HEALTH TIPS

No title

                ಮೇ 13 ರಿಂದ ರಂಗಚಿನ್ನಾರಿ ಅಭಿಯಾನ
                     ನೆನೆ ನೆನೆ ಕನ್ನಡ ಗಾನ
     ಕಾಸರಗೋಡು: ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಹಳ್ಳಿಯೆಡೆಗೆ `ರಂಗಚಿನ್ನಾರಿ' ಅಭಿಯಾನ ಭಕ್ತಿ, ಭಾವ ಜನಪದ ಗೀತೆಗಳ ಝೇಂಕಾರ `ನೆನೆ..ನೆನೆ..ಕನ್ನಡ ಗಾನ' ಕಾರ್ಯಕ್ರಮ ಮೇ 13 ರಿಂದ 19 ರ ವರೆಗೆ ವಿವಿಧ ಪ್ರದೇಶಗಳನ್ನು ಕೇಂದ್ರೀಕರಿಸಿ ನಡೆಯಲಿದೆ.
   ಮೇ 13 ರಂದು ಸಂಜೆ 5.30 ಕ್ಕೆ ಉಪ್ಪಳ ತರುಣ ಕಲಾವೃಂದ ಐಲ ಇದರ ಸಹಯೋಗದೊಂದಿಗೆ ಐಲ ಶ್ರೀ ದುಗರ್ಾಪರಮೇಶ್ವರಿ ಕಲಾಭವನದಲ್ಲಿ ನಡೆಯಲಿದೆ. ಖ್ಯಾತ ಉದ್ಯಮಿ ಬಿ.ಎಂ.ಮೋಹನ್ ಉದ್ಘಾಟಿಸುವರು. 14 ರಂದು ಭಾರತೀ ವಿದ್ಯಾಪೀಠ ಬದಿಯಡ್ಕ ಇದರ ಸಹಯೋಗದೊಂದಿಗೆ ಸಂಜೆ 5.30 ಕ್ಕೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಶಾಲಾ ಆವರಣದಲ್ಲಿ ನಡೆಯಲಿದೆ. ಕನರ್ಾಟಕ ಬ್ಯಾಂಕ್ ನೀಚರ್ಾಲು ಶಾಖೆ ಪ್ರಬಂಧಕ ಶ್ರೀಶ ಕುಮಾರ ಉದ್ಘಾಟಿಸುವರು.
   ಮೇ 15 ರಂದು ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಉಪ್ಪಳ ಇದರ ಸಹಯೋಗದೊಂದಿಗೆ ಸಂಜೆ 6 ಕ್ಕೆ ಶ್ರೀ ನಿತ್ಯಾನಂದ ಯೋಗಾಶ್ರಮ ಗಾಯತ್ರೀ ಮಂಟಪದಲ್ಲಿ ನಡೆಯಲಿದ್ದು, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸುವರು. 16 ರಂದು ಸಂಜೆ 6 ಗಂಟೆಗೆ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಸಹಯೋಗದೊಂದಿಗೆ ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆಯಲಿದೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಡಾ.ಶಿವಕುಮಾರ್ ಉದ್ಘಾಟಿಸುವರು.
     ಮೇ 17 ರಂದು ಶ್ರೀ ದುಗರ್ಾಪರಮೇಶ್ವರಿ ಭಜನಾ ಸಂಘ ಏತಡ್ಕ ಇದರ ಸಹಯೋಗದೊಂದಿಗೆ ಸಂಜೆ 6 ಕ್ಕೆ ಶ್ರೀ ದುಗರ್ಾಪರಮೇಶ್ವರಿ ಭಜನಾ ಮಂದಿರದ ಆವರಣದಲ್ಲಿ ನಡೆಯಲಿದೆ. ಏತಡ್ಕ ಶ್ರೀ ದುಗರ್ಾಪರಮೇಶ್ವರಿ ಭಜನಾ ಸಂಘದ ಅಧ್ಯಕ್ಷ ಬಾಲಕೃಷ್ಣ ಕೆ.ಕೆ. ಉದ್ಘಾಟಿಸುವರು. 18 ರಂದು ಶ್ರೀ ಪುರಂದರದಾಸ ಆರಾಧನೋತ್ಸವ ಸಂಘ ಕಾಟುಕುಕ್ಕೆ ಇದರ ಸಹಯೋಗದೊಂದಿಗೆ ಸಂಜೆ 6 ಕ್ಕೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ಸಭಾಂಗಣದಲ್ಲಿ ನಡೆಯಲಿದೆ. ಶ್ರೀ ಸುಬ್ರಾಯ ಮಹಿಳಾ ಮಂಡಳಿಯ ಅಧ್ಯಕ್ಷೆ ವಾಣಿ ಗೋಪಾಲಕೃಷ್ಣ ಶೆಟ್ಟಿ ಉದ್ಘಾಟಿಸುವರು. 19 ರಂದು ಸಂಜೆ 6 ಕ್ಕೆ ಮೀಯಪದವು ಎಸ್ವಿವಿಎಚ್ಎಸ್ಎಸ್ ಇದರ ವಿದ್ಯಾಥರ್ಿ ವೃಂದ ಹಾಗೂ ಪ್ರಾಧ್ಯಾಪಕ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಮೀಯಪದವಿನಲ್ಲಿ ನಡೆಯಲಿದೆ. ಕನರ್ಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನ್ಯಾಯವಾದಿ ಎಂ.ದಾಮೋದರ ಶೆಟ್ಟಿ ಉದ್ಘಾಟಿಸುವರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries