HEALTH TIPS

No title

           ಮೇ 11-13 : ಕಣ್ಣೂರುಗುತ್ತು ಶ್ರೀ ಧೂಮಾವತೀ, ಬೀಣರ್ಾಳ್ವ ಮತ್ತು ಪರಿವಾರ ದೈವಗಳ ನೇಮ
    ಕಾಸರಗೋಡು: ಕುಂಬಳೆ ಅನಂತಪುರ ಸಮೀಪದ ಕಣ್ಣೂರು ಗುತ್ತು ತರವಾಡು ಮನೆಯಲ್ಲಿ ಮೇ 11 ರಿಂದ 13 ರ ವರೆಗೆ ಶ್ರೀ ಧೂಮಾವತೀ, ಬೀಣರ್ಾಳ್ವ ಮತ್ತು ಪರಿವಾರ ದೈವಗಳ ನೇಮವು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
   ಮೇ 11 ರಂದು ರಾತ್ರಿ 7 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪಾತರ್ಿಸುಬ್ಬ ಕಲಾಕ್ಷೇತ್ರದ ಕಾರ್ಯದಶರ್ಿ ಸತೀಶ ಅಡಪ ಸಂಕಬೈಲು, ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ ಶಂಕರ ರೈ ಮಾಸ್ತರ್ ಮಂಟಪ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮಾರಂಭದಲ್ಲಿ ಕಣ್ಣೂರು ಗುತ್ತಿನ ಹಿರಿಯ ಸದಸ್ಯರಾದ ನಾರಾಯಣ ರೈ ಕಡುಂಬು ಅವರನ್ನು ಸಮ್ಮಾನಿಸಿ ಗೌರವಿಸಲಾಗುವುದು.
ರಾತ್ರಿ 8 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಣ್ಣೂರುಗುತ್ತು ಕುಟುಂಬದ ಪ್ರತಿಭೆಗಳಿಂದ ನೃತ್ಯ ವೈಭವ ನಡೆಯಲಿರುವುದು. ಬಳಿಕ ಮಾಸ್ಟರ್ಸ್ ಮೀಯಪದವು ಇವರಿಂದ ನವದುರ್ಗ ದೃಶ್ಯ ರೂಪಕ ಪ್ರದರ್ಶನ ವಿರುವುದು. ಮೇ 12 ರಂದು ಶನಿವಾರ ಬೆಳಗ್ಗೆ ಗಣಪತಿ ಹೋಮ, ಬಳಿಕ ನಾಗತಂಬಿಲ, 11 ಗಂಟೆಗೆ ಹರಿಸೇವೆ, ಅಪರಾಹ್ನ 3 ರಿಂದ ಶಂನಾಡಿಗ ಕುಂಬಳೆ ಅವರಿಂದ ಹರಿಕಥಾ ಸತ್ಸಂಗ, ಸಂಜೆ 6 ಗಂಟೆಗೆ ಕಣ್ಣೂರು ಮಾಳ್ಯದಿಂದ ಶ್ರೀ ಬೀಣರ್ಾಳ್ವ ದೈವದ ಮತ್ತು ಪಂಜುಲರ್ಿ ದೈವದ ಭಂಡಾರ ತೆಗೆಯುವುದು. 8 ಗಂಟೆಗೆ ಕೊರತಿ ದೈವದ ಕೋಲ, ರಾತ್ರಿ 10 ಗಂಟೆಗೆ ಕಲ್ಲುಟರ್ಿ, ಪಂಜುಲರ್ಿ ದೈವಗಳ ಕೋಲ ನಡೆಯುವುದು.
   ಮೇ 13 ರಂದು ಭಾನುವಾರ ಬೆಳಗ್ಗೆ 8.30 ಕ್ಕೆ ಶ್ರೀ ಬೀಣರ್ಾಳ್ವ ದೈವದ ನೇಮ, 11.30 ಕ್ಕೆ ಶ್ರೀ ಧೂಮಾವತೀ ದೈವದ ನೇಮ, ಅಪರಾಹ್ನ 3.30 ಕ್ಕೆ ಚೌಕಾರು ಮಂತ್ರವಾದ ಗುಳಿಗ ದೈವದ ಕೋಲ ಜರಗಲಿರುವುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries