HEALTH TIPS

No title

                 ಮಲಯಾಳ ಕಲಿಕೆ ಕಡ್ಡಾಯ ಬೇಡ: ಕೇರಳ ಸಿಎಂಗೆ ಮನವಿ
     ಬದಿಯಡ್ಕ: 2018-19ನೇ ಶೈಕ್ಷಣಿಕ ವರ್ಷದಿಂದ ಕನ್ನಡ ಮಾಧ್ಯಮ ಶಾಲೆಗಳ ಸಹಿತ ಕೇರಳದ 1ರಿಂದ 10ನೇ ತರಗತಿ ವರೆಗಿನ ಶಾಲೆಗಳಲ್ಲಿ  ಮಲಯಾಳ ಭಾಷೆ ಕಲಿಕೆಯನ್ನು  ಕಡ್ಡಾಯಗೊಳಿಸುವುದನ್ನು  ಪ್ರಬಲವಾಗಿ ವಿರೋಧಿಸಿ ಕನರ್ಾಟಕ ಗಮಕ ಕಲಾ ಪರಿಷತ್ನ ಕೇರಳ ಗಡಿನಾಡ ಘಟಕದ ಅಧ್ಯಕ್ಷ  ಟಿ.ಶಂಕರನಾರಾಯಣ ಭಟ್ ಕಾಸರಗೋಡು ಅವರು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.
   ಮಲಯಾಳ ಭಾಷೆ ಕಲಿಕೆಯನ್ನು  ಕಡ್ಡಾಯಗೊಳಿಸಿರುವ ಬಗ್ಗೆ  ಕಳೆದ ವರ್ಷ ಕಾಸರಗೋಡು ಕಲೆಕ್ಟರೇಟ್ ಎದುರು ಬೃಹತ್ ಪ್ರತಿಭಟನೆ ನಡೆಸಿರುವುದನ್ನು  ಅವರು ನೆನಪಿಸಿದ್ದು, ಸರಕಾರದ ಈ ಕ್ರಮದಿಂದ ಭಾಷಾ ಅಲ್ಪಸಂಖ್ಯಾಕರು ಅನೇಕ ಸಮಸ್ಯೆಗಳನ್ನು  ಎದುರಿಸಬೇಕಾಗಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ  ಕನ್ನಡ ಮಾಧ್ಯಮ ಶಾಲೆಗಳಲ್ಲಿ  ಮಲಯಾಳ ಭಾಷಾ ಕಲಿಕೆ ಕಡ್ಡಾಯಗೊಳಿಸಿದರೆ ಉಗ್ರ ಪ್ರತಿಭಟನೆಯನ್ನು  ಹಮ್ಮಿಕೊಳ್ಳಲಾಗುವುದು ಎಂದು ಮನವಿಯನ್ನು  ಎಚ್ಚರಿಸಿದ್ದಾರೆ.
   ಕೇರಳ ಸರಕಾರವು ಪ್ರಜಾಪ್ರಭುತ್ವ ನೆಲೆಯಲ್ಲಿ ಭಾಷಾ ಅಲ್ಪಸಂಖ್ಯಾಕರ ಮತ್ತು  ಅಲ್ಪಸಂಖ್ಯಾಕ ಸಮುದಾಯದವರ ಭಾಷೆ, ಸಂಸ್ಕೃತಿಯನ್ನು  ಸಂರಕ್ಷಿಸಲು ಬದ್ಧವಾಗಿದೆ. ಅದೇ ರೀತಿಯಲ್ಲಿ  ರಾಜ್ಯದಲ್ಲಿ  ಮತ ಅಲ್ಪಸಂಖ್ಯಾತ ವಿದ್ಯಾಥರ್ಿಗಳಿಗೆ ಭಗವದ್ಗೀತೆ ಅಥವಾ ಯೋಗ ಕಲಿಸಲು ಸರಕಾರವು ಸಿದ್ಧವಿದೆಯೋ ಎಂಬುದನ್ನು  ಅವರು ಮನವಿಯಲ್ಲಿ  ಪ್ರಶ್ನಿಸಿದ್ದಾರೆ.
   ಮಲಯಾಳ ಭಾಷೆ ಕಲಿಕೆ ಕಡ್ಡಾಯಗೊಳಿಸುವುದರ ಮೂಲಕ ಮಾತೃ ಭಾಷೆಗೆ ಧಕ್ಕೆಯಾಗುವುದರೊಂದಿಗೆ ಸಂಸ್ಕೃತಿಯು ಸಂಪೂರ್ಣ ನಾಶವಾಗಿ ಹೆಚ್ಚು  ಭಾಷೆ ಕಲಿಕೆಯ ದೊಡ್ಡ  ಹೊರೆಯು ವಿದ್ಯಾಥರ್ಿಗಳ ಮೇಲೇರುತ್ತದೆ. ಆದ್ದರಿಂದ ಭಾಷಾ ಅಲ್ಪಸಂಖ್ಯಾಕ ಶಾಲೆಗಳಲ್ಲಿ  ಮಲಯಾಳ ಭಾಷೆ ಕಲಿಕೆ ಹೇರಿಕೆಯನ್ನು  ಸಂಪೂರ್ಣವಾಗಿ ಹಿಂತೆಗೆಯಬೇಕು ಎಂದು ಸಿಎಂಗೆ ಕಳುಹಿಸಿದ ಮನವಿಯಲ್ಲಿ  ಒತ್ತಾಯಿಸಿದ್ದಾರೆ. ಈ ಪ್ರತಿಯನ್ನು  ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಭಾಷಾ ಅಲ್ಪಸಂಖ್ಯಾತ ಆಯೋಗ ಹಾಗೂ ಜಿಲ್ಲಾಧಿಕಾರಿಗಳಿಗೂ ಕಳುಹಿಸಿಕೊಟ್ಟಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries