HEALTH TIPS

No title

            ಧಾಮರ್ಿಕ ಜ್ಞಾನದ ಉನ್ನತಿಯಿಂದ ಮಾನವ ಜೀವನ ಸಾರ್ಥಕ- ಒಡಿಯೂರು ಶ್ರೀ
   ಮಂಜೇಶ್ವರ:  ಮಾನವ ತನ್ನ ಸೇವಾ ಕೈಂಕರ್ಯದಿ0ದ ಹಾಗೂ ಧಾಮರ್ಿಕ ಜ್ಞಾನದ ಉನ್ನತಿಯಿಂದ ಜೀವನ ಸಾರ್ಥಕಗೊಳಿಸಬೇಕಾದ ಅಗತ್ಯ ಇದೆ ಎಂದು  ಓಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ತಿಳಿಸಿದರು.
   ಹೊಸಂಗಡಿ ಅಯ್ಯಪ್ಪ ಕ್ಷೇತ್ರ ದ ಪರಿಸರದಲ್ಲಿ ನಿಮರ್ಾಣಗೊಂಡಿರುವ ಜಗದ್ಗುರು ಶ್ರೀ ನಿತ್ಯಾನಂದ ಧ್ಯಾನ ಮಂದಿರವನ್ನು ಇತ್ತೀಚೆಗೆ  ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
   ಹೊಸಂಗಡಿ ಅಯ್ಯಪ್ಪ ಕ್ಷೇತ್ರ ಹಿಂದೂ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರ. ಸಂಘಟನೆ, ನೇತೃತ್ವ ಸೇವಾ ಮನೋಭಾವಗಳು ಇದ್ದಲ್ಲಿ ಗುರಿ ಮುಟ್ಟಲು ಸಾಧ್ಯ. ಅದನ್ನು ಶ್ರೀ ಕ್ಷೆತ್ರದಲ್ಲಿ  ಯುವಕರು ಹಾಗೂ ಸಮಿತಿ ಮಾಡಿ ತೋರಿಸಿದೆ ಎಂದು ಸ್ವಾಮೀಜಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
    ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗನಂದ ಸರಸ್ವತೀ ಸ್ವಾಮೀಜಿ  ಉಪಸ್ಥಿತರಿದ್ದರು.
   ಗೌರವಾದ್ಯಕ್ಷ ರೋಹಿದಾಸ್ ಎಸ್ ಬಂಗೇರ ಧ್ಯಾನ ಮಂದಿರ ಸಭಾಂಗಣ ಉದ್ಘಾಟಿಸಿದರು .ಕ್ಷೇತ್ರ ಸಮಿತಿ ಅಧ್ಯಕ್ಷ ಪದ್ಮನಾಭ ಕಡಪ್ಪರ ರಿಗೆ ಹೊಸಂಗಡಿ ನಾಗರಿಕರ ಪರವಾಗಿ ಗೌರವಿಸಲಾಯಿತು.
  ತೀಯ ಸಮಾಜ ಅಧ್ಯಕ್ಷ ಚಂದ್ರಶೇಖರ್ ಬೆಳ್ಚಡ , ಲಕ್ಷ್ಮಣ್ ಸಾಲ್ಯಾನ್, ಶ್ರೀಧರ್ ಮುಟ್ಟ, ಉಮೇಶ್ ಬಿಎಂ, ಮೀರಾ ಆಳ್ವ, ಮಾಲತಿ ಸುರೇಶ್,  ಉಪಸ್ಥಿತರಿದ್ದರು.
    ಕ್ಷೇತ್ರದ ಪ್ರಧಾನ ಕಾರ್ಯದಶರ್ಿ ಆದಶರ್್ ಬಿಎಂ. ಸ್ವಾಗತಿಸಿ, ಹರೀಶ್.ಶೆಟ್ಟಿ ಮಾಡ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries