HEALTH TIPS

No title

              ಚೆಂಗನೂರು ಮಾದರಿಯಲ್ಲಿ ಉತ್ತರದ ಮೂರು ರೈಲು ನಿಲ್ದಾಣಗಳ ಅಭಿವೃದ್ಧಿಗೆ ಸಚಿವ ಕಣ್ಣತ್ತಾನಂಗೆ ಸಿಪಿಐ ಮನವಿ
   ಮಂಜೇಶ್ವರ: ಉಪಚುನಾವಣೆ ಘೋಷಿಸುವ ಮುನ್ನ ಚುನಾವಣೆಯಲ್ಲಿ ಪ್ರಭಾವ ಬೀರುವ ಚೆಂಗನೂರು ರೈಲು ನಿಲ್ದಾಣ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಅಲಾನ್ಸೋ ಕಣ್ಣತ್ತಾನಂ 15 ಕೋಟಿ ರೂಪಾಯಿಯನ್ನು ಮಂಜೂರು ಮಾಡಿಸಿದ್ದಾರೆ. ಬಜೆಟ್ನಲ್ಲಿ ತೋರಿಸದ ಅದ್ಭುತ ಹೊಸ ನೀತಿಯಾದ ಇಂತಹ ವ್ಯವಸ್ಥೆ ವಿಶಿಷ್ಟವಾದುದು. ಕೇರಳದ ರೈಲ್ವೇ ಅಭಿವೃದ್ಧಿಗೆ ಪ್ರವಾಸೋದ್ಯಮ ಸಚಿವರು ತೋರಿಸುತ್ತಿರುವ ಕಾಳಜಿ ಸ್ವಾಗತಾರ್ಹ. ಅದೇ ರೀತಿ ಹಳೆಯ ಕಾಲದಿಂದಲೂ ಯಾವುದೇ ಅಭಿವೃದ್ಧಿಯಿಲ್ಲದೆ ನೆಲೆ ನಿಂತಿರುವ ಕೇರಳದ ಉತ್ತರದ ಮೂರು ರೈಲು ನಿಲ್ದಾಣಗಳಾದ ಮಂಜೇಶ್ವರ, ಉಪ್ಪಳ ಮತ್ತು ಕುಂಬಳೆಗೆ ಪ್ರತ್ಯೇಕ ಪ್ಯಾಕೇಜ್ ಮಂಜೂರು ಮಾಡುವಂತೆ ಸಚಿವ ಕಣ್ಣತ್ತಾನಂ ಮುತುವಜರ್ಿ ವಹಿಸಬೇಕೆಂದು ಸಿಪಿಐ ಜಿಲ್ಲಾ ಸಮಿತಿ ಸದಸ್ಯರೂ, ಎಲ್ಡಿಎಫ್ ಮಂಜೇಶ್ವರ ಮಂಡಲ ಸಂಚಾಲಕರೂ ಆಗಿರುವ ಬಿ.ವಿ.ರಾಜನ್ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
  ಕೇರಳಕ್ಕೆ ಮಂಗಳೂರು ಭಾಗದಿಂದ ರೈಲು ಪ್ರವೇಶಿಸುವಾಗ ದೊರಕುವ ಮೊದಲ ಮೂರು ರೈಲು ನಿಲ್ದಾಣಗಳೆಂಬ ಹೆಸರು ಮಂಜೇಶ್ವರ, ಉಪ್ಪಳ, ಕುಂಬಳೆಗಳಿಗಿದೆ. ಆದರೆ ಉತ್ತರದ ಇತರ ರೈಲು ನಿಲ್ದಾಣಗಳಾದ ತ್ರಿಕ್ಕರಿಪುರ, ಚೆರ್ವತ್ತೂರು, ನೀಲೇಶ್ವರವನ್ನು ಹೋಲಿಸಿ ನೋಡಿದರೆ ಇಲ್ಲಿ ಎಷ್ಟು ಅಭಿವೃದ್ಧಿ ನಡೆದಿದೆ ಎಂಬುದು ಮನದಟ್ಟಾಗುವುದು. ಆದ್ದರಿಂದ ಈ ಮೂರು ರೈಲು ನಿಲ್ದಾಣಗಳ ಅಭಿವೃದ್ಧಿಗೆ ಪ್ರತ್ಯೇಕ ಪ್ಯಾಕೇಜ್ ಕಾಲಕ್ಕನುಗುಣವಾಗಿ ಜಾರಿಗೊಳಿಸಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries