HEALTH TIPS

No title

             ಬಾನುಲಿ ಸ್ವರಮಂಟಮೆಯಲ್ಲಿ ಯುವ ಸಾಹಿತಿ ರಾಜಶ್ರೀಯವರ ತುಳು ಕಾದಂಬರಿಗಳ ವಿಮಶರ್ೆ
   ಕಾಸರಗೋಡು: ಮಂಗಳೂರು ಆಕಾಶವಾಣಿಯ ತುಳು ವಿಭಾಗದಿಂದ ನೇರ ಪ್ರಸಾರಗೊಳ್ಳುವ ಸ್ವರಮಂಟಮೆ ಕಾರ್ಯಕ್ರಮದಲ್ಲಿ ಈ ಬಾರಿ ತುಳುವಿನ ಯುವ ಕಾದಂಬರಿಗಾತರ್ಿ ರಾಜಶ್ರೀ ತಾರಾನಾಥ ರೈ ಅವರ ಬಜಿಲಜ್ಜೆ ಮತ್ತು ಚವಳೊ ಕೃತಿಗಳ ವಿಮಶರ್ೆ ಪ್ರಸಾರಗೊಂಡಿತು.
   ಹಿರಿಯ ಕವಿಗಳು ಪತ್ರಕರ್ತರು ಆದ ಮಲಾರ್ ಜಯರಾಮ ರೈ ಕೃತಿ ಅನಾವರಣಗೊಳಿಸಿ ಮಾತನಾಡಿದರು.
ಆಶಾ ದಿಲೀಪ್ ಸುಳ್ಯಮೆ ಅವರು ಚವಳ ಕಥಾ ಸಂಕಲನ ಮತ್ತು ಶ್ರೀನಿವಾಸ ಆಳ್ವ ಕಳತ್ತೂರು ಬಜಿಲಜ್ಜೆ ಕಾದಂಬರಿಯನ್ನು ವಿಮಶರ್ೆ ನಡೆಸಿದರು. ತುಳು ಕನ್ನಡ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮಾತನಾಡಿದರು. ಕಾದಂಬರಿಗಾತರ್ಿ ರಾಜಶ್ರೀ ತಾರಾನಾಥ ರೈ ತಮ್ಮ ಅನಿಸಿಕೆಯನ್ನು ಮುಕ್ತವಾಗಿ ಹಂಚಿಕೊಂಡರು. ನಂತರ ಅಮ್ಮನ ಕೃತಿಯ ಬಗ್ಗೆ ಕವಯಿತ್ರಿ ಸನ್ನಿಧಿ ವಿವರಣೆ ನೀಡಿದ್ದು ವಿಶೇಷವಾಗಿತ್ತು. ಕಾತರ್ಿಕೇಯ ಕ್ರಿಯೇಶನ್ಸ್ ಪರವಾಗಿ ತಾರಾನಾಥ ರೈ ಮಾತನಾಡಿ ಸ್ವರ ಮಂಟಮೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ತುಳು ವಿಭಾಗದ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಕಾರ್ಯಕ್ರಮದ ಸಮರ್ಥ ನಿರ್ವಹಣೆಯನ್ನು ಮಾಡಿದರು. ಈ ಬಾರಿಯ ಸ್ವರಮಂಟಮೆ ಸಂಪೂರ್ಣ ಕಾಸರಗೋಡಿನ ತುಳು ಸಾಹಿತಿಗಳಿಂದ ತುಂಬಿದ್ದು ಸೊಗಸಾಗಿ ಮೂಡಿಬಂತು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries