HEALTH TIPS

No title

            ಎಣ್ಮಕಜೆ ತರವಾಡಿಗೆ ಕೊಂಡೆವೂರು ಶ್ರೀಗಳ ಭೇಟಿ
     ಪೆರ್ಲ: ದೇವರ ಭಯವೇ ಜ್ಞಾನದ ಆರಂಭ.ಯಾವಾಗ ನಮಗೆ ದೇವರ ಮೇಲೆ ಭಯ ಭಕ್ತಿ ಮೂಡುತ್ತದೋ ,ಹೃದಯದಲ್ಲಿ ಭಕ್ತಿ ಅನಂದದ ಅನುಭವವನ್ನು ನೀಡುತ್ತದೋ ಆಗ ಮಾತ್ರ ಭಕ್ತ ಮತ್ತು ದೇವರ ನಡುವೆ ಭಕ್ತಿ ಸೇತುವೆಯಾಗಲು ಸಾಧ್ಯ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ತಿಳಿಸಿದರು.
    ಎಣ್ಮಕಜೆ ತರವಾಡು ಮನೆಯಲ್ಲಿ  ಪಿಲಿಚಾಮುಂಡಿ ,ರಕ್ತೇಶ್ವರಿ ದೈವಗಳ ವಷರ್ಾವಧಿ  ನೇಮದ ಸಂದರ್ಭ ಶುಕ್ರವಾಋ ಭೇಟಿ ನೀಡಿ ಆಶೀರ್ವಚನಗೈದು ಮಾತನಾಡಿದರು.
  ತರವಾಡು ಎಂಬ ಕುಟುಂಬ ಸಂಬಂಧಿತವಾದ ಮೂಲಸ್ಥಾನದಲ್ಲಿ ನಡೆಯುವ ದೈವ ದೇವರುಗಳ ಪೂಜೆ,ಆರಾಧನೆಗಳಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.ಹಾಗೆಯೇ ಒಗ್ಗೂಡಿ ಮಾಡುವ ಕಾರ್ಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ.ಪರಸ್ಪರ ಅನ್ಯೋನ್ಯತೆಯನ್ನು ಉಂಟು ಮಾಡುತ್ತದೆ ಎಂದು ಆಶೀರ್ವಚನದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟ ಖ್ಯಾತ ಗಾಯಕ ಹಾಗೂ ಸಂಗೀತ ನಿದರ್ೆಶಕ ಯಂ.ಜಯಚಂದ್ರನ್ ಹಾಗೂ ಬಳಗದವರನ್ನು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಶಾಲು ಹೊದಿಸಿ ಅಭಿನಂದಿಸಿದರು. ತರವಾಡಿನ ಹಿರಿರೂ, ಯುಎಇ ಎಕ್ಸೇಂಜ್ನ ಕಾರ್ಯನಿರ್ವಹಣಾಧಿಕಾರಿ  ಸುದೀರ್ ಕುಮಾರ್ ಶೆಟ್ಟಿ, ವಿಠಲ ರೈ ಎಣ್ಮಕಜೆ, ನಾರಾಯಣ ಆಳ್ವ ಎಣ್ಮಕಜೆ  ಮುಂತಾದವರು ಹಾಗೂ ಕುಟುಂಬಸ್ಥರು, ಊರವರು  ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries