HEALTH TIPS

No title

                   ಚಂದ್ರಗಿರಿ ವಲಯ ಕಛೇರಿ ಉದ್ದೇಶಿತ ಸ್ಥಳಕ್ಕೆ ಮಹಾ ಮಂಡಲ ಪದಾಧಿಕಾರಿಗಳ ಭೇಟಿ
  ಮುಳ್ಳೇರಿಯ : ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಮುಳ್ಳೇರಿಯ  ಬದಿಯಡ್ಕ  ರಾಜಮಾರ್ಗದ ಬದಿಯಲ್ಲಿ ದೇಲಂಪಾಡಿ ಸಮೀಪ ನಿಮರ್ಾಣವಾಗಲಿರುವ ಚಂದ್ರಗಿರಿ ವಲಯ ಕಛೇರಿ ಉದ್ದೇಶಿತ ಸ್ಥಳಕ್ಕೆ ಹವ್ಯಕ ಮಹಾ ಮಂಡಲ ಮತ್ತು ಮುಳ್ಳೇರಿಯ ಹವ್ಯಕ ಮಂಡಲ ಪದಾಧಿಕಾರಿಗಳು ಭೇಟಿಯಿತ್ತು ಯೋಜನೆಯ ಕುರಿತು ಸಮಗ್ರ ಅವಲೋಕನೆ ಮಾಡಿದರು.
ಮಹಾಮಂಡಲಾದ್ಯಂತವಾಗಿ  ಸರ್ವರ ಸಹಕಾರಗಳೊಂದಿಗೆ ಅತಿಶೀಘ್ರದಲ್ಲಿ ಕಾರ್ಯ  ಕೈಗೂಡಲಿ ಎಂಬುದಾಗಿ ಮಹಾಮಂಡಲ ಕಾರ್ಯದಶರ್ಿ ಹರಿಪ್ರಸಾದ್ ಪೆರಿಯಾಪು  ಹೇಳುತ್ತಾ  ಶುಭಾಶಂಸನೆಯಿತ್ತರು. ಮಹಾಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಅವರು ಮಾತನಾಡುತ್ತಾ ಅಮೂಲ್ಯ ಸಲಹೆಸೂಚನೆಗಳನ್ನಿತ್ತರು. ಮುಳ್ಳೇರಿಯ ಮಂಡಲ ಉಪಾಧ್ಯಕ್ಷರಾದ ಕುಮಾರ ಪೈಸಾರಿ ಅವರು ಸರ್ವವಿಧ ಸಹಕಾರಗಳನ್ನು ಹಾರೈಸುತ್ತಾ ಧನಸಹಾಯವನ್ನು ಹಸ್ತಾಂತರಿಸಿದರು. 
ಈ ಸಂದರ್ಭದಲ್ಲಿ ಉಲ್ಲೇಖ ಪ್ರಧಾನ ಗೋವಿಂದಬಳ್ಳಮೂಲೆ,  ಮುಳ್ಳೇರಿಯ ಮಂಡಲ ಅಧ್ಯಕ್ಷರಾದ ಪ್ರೊ ಶ್ರೀಕೃಷ್ಣ ಭಟ್, ಸಂಸ್ಕಾರ ಪ್ರಧಾನ ನವನೀತಪ್ರಿಯ ಕೈಪ್ಪಂಗಳ, ವೃತ್ತಿಪರ ಪ್ರಧಾನ ವೈ ಕೆ ಗೋವಿಂದ ಭಟ್, ವಲಯ ಸಹಾಯ ಪ್ರಧಾನ ಡಾ ಶಿವಕುಮಾರ ಅಡ್ಕ, ಮಂಡಲ  ಮಾತೃ ಪ್ರಧಾನೆ ಕುಸುಮಾ ಪೆರುಮುಖ,  ಮುಷ್ಥಿ ಭಿಕ್ಷಾ ಪ್ರಧಾನೆ  ಗೀತಾಲಕ್ಷ್ಮಿ, ಚಂದ್ರಗಿರಿ ವಲಯ ಅಧ್ಯಕ್ಷ ಬಾಲಕೃಷ್ಣ ಭಟ್ ಅಮ್ಮಂಕಲ್ಲು, ಕಾರ್ಯದಶರ್ಿ ರಾಜಗೋಪಾಲ ಕೈಪ್ಪಂಗಳ , ಜಿ ಕೆ ಕುಳೂರು, ಸುಬ್ರಹ್ಮಣ್ಯ ಭಟ್ ಮೀನಗದ್ದೆ, ಸುಬ್ರಹ್ಮಣ್ಯ ಭಟ್ ಅಮ್ಮಂಕಲ್ಲು, ಬಾಲಸುಬ್ರಹ್ಮಣ್ಯ ಭಟ್ ಪೊನ್ನೆಪ್ಪಲ, ಈಶ್ವರ ಭಟ್ ಯಸ್ ಸಾಮರಸ್ಯ ಪ್ರಧಾನರು ಸುಳ್ಯ ವಲಯ ಇವರು ಉಪಸ್ಥಿತರಿದ್ದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries