HEALTH TIPS

No title

            ರಾಷ್ಟ್ರಪತಿಗಳಿಂದ ಕಟಕ್ ಮಾತು-ನ್ಯಾಯವಾದಿಗಳು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು: ರಾಮನಾಥ್ ಕೋವಿಂದ್
    ಕಟಕ್(ಒಡಿಶಾ): ನ್ಯಾಯವಾದಿಗಳು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದ್ದಾರೆ.
ಕಟಕ್ ನಲ್ಲಿ ನ್ಯಾಷನಲ್ ಲಾ ಯೂನಿವಸರ್ಿಟಿಯ 3ನೇ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾನೂನು ಸೇವೆಯ ಅವಕಾಶ ವಿಸ್ತಾರವಾಗಿದ್ದು ಬಹು ವಿಧದ ಕ್ಷೇತ್ರಗಳಲ್ಲಿ ಇಂದು ಕೆಲಸ ಮಾಡಲಾಗುತ್ತದೆ ಮತ್ತು ಅಂತಾರಾಷ್ಟ್ರೀಯ ರಾಯಭಾರ ಸೇರಿದಂತೆ ವಾಣಿಜ್ಯ ಮತ್ತು ವ್ಯಾಪಾರ ಕ್ಷೇತ್ರಗಳಿಗೆ ಸಹ ವಕೀಲ ವೃತ್ತಿ ವಿಸ್ತರಣೆಯಾಗಿದೆ ಎಂದರು.
ಸಮಾಜದ ಕೆಳಸ್ತರದ ಮತ್ತು ಧ್ವನಿಯಿಲ್ಲದವರ ಏಳಿಗೆಗೆ ನ್ಯಾಯವಾದಿಗಳು ಸಹಕಾರ ನೀಡಬೇಕು. ಏಕೆಂದರೆ ಕೆಳಸ್ತರದವರಿಗೆ ಕಾನೂನು ವೆಚ್ಚ ಭರಿಸಲು ಸಾಧ್ಯವಾಗುವುದಿಲ್ಲ ಎಂದರು.
ಸಮಾರಂಭದಲ್ಲಿ ಮಾತನಾಡಿದ ಸುಪ್ರೀಂ ಕೋಟರ್್ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ, ದೇಶದ ಕೋಟ್ಯಂತರ ಜನರ ನ್ಯಾಯ ಮತ್ತು ಸಮಾನತೆಗೆ ಕಾನೂನು ವಿದ್ಯಾಥರ್ಿಗಳು ಕೆಲಸ ಮಾಡಬೇಕು ಎಂದು ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries