HEALTH TIPS

No title

                ನಾಳೆಯಿಂದ ಮತ್ತೆ ಹಕ್ಕಿಗಾಗಿ ಹೋರಾಟ-ಮಲಯಾಳ ಕಡ್ಡಾಯದ ವಿರುದ್ಧ ನಾಳೆಯಿಂದ ಕನ್ನಡಿಗರ ಪ್ರತಿಭಟನಾ ಸಪ್ತಾಹ
   ಕಾಸರಗೋಡು: ಜೂನ್1ರಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳ ಭಾಷೆ ಕಲಿಕೆ ಕಡ್ಡಾಯಗೊಳಿಸುವ ಶಿಕ್ಷಣ ಇಲಾಖೆಯ ತೀಮರ್ಾನದ ವಿರುದ್ಧ ಕಾಸರಗೋಡಿನಲ್ಲಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಮೇ 23 ರಿಂದ ಪ್ರತಿಭಟನಾ ಸಪ್ತಾಹ ಆರಂಭವಾಗಲಿದೆ.
    ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಪ್ರತಿಭಟನೆಯನ್ನು ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ಕನ್ನಡ ಹೋರಾಟ ಸಮಿತಿ ಮುಖಂಡರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಒಂದು ವಾರ ಕಾಲ ಬೆಳಗ್ಗಿನಿಂದ ಸಂಜೆಯ ತನಕ ಪ್ರತಿಭಟನೆ ನಡೆಯಲಿದೆ.
    ಏನಂತಾರೆ:
    ಕೇರಳ ಸರಕಾರ ಕಾಸರಗೋಡಿನಲ್ಲಿ ಕನ್ನಡಿಗರಿಗೆ ಮಲಯಾಳ ಭಾಷೆಯನ್ನು ಕಡ್ಡಾಯವಾಗಿ ಹೆಚ್ಚುವರಿಯಾಗಿ ಕಲಿಸುವಂತೆ ಹೊರಡಿಸಿದ ಆದೇಶ ನ್ಯಾಯಬಾಹಿರ, ಸಂವಿಧಾನ ವಿರೋಧಿ ತೀಮರ್ಾನವಾಗಿದೆ. ಈ ಆದೇಶವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು, ಈ ಮೂಲಕ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು ಪ್ರತಿಭಟನಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು.
        ನ್ಯಾಯವಾದಿ ಮುರಳೀಧರ ಬಳ್ಳುಕುರಾಯ
      ಅಧ್ಯಕ್ಷರು,  ಕನರ್ಾಟಕ ಸಮಿತಿ ಕಾಸರಗೋಡು 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries