜನತೆ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಬ್ಲಾಕ್ ಯೋಜನಾಧಿಕಾರಿ ಕುಂಞ್ಞಿಕೃಷ್ಣನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಧಾಕರನ್,ಮಾತೃಸಂಘದ ಅಧ್ಯಕ್ಷೆ ಬೀನಾ, ಶಾಲಾಭಿವೃದ್ದಿ ಸಮಿತಿ ಸಂಚಾಲಕ ಆನಂದ, ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್, ಚಂದ್ರಹಾಸ ಮಾಸ್ತರ್ ಶುಭಾಶಂಸನೆಗೈದರು.
ಈ ಸಂದರ್ಭದಲ್ಲಿ ಹಳೆವಿದ್ಯಾಥರ್ಿ ವೇಣುಗೋಪಾಲನ್ ನೀಡುತ್ತಿರುವ ಮೂರನೇ ವರ್ಷದ ವಿದ್ಯಾದೀಪ್ತಿ ಪುರಸ್ಕಾರವನ್ನು ಯು.ಪಿ. ತರಗತಿಯ ಏಳು ವಿದ್ಯಾಥರ್ಿಗಳು ಪಡೆದುಕೊಂಡರು, ಹಾಗೂ ರಾಜ್ಯಮಟ್ಟದಲ್ಲಿ ವಿಜೇತರಾದ ಇಬ್ಬರು ವಿದ್ಯಾಥರ್ಿಗಳನ್ನು ಅಭಿನಂದಿಸಲಾಯಿತು. ಅನಿತಾ ಟೀಚರ್ ವರದಿ ಮಂಡಿಸಿ, ಮುಖ್ಯೋಪಾಧ್ಯಾಯಿನಿ ಲಲಿತಾಂಬಿಕಾ ಟೀಚರ್ ಸ್ವಾಗತಿಸಿ, ಅಧ್ಯಾಪಕರುಗಳಾದ ಕರುಣಾಕರ ಕಾರ್ಯಕ್ರಮ ನಿರೂಪಿಸಿ, ಶ್ರೀಧರ ಪ್ರಸಾದ್ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries