ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿವೃತ್ತರಿಗೆ ವಿದಾಯ ಕೂಟ
ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ವರ್ಷ ನಿವೃತ್ತಲಾಗಲಿರುವ ಸಂಸ್ಕೃತ ಶಿಕ್ಷಕಿ ಅನಿತಾ ದೇವಿ ಹಾಗು ವಾಣಿಜ್ಯ ವಿಭಾಗದ ಅಧ್ಯಾಪಕ ವಿನೋದ್ ಕುಮಾರ್ ಇವರಿಗೆ ವಿದಾಯ ಕೂಟ ಸಮಾರಂಭ ಹಾಗು ಅಭಿನಂದನ ಕಾರ್ಯಕ್ರಮ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾ ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್ ಶಾಲೆಯ ಶೈಕ್ಷಣಿಕ ಸಾಧನೆಯಲ್ಲಿ ಈ ಅಧ್ಯಾಪಕರ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆಯ ಹಳೆ ವಿದ್ಯಾಥರ್ಿ, ವಿಜಯಾ ಬ್ಯಾಂಕ್ ಉಪ್ಪಿನಂಗಡಿ ಶಾಖೆಯ ಪ್ರಬಂಧಕ ನಿತೇಶ್ ಶೆಣೈ ಮಾತನಾಡಿ ವಿದ್ಯಾಭ್ಯಾಸ ರಂಗದಲ್ಲಿ ಕಾಟುಕುಕ್ಕೆ ಶಾಲೆಯ ಕೊಡುಗೆ ಹೆಮ್ಮೆ ಮುಡಿಸುವಂತದ್ದು,ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಈ ಶಾಲೆ ಹಾಗು ಇಲ್ಲಿನ ಗುರುವೃಂದ ಕಾರಣ ಎಂದು ಅಭಿಪ್ರಾಯಪಟ್ಟರು.
ಹಳೆ ವಿದ್ಯಾಥರ್ಿನಿ, ಪ್ರಸ್ತುತ ಸವಣೂರು ವಿದ್ಯಾರಶ್ಮಿ ಕಾಲೇಜಿನ ಆರ್ಥಶಾಸ್ತ್ರ ಪ್ರಾಧ್ಯಾಪಿಕೆ ಸುಮಾ ಕೆ ಮಾತನಾಡಿ ವಿದ್ಯಾಥರ್ಿಗಳಿಗೆ ಶಿಸ್ತು ಬದ್ದ ಶಿಕ್ಷಣ ನೀಡಿದರೆ ಮಾತ್ರ ವಿದ್ಯಾಥರ್ಿಗೆ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ, ಇಲ್ಲಿನ ಶಿಸ್ತು ಪ್ರತಿಯೊಂದು ವಿದ್ಯಾಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು. ವಿದ್ಯಾಥರ್ಿಗಳಲ್ಲಿ ಮಾನವೀಯ ಮೌಲ್ಯ ಕುಸಿತ ಇಂದು ಕಾಣುವ ಅತಿದೊಡ್ಡ ಸಮಸ್ಯೆ,ಶಾಲೆಯ ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾಥರ್ಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸಂಜೀವ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ನಿವೃತ್ತರೊಂದಿಗಿನ ಒಡನಾಟದ ಬಗ್ಗೆ ನೆನಪಿಸಿದರು. ಕಾಟುಕುಕ್ಕೆ ಗ್ರಾಮಾಧಿಕಾರಿ ಹಮೀದ್, ಮುಖ್ಯೋಪಾಧ್ಯಾಯರಾದ ಸುಧೀರ್ ಕುಮಾರ್,ಲೋಕನಾಥ್ ಶೆಟ್ಟಿ,ಆಡಳಿತ ಮಂಡಳಿ ಸದಸ್ಯ ಬಿ ಎಸ್ ಗಾಂಭೀರ್,ಶಿವರಾಮ್ ಭಟ್,ಸುನಿತ್ ಕುಮಾರ್, ಮಾತೃಸಂಘದ ಅಧ್ಯಕ್ಷೆ ರಾಜೇಶ್ವರಿ, ಶಿಕ್ಷಕರಾದ ಬಾಲಕೃಷ್ಣ ಎನ್. ವಿ, ಕೃಷ್ಣ ಕುಮಾರಿ, ಸಂದೀಪ್ ಕುಮಾರ್, ಮಹೇಶ್ ಏತಡ್ಕ, ಈಶ್ವರ ನಾಯಕ್ ಮಾತನಾಡಿ ನಿವೃತ್ತರಿಗೆ ಶುಭಕೋರಿದರು. ನಿವೃತಿ ಹೊಂದುತ್ತಿರುವ ಅದ್ಯಾಪಕರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ವಿದ್ಯಾಥರ್ಿಗಳಾದ ಲಿಂಡಾ, ಜೋಸ್ ಅಂಟನಿ ಲಿಯೋ,ಎಲ್ಸಾ, ವೈಷ್ಣವಿ ಶಿಕ್ಷಕರ ಬಗ್ಗೆ ಮಾತನಾಡಿದರು.ಅಧ್ಯಾಪಿಕೆ ರಮಣಿ ಎಂ ಎಸ್ ಸ್ವಾಗತಿಸಿ, ಸರಸ್ವತಿ ಪ್ರಸನ್ನ ವಂದಿಸಿದರು. ರಾಜೇಶ್ ಸಿ ಎಚ್ ಕಾರ್ಯಕ್ರಮ ನಿರೂಪಿಸಿದರು.
ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ವರ್ಷ ನಿವೃತ್ತಲಾಗಲಿರುವ ಸಂಸ್ಕೃತ ಶಿಕ್ಷಕಿ ಅನಿತಾ ದೇವಿ ಹಾಗು ವಾಣಿಜ್ಯ ವಿಭಾಗದ ಅಧ್ಯಾಪಕ ವಿನೋದ್ ಕುಮಾರ್ ಇವರಿಗೆ ವಿದಾಯ ಕೂಟ ಸಮಾರಂಭ ಹಾಗು ಅಭಿನಂದನ ಕಾರ್ಯಕ್ರಮ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾ ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್ ಶಾಲೆಯ ಶೈಕ್ಷಣಿಕ ಸಾಧನೆಯಲ್ಲಿ ಈ ಅಧ್ಯಾಪಕರ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆಯ ಹಳೆ ವಿದ್ಯಾಥರ್ಿ, ವಿಜಯಾ ಬ್ಯಾಂಕ್ ಉಪ್ಪಿನಂಗಡಿ ಶಾಖೆಯ ಪ್ರಬಂಧಕ ನಿತೇಶ್ ಶೆಣೈ ಮಾತನಾಡಿ ವಿದ್ಯಾಭ್ಯಾಸ ರಂಗದಲ್ಲಿ ಕಾಟುಕುಕ್ಕೆ ಶಾಲೆಯ ಕೊಡುಗೆ ಹೆಮ್ಮೆ ಮುಡಿಸುವಂತದ್ದು,ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಈ ಶಾಲೆ ಹಾಗು ಇಲ್ಲಿನ ಗುರುವೃಂದ ಕಾರಣ ಎಂದು ಅಭಿಪ್ರಾಯಪಟ್ಟರು.
ಹಳೆ ವಿದ್ಯಾಥರ್ಿನಿ, ಪ್ರಸ್ತುತ ಸವಣೂರು ವಿದ್ಯಾರಶ್ಮಿ ಕಾಲೇಜಿನ ಆರ್ಥಶಾಸ್ತ್ರ ಪ್ರಾಧ್ಯಾಪಿಕೆ ಸುಮಾ ಕೆ ಮಾತನಾಡಿ ವಿದ್ಯಾಥರ್ಿಗಳಿಗೆ ಶಿಸ್ತು ಬದ್ದ ಶಿಕ್ಷಣ ನೀಡಿದರೆ ಮಾತ್ರ ವಿದ್ಯಾಥರ್ಿಗೆ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ, ಇಲ್ಲಿನ ಶಿಸ್ತು ಪ್ರತಿಯೊಂದು ವಿದ್ಯಾಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು. ವಿದ್ಯಾಥರ್ಿಗಳಲ್ಲಿ ಮಾನವೀಯ ಮೌಲ್ಯ ಕುಸಿತ ಇಂದು ಕಾಣುವ ಅತಿದೊಡ್ಡ ಸಮಸ್ಯೆ,ಶಾಲೆಯ ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾಥರ್ಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸಂಜೀವ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ನಿವೃತ್ತರೊಂದಿಗಿನ ಒಡನಾಟದ ಬಗ್ಗೆ ನೆನಪಿಸಿದರು. ಕಾಟುಕುಕ್ಕೆ ಗ್ರಾಮಾಧಿಕಾರಿ ಹಮೀದ್, ಮುಖ್ಯೋಪಾಧ್ಯಾಯರಾದ ಸುಧೀರ್ ಕುಮಾರ್,ಲೋಕನಾಥ್ ಶೆಟ್ಟಿ,ಆಡಳಿತ ಮಂಡಳಿ ಸದಸ್ಯ ಬಿ ಎಸ್ ಗಾಂಭೀರ್,ಶಿವರಾಮ್ ಭಟ್,ಸುನಿತ್ ಕುಮಾರ್, ಮಾತೃಸಂಘದ ಅಧ್ಯಕ್ಷೆ ರಾಜೇಶ್ವರಿ, ಶಿಕ್ಷಕರಾದ ಬಾಲಕೃಷ್ಣ ಎನ್. ವಿ, ಕೃಷ್ಣ ಕುಮಾರಿ, ಸಂದೀಪ್ ಕುಮಾರ್, ಮಹೇಶ್ ಏತಡ್ಕ, ಈಶ್ವರ ನಾಯಕ್ ಮಾತನಾಡಿ ನಿವೃತ್ತರಿಗೆ ಶುಭಕೋರಿದರು. ನಿವೃತಿ ಹೊಂದುತ್ತಿರುವ ಅದ್ಯಾಪಕರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ವಿದ್ಯಾಥರ್ಿಗಳಾದ ಲಿಂಡಾ, ಜೋಸ್ ಅಂಟನಿ ಲಿಯೋ,ಎಲ್ಸಾ, ವೈಷ್ಣವಿ ಶಿಕ್ಷಕರ ಬಗ್ಗೆ ಮಾತನಾಡಿದರು.ಅಧ್ಯಾಪಿಕೆ ರಮಣಿ ಎಂ ಎಸ್ ಸ್ವಾಗತಿಸಿ, ಸರಸ್ವತಿ ಪ್ರಸನ್ನ ವಂದಿಸಿದರು. ರಾಜೇಶ್ ಸಿ ಎಚ್ ಕಾರ್ಯಕ್ರಮ ನಿರೂಪಿಸಿದರು.