ಮಾ.11: ಡಾ|ಉಪ್ಪಂಗಳ ಶಂಕರನಾರಾಯಣ ಭಟ್ ಅವರ ಎರಡು ಗ್ರಂಥಗಳ ಲೋಕಾರ್ಪಣೆ
ಮಧೂರು: ಡಾ.ಉಪ್ಪಂಗಳ ಶಂಕರನಾರಾಯಣ ಭಟ್ ಅವರ `ಕಾಸರಗೋಡು ತಾಲೂಕಿನ ಶಾಲೆಗಳ ಇತಿಹಾಸ' ಮತ್ತು `ಕಾಸರಗೋಡಿನ ಕನರ್ಾಟಕ - ಹಿಂದುಸ್ತಾನಿ ಸಂಗೀತಗಾರರು' ಎಂಬ ಎರಡು ಗ್ರಂಥಗಳ ಲೋಕಾರ್ಪಣೆ ಸಮಾರಂಭ ಮಾ.11 ಬೆಳಗ್ಗೆ 9.30 ರಿಂದ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸುವರು. `ಕಾಸರಗೋಡು ತಾಲೂಕಿನ ಶಾಲೆಗಳ ಇತಿಹಾಸ' ಕೃತಿಯನ್ನು ಸಾಹಿತ್ಯ ಶಿರೋಮಣಿ, ವೇದಾಂತ ವಿದ್ವಾನ್ ಡಾ.ಬಳ್ಳಪದವು ಮಾಧವ ಉಪಾಧ್ಯಾಯ ಮತ್ತು `ಕಾಸರಗೋಡಿನ ಕನರ್ಾಟಕ - ಹಿಂದುಸ್ತಾನಿ ಸಂಗೀತಗಾರರು' ಕೃತಿಯನ್ನು ಅಗಲ್ಪಾಡಿ ಶ್ರೀ ಅನ್ನಪೂಣರ್ೇಶ್ವರೀ ಹೈಸ್ಕೂಲ್ನ ನಿವೃತ್ತ ಮುಖ್ಯೋಪಾಧ್ಯಾಯ ಮವ್ವಾರು ಪುರುಷೋತ್ತಮ ಭಟ್ ಅವರು ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ರಂಗ ನಿದರ್ೇಶಕ ಕಾಸರಗೋಡು ಚಿನ್ನಾ, ನಿವೃತ್ತ ಉನ್ನತ ವಿದ್ಯಾಭ್ಯಾಸ ಉಪನಿದರ್ೇಶಕ ಪ್ರೊ.ಪಿ.ಟಿ.ಗೋವಿಂದನ್ ನಂಬ್ಯಾರ್ ಭಾಗವಹಿಸುವರು.
ಕಲ್ಲೂರು ನಾಗೇಶ್ ಪ್ರಕಾಶಕರ ಮತ್ತು ಡಾ.ಉಪ್ಪಂಗಳ ಶಂಕರನಾರಾಯಣ ಭಟ್ ಗ್ರಂಥಕರ್ತರ ಮಾತುಗಳನ್ನಾಡುವರು. ಇದೇ ಸಂದರ್ಭದಲ್ಲಿ ವಿದ್ವಾನ್ ಆಲಂಗಾರು ಲಕ್ಷ್ಮೀನಾರಾಯಣ ಭಟ್, ಸುಲೋಚನಾ ಎಸ್. ಭಟ್ ಮಾತನಾಡುವರು. ಡಾ.ಕೆ.ಕಮಲಾಕ್ಷ ಉಪಸ್ಥಿತರಿರುವರು.
ಅಪರಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಉಪ್ಪಂಗಳ ಶ್ಯಾಮ ಭಟ್ ಅವರಿಂದ ಕೊಳಲು ವಾದನ ನಡೆಯಲಿದೆ. ಉಂಡೆಮನೆ ನಾರಾಯಣ ಶರ್ಮ (ಪಿಟೀಲು) ಮತ್ತು ಉದಯ ಕಂಬಾರು(ಮೃದಂಗ) ಹಿಮ್ಮೇಳದಲ್ಲಿ ಸಹಕರಿಸುವರು. ಅಪರಾಹ್ನ 3 ರಿಂದ ಹೊನ್ನೇಸರ ಮಾಧವ ಭಟ್ರಿಂದ ಕನರ್ಾಟಕ ಸಂಗೀತ ಕಚೇರಿ ನಡೆಯಲಿದೆ. ವೇಣುಗೋಪಾಲ ಶ್ಯಾನಭೋಗ್ (ಪಿಟೀಲು) ಮತ್ತು ಕೋಟೆಕ್ಕಾರು ಶ್ರೀಧರ ರೈ(ಮೃದಂಗ) ಹಿಮ್ಮೇಳದಲ್ಲಿ ಸಹಕರಿಸುವರು.
ಮಧೂರು: ಡಾ.ಉಪ್ಪಂಗಳ ಶಂಕರನಾರಾಯಣ ಭಟ್ ಅವರ `ಕಾಸರಗೋಡು ತಾಲೂಕಿನ ಶಾಲೆಗಳ ಇತಿಹಾಸ' ಮತ್ತು `ಕಾಸರಗೋಡಿನ ಕನರ್ಾಟಕ - ಹಿಂದುಸ್ತಾನಿ ಸಂಗೀತಗಾರರು' ಎಂಬ ಎರಡು ಗ್ರಂಥಗಳ ಲೋಕಾರ್ಪಣೆ ಸಮಾರಂಭ ಮಾ.11 ಬೆಳಗ್ಗೆ 9.30 ರಿಂದ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸುವರು. `ಕಾಸರಗೋಡು ತಾಲೂಕಿನ ಶಾಲೆಗಳ ಇತಿಹಾಸ' ಕೃತಿಯನ್ನು ಸಾಹಿತ್ಯ ಶಿರೋಮಣಿ, ವೇದಾಂತ ವಿದ್ವಾನ್ ಡಾ.ಬಳ್ಳಪದವು ಮಾಧವ ಉಪಾಧ್ಯಾಯ ಮತ್ತು `ಕಾಸರಗೋಡಿನ ಕನರ್ಾಟಕ - ಹಿಂದುಸ್ತಾನಿ ಸಂಗೀತಗಾರರು' ಕೃತಿಯನ್ನು ಅಗಲ್ಪಾಡಿ ಶ್ರೀ ಅನ್ನಪೂಣರ್ೇಶ್ವರೀ ಹೈಸ್ಕೂಲ್ನ ನಿವೃತ್ತ ಮುಖ್ಯೋಪಾಧ್ಯಾಯ ಮವ್ವಾರು ಪುರುಷೋತ್ತಮ ಭಟ್ ಅವರು ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ರಂಗ ನಿದರ್ೇಶಕ ಕಾಸರಗೋಡು ಚಿನ್ನಾ, ನಿವೃತ್ತ ಉನ್ನತ ವಿದ್ಯಾಭ್ಯಾಸ ಉಪನಿದರ್ೇಶಕ ಪ್ರೊ.ಪಿ.ಟಿ.ಗೋವಿಂದನ್ ನಂಬ್ಯಾರ್ ಭಾಗವಹಿಸುವರು.
ಕಲ್ಲೂರು ನಾಗೇಶ್ ಪ್ರಕಾಶಕರ ಮತ್ತು ಡಾ.ಉಪ್ಪಂಗಳ ಶಂಕರನಾರಾಯಣ ಭಟ್ ಗ್ರಂಥಕರ್ತರ ಮಾತುಗಳನ್ನಾಡುವರು. ಇದೇ ಸಂದರ್ಭದಲ್ಲಿ ವಿದ್ವಾನ್ ಆಲಂಗಾರು ಲಕ್ಷ್ಮೀನಾರಾಯಣ ಭಟ್, ಸುಲೋಚನಾ ಎಸ್. ಭಟ್ ಮಾತನಾಡುವರು. ಡಾ.ಕೆ.ಕಮಲಾಕ್ಷ ಉಪಸ್ಥಿತರಿರುವರು.
ಅಪರಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಉಪ್ಪಂಗಳ ಶ್ಯಾಮ ಭಟ್ ಅವರಿಂದ ಕೊಳಲು ವಾದನ ನಡೆಯಲಿದೆ. ಉಂಡೆಮನೆ ನಾರಾಯಣ ಶರ್ಮ (ಪಿಟೀಲು) ಮತ್ತು ಉದಯ ಕಂಬಾರು(ಮೃದಂಗ) ಹಿಮ್ಮೇಳದಲ್ಲಿ ಸಹಕರಿಸುವರು. ಅಪರಾಹ್ನ 3 ರಿಂದ ಹೊನ್ನೇಸರ ಮಾಧವ ಭಟ್ರಿಂದ ಕನರ್ಾಟಕ ಸಂಗೀತ ಕಚೇರಿ ನಡೆಯಲಿದೆ. ವೇಣುಗೋಪಾಲ ಶ್ಯಾನಭೋಗ್ (ಪಿಟೀಲು) ಮತ್ತು ಕೋಟೆಕ್ಕಾರು ಶ್ರೀಧರ ರೈ(ಮೃದಂಗ) ಹಿಮ್ಮೇಳದಲ್ಲಿ ಸಹಕರಿಸುವರು.