HEALTH TIPS

No title

                     ರಾಷ್ಟ್ರಗೀತೆಯಲ್ಲಿ 'ಸಿಂಧು' ತೆಗೆದು 'ಈಶಾನ್ಯ' ಸೇರಿಸುವಂತೆ ರಾಜ್ಯಸಭೆಯಲ್ಲಿ ನಿರ್ಣಯ ಮಂಡನೆ
    ನವದೆಹಲಿ: ರಾಷ್ಟ್ರಗೀತೆಯಲ್ಲಿ ಸಿಂಧು ಪದವನ್ನು ತೆಗೆದು ಈಶಾನ್ಯ ವಲಯದ ಪದ ಬಳಸುವಂತೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸಂಸದ ರಿಪುನ್ ಬೊರಾ ರಾಜ್ಯಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದಾರೆ.
   ಸಿಂಧು ಪದ ಸಿಂಧು ಪ್ರಾಂತ್ಯವನ್ನು ಪ್ರತಿನಿಧಿಸುತ್ತದೆ. ಆದರೆ, ಅದು ಬಹಳ ಕಾಲದಿಂದಲೂ ಭಾರತದ ಭಾಗವಾಗಿದ್ದರೂ ಪಾಕಿಸ್ತಾನದಲ್ಲಿದೆ. ಆದ್ದರಿಂದ ಅದನ್ನು ತೆಗೆದುಹಾಕಿ, ಈಶಾನ್ಯ ವಲಯ ಪ್ರತಿನಿಧಿಸುವ ಪದ ಸೇರಿಸಬೇಕು, ಇದಕ್ಕಾಗಿ ರಾಷ್ಟ್ರ ಗೀತೆಗೆ ತಿದ್ದುಪಡಿ ಮಾಡಿ ಪದ ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.
   ಈಶಾನ್ಯ ಭಾರತದ ಪ್ರಮುಖ ಭಾಗವಾಗಿದ್ದರೂ ರಾಷ್ಟ್ರಗೀತೆಯಲ್ಲಿ ಸೇರದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಆದರೆ, ಪಾಕಿಸ್ತಾನದಲ್ಲಿರುವ ಸಿಂಧುವನ್ನು ಉಲ್ಲೇಖಿಸಿರುವುದು ದೇಶಕ್ಕೆ ಪ್ರತಿಕೂಲವಾಗಲಿದೆ ಎಂದು ಹೇಳಿದ್ದಾರೆ.
  ರಾಷ್ಟ್ರಗೀತೆ ಜನಗಣ ಮನದಲ್ಲಿನ ತಿದ್ದುಪಡಿ ಮಾಡುವ ಸಂಬಂಧ ಭಾರತ ಸಕರ್ಾರ ಕ್ರಮ ಕೈಗೊಳ್ಳಬಹುದೆಂದು ಸ್ವಾತಂತ್ರ್ಯ ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಹೇಳಿಕೆ ನೀಡಿದ್ದಾರೆ ಎಂದು  ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries