HEALTH TIPS

No title

                  ಸರಕಾರದ ದ್ವಿತೀಯ ವಾಷರ್ಿಕೋತ್ಸವ:
                 ಮೇ 12ರಂದು ಸಿ.ಎಂ.ರಿಂದ ಉದ್ಘಾಟನೆ
   ಕಾಸರಗೋಡು: ರಾಜ್ಯ ಸರಕಾರದ ದ್ವಿತೀಯ ವಾಷರ್ಿಕೋತ್ಸವದ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆಯನ್ನು  ಮೇ 12ರಂದು ಸಂಜೆ 5.30ಕ್ಕೆ ಕಾಞಂಗಾಡು ಚೈತನ್ಯ ಸಭಾಂಗಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸುವರು. ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ವಿವಿಧ ಸವಲತ್ತುಗಳ ವಿತರಣೆಯನ್ನು  ಮುಖ್ಯಮಂತ್ರಿ ಈ ಸಂದರ್ಭದಲ್ಲಿ ನಿರ್ವಹಿಸುವರು.
    ಈ ಕುರಿತು ಕಾಸರಗೋಡು ಕಲೆಕ್ಟರೇಟ್ನಲ್ಲಿ  ಜರಗಿದ ಸಮಾಲೋಚನಾ ಸಭೆಯಲ್ಲಿ  ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಅಧ್ಯಕ್ಷತೆ ವಹಿಸಿದ್ದರು. ಉದುಮ ಶಾಸಕ ಕೆ.ಕುಂಞಿರಾಮನ್, ಎಡಿಎಂ ಎನ್.ದೇವಿದಾಸ್, ವಿವಿಧ ಇಲಾಖೆಗಳ ಮುಖ್ಯಸ್ಥರು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಹಿತ ಇತರರು ಉಪಸ್ಥಿತರಿದ್ದರು. ಜಿಲ್ಲಾ  ವಾತರ್ಾಧಿಕಾರಿ ಇ.ವಿ.ಸುಗತನ್ ವಾಷರ್ಿಕ ಕಾರ್ಯಕ್ರಮಗಳನ್ನು  ವಿವರಿಸಿದರು.
    ಕೇರಳ ಸರಕಾರದ ದ್ವಿತೀಯ ವಾಷರ್ಿಕೋತ್ಸವದ ಅಂಗವಾಗಿ ಕಾಂಞಂಗಾಡು ಆಲಾಮಿಪಳ್ಳಿ ಬಸ್ ನಿಲ್ದಾಣದ ಪರಿಸರದಲ್ಲಿ  ಮೇ 19ರಿಂದ 25ರ ವರೆಗೆ ನಡೆಯಲಿರುವ ಪ್ರದರ್ಶನ ಮತ್ತು  ಮಾರಾಟ ಮೇಳದ ಪ್ರಾದೇಶಿಕ ಸ್ವಾಗತ ಸಮಿತಿಯ ರಚನಾ ಸಭೆಯು ಕಾಞಂಗಾಡು ಟೌನ್ಹಾಲ್ನಲ್ಲಿ  ಜರಗಿತು. ನಾನಾ ಸಂಘಟನೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಮುಂತಾದವರು ಭಾವಹಿಸಿದ್ದರು. ನಗರಸಭಾ ಅಧ್ಯಕ್ಷ  ವಿ.ವಿ.ರಮೇಶನ್, ಎಡಿಎಂ ಎನ್.ದೇವಿದಾಸ್ ಮೊದಲಾದವರು ಮಾತನಾಡಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries