HEALTH TIPS

No title

              ಕಮ್ಯುನಿಸ್ಟರ ಅಂತಿಮ ಶವ ಯಾತ್ರೆಗೆ ಕೇರಳ ಸಜ್ಜಾಗಿದೆ- ನ್ಯಾಯವಾದಿ ಕೆ. ಶ್ರೀಕಾಂತ್
   ಉಪ್ಪಳ: ದೇಶದಲ್ಲಿ ಶೈಶವ ಅವಸ್ಥೆಯಲ್ಲಿರುವ ಕಮ್ಯುನಿಸ್ಟ್ನ ಅಂತಿಮ ಯಾತ್ರೆಗೆ ಕೇರಳ ಸಜ್ಜಾಗಿದೆ. ಬಂಗಾಳ, ತ್ರಿಪುರದಲ್ಲಿಯೂ ಕಮ್ಯುನಿಸ್ಟ್ ನಾಶವಾಗಿಯಾಯಿತು. ಇನ್ನು ಕೇರಳದಲ್ಲಿ ಇದು ಪುರವರ್ತನೆಯಾಗಲಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು.
   ಪೈವಳಿಕೆ ಸಮೀಪದ ಬಾಯರುಪದವಿನಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಕೇರಳ ಎಡರಂಗ ಸರಕಾರದ ಜನದ್ರೋಹ ನೀತಿ, ಕೊಲೆ ರಾಜಕೀಯ, ಕೃಷಿ, ವಿದ್ಯುತ್,  ಅರೋಗ್ಯ ರಂಗದಲ್ಲಿ, ಅವಾಸ್ ಯೋಜನೆ ಜಾರಿಗೆ ತರದ ಕೇರಳ ಸರಕಾರದ ವಿರುದ್ಧ ನಡೆಸಿದ್ದ ಅಹೋರಾತ್ರಿ ಧರಣಿಯಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
    ಜಿಲ್ಲಾ ಕಾರ್ಯದಶರ್ಿ ಪಿ ವೆಲಾಯುಧನ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖಂಡರಾದ  ರವೀಶ ತಂತ್ರಿ ಕುಂಟಾರು,  ಬಾಲಕೃಷ್ಣ ಶೆಟ್ಟಿ, ಸುರೇಶ ಶೆಟ್ಟಿ ಪಿ., ನ್ಯಾಯವಾದಿ ನವೀನ್ ರಾಜ್, ಅಬ್ದುಲ್ಲಾ ಪಿಎಂ, ಹರಿಶ್ಚಂದ್ರ ಮಂಜೇಶ್ವರ, ಸರೋಜಾ ಆರ್.ಬಲ್ಲಾಳ್, ಜಯಂತಿ ಶೆಟ್ಟಿ ,ಹರಿಶ್ಚಂದ್ರ, ಧನರಾಜ್ ಉಪಸ್ಥಿತರಿದ್ದರು.
  ಸಮಾರೋಪ:
  ಆಹೋರಾತ್ರಿ ಧರಣಿ ಭಾನುವಾರ ಸಂಜೆ ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು ಅಧ್ಯಕ್ಷತೆಯಲ್ಲಿ ಅಮಾರೋಪಗೊಂಡಿತು. ಯುವಮೋಚರ್ಾ ರಾಜ್ಯ ಸಮಿತಿ ಸದಸ್ಯ ಪಿ.ಆರ್.ಸುನಿಲ್ ಸಮಾರೋಪ ಭಾಷಣ ಮಾಡಿದರು. ಮುಖಂಡರಾದ ಸರೋಜಾ ಆರ್ ಬಲ್ಲಾಳ್, ಎ.ಕೆ.ಕಯ್ಯಾರ್, ಅಬ್ದುಲ್ಲ ಪಿಎಂ, ಮುರಳೀಧರ ಯಾದವ್, ಆದಶರ್್ ಬಿ.ಎಂ, ರೂಪವಾಣಿ ಆರ್ ಭಟ್, ಪುಷ್ಪಲಕ್ಷ್ಮೀ, ಹರಿಶ್ಚಂದ್ರ ಮಂಜೇಶ್ವರ, ಯಾದವ ಬಡಾಜೆ, ಸದಾಶಿವ ವಕರ್ಾಡಿ, ಪ್ರಸಾದ್ ರೈ ಕಯ್ಯಾರ್, ಧನಂಜಯ ಮಧೂರು, ಸುಮಿತ್ರಾಜ್ ಸಹಿತ ಬಿಜೆಪಿ, ಯುವಮೋಚರ್ಾಗಳ ಪಂಚಾಯತು ಸಮಿತಿಗಳ ನೇತಾರರು, ಕಾರ್ಯಕರ್ತರು ಭಾಗವಹಿಸಿದ್ದರು. ಆದಶರ್್ ಬಿ.ಎಂ.ಸ್ವಾಗತಿಸಿ, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ವಂದಿಸಿದರು. ದೇವೀಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries