ಅತಿರಾತ್ರ ಸೋಮಯಾಗದ ಪೂರ್ವಭಾವೀ ಶ್ರೀವಿಷ್ಣು ಸಮಸ್ರನಾಮ ಅಭಿಯಾನಕ್ಕೆ ಚಾಲನೆ
ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಆಶ್ರಯದಲ್ಲಿ 2019ರ ಫೆ. 18 ರಿಂದ 25ರ ವರೆಗೆ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಲಿರುವ ಅತ್ಯಪೂರ್ವ "ಅತಿರಾತ್ರ ಸೋಮಯಾಗ"ದ ಪೂರ್ವಭಾವಿಯಾಗಿ ಶ್ರೀವಿಷ್ಣು ಸಮಸ್ರನಾಮ ಅಭಿಯಾನವನ್ನು ಆಯೋಜಿಸಲಾಗಿದ್ದು, ಇದರ ಉದ್ಘಾಟನೆ ಮೇ. 20 ರಂದು ಭಾನುವಾರ ಅಪರಾಹ್ನ 3 ರಿಂದ ಉಪ್ಪಳ ಶಾರದಾನಗರ ಮೊಗವೀರ ಪಟ್ನ ಬೆಂಗರೆಯ ಶ್ರೀಶಾರದಾ ಭಜನಾ ಮಂದಿರ ಪರಿಸರದ ಸಿಂಧೂ ಕಡಲ ಕಿನಾರೆಯಲ್ಲಿ ನಡೆಯಲಿದೆ.
ಅಂದು ಅಪರಾಹ್ನ 3ಕ್ಕೆ ದೀಪಪ್ರತಿಷ್ಠೆ, ಭಜನಾ ಸಂಕೀರ್ತನಾ ಸತ್ಸಂಗ ನಡೆಯಲಿದೆ. 3.45 ರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮಾವಳಿ ಅರ್ಚನೆ ಆರಂಭಗೊಳ್ಳಲಿದೆ. ಸಂಜೆ 4.30ಕ್ಕೆ ನಡೆಯುವ ಧಾಮರ್ಿಕ ಸಭೆಯಲ್ಲಿ ಕೆಡೆಂಜಿ ಶ್ರೀಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರಿನ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಆಶೀರ್ವಚನ ನೀಡುವರು. ಕಟೀಲು ಶ್ರೀಕ್ಷೇತ್ರದ ಆನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣ ಹಾಗೂ ಅವಧಾನಿ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿಗಳು ಉಪಸ್ಥಿತರಿರುವರು. ಅಬುದಾಬಿ ಯುಎಇ ಎಕ್ಸೇಂಜ್ನ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರದ ಉಪಾಧ್ಯಕ್ಷ ಶಂಕರಪ್ರಸಾದ್ ಕುಂಬಳೆ, ದ.ಕ-ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮುಖಾಬೋವಿ ಸಮುದಾಯ ಸಭಾದ ಗೌರವಾಧ್ಯಕ್ಷ ಮಾಧವ ಕಾವುಗೋಳಿ, ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಉಪಸ್ಥಿತರಿದ್ದು ಮಾತನಾಡುವರು. ಕನರ್ಾಟಕದ ಮಾಜಿ ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ, ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ, ವಾಮಂಜೂರು ಗುತ್ಯಮ್ಮ ಭಗವತೀ ಕ್ಷೇತ್ರದ ಕಾರ್ಯದಶರ್ಿ ಕರುಣಾಕರ ಬೆಳ್ಚಪ್ಪಾಡ, ಕುಟ್ಟಿ ಕೃಷ್ಣನ್, ಶಾರದಾನಗರ ಮೊಗವೀರ ಸಭಾದ ಅಧ್ಯಕ್ಷ ಶಿವರಾಮ ಬಂಗೇರ, ಗುರಿಕ್ಕಾರ ಅಶೋಕ್ ಶ್ರೀಯಾನ್ ಉಪಸ್ಥಿತರಿರುವರು.
ಸಂಜೆ 6ಕ್ಕೆ ಸಾಮೂಹಿಕ ಶ್ರೀವಿಷ್ಣುಸಹಸ್ರನಾಮ ಪಾರಾಯಣ ಮಹಾಪೂಜೆ, ಬಳಿಕ ಸಮುದ್ರಪೂಜೆ, ಪ್ರಸಾದ ವಿತರಣೆ ನಡೆಯಲಿದೆ.