HEALTH TIPS

No title

                  ಮೇ29ರಿಂದ ಮುಳ್ಳೇರಿಯದಲ್ಲಿ ಸಂಗೀತ ಶಿಬಿರ
     ಮುಳ್ಳೇರಿಯ: ರಾಗಸುಧಾರಸ ಕಾಸರಗೋಡು ಇದರ ಪ್ರಾಯೋಜಕತ್ವದಲ್ಲಿ, ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಇದರ ಸಹಯೋಗದೊಂದಿಗೆ ಮೇ29ರಿಂದ ಜೂನ್ 1ರ ತನಕ ವಿಶೇಷ ಸಂಗೀತ ಶಿಬಿರ ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ನಡೆಯಲಿದೆ.
    ಖ್ಯಾತ ಸಂಗೀತ ವಿದ್ವಾಂಸರಾದ ಕಲೈಮಾಮಣಿ ವಿಠಲ ರಾಮಮೂತರ್ಿ ಚೆನ್ನೈ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಮೇ 29ರಂದು ಬೆಳಿಗ್ಗೆ 9ಕ್ಕೆ ಹಿರಿಯ ಸಂಗೀತ ಶಿಕ್ಷಕಿ ವಸಂತಿ ಕುಂಜತ್ತಾಯ ಶಿಬಿರವನ್ನು ಉದ್ಘಾಟಿಸುವರು. ಜೂನ್ 1ರಂದು ಸಂಜೆ 5ರಿಂದ ಶಿಬಿರಾಥರ್ಿಗಳಿಂದ ಗಾಯನ ನಡೆಯಲಿದೆ. ಸಂಜೆ 5ಕ್ಕೆ ಕನರ್ಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ವಿದ್ವಾನ್ ಟಿ.ಎಂ.ಕೃಷ್ಣ ಚೆನ್ನೈ(ಹಾಡುಗಾರಿಕೆ), ವಿಠಲ ರಾಮಮೂತರ್ಿ ಚೆನ್ನೈ(ವಯಲಿನ್), ವಿದ್ವಾನ್ ಅರುಣಪ್ರಕಾಶ್(ಮೃದಂಗ) ಭಾಗವಹಿಸುವರು.
   ಸಮಾರೋಪ ಸಮಾರಂಭದಲ್ಲಿ ರಾಗಸುಧಾರಸ ಇದರ ಅಧ್ಯಕ್ಷ ಡಾ.ಶಂಕರ್ರಾಜ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಮಧೂರು ಬಾಲಸುಬ್ರಹ್ಮಣ್ಯ ಸರಳಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮಾರಂಭದಲ್ಲಿ ವಿಠಲ ರಾಮಮೂತರ್ಿ ಚೆನ್ನೈ ಮತ್ತು ಟಿ.ಎಂ.ಕೃಷ್ಣ ಚೆನ್ನೈ ಭಾಗವಹಿಸುವರು.
   ಮುಳ್ಳೇರಿಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಂಗೀತ ಶಿಬಿರ ಯಶಸ್ವಿಯಾಗಿ ನಡೆಯುತ್ತಿದೆ. ಶಿಬಿರದಲ್ಲಿ ಸಂಗೀತ ಹಾಡುಗಾರಿಕೆ(ವೋಕಲ್) ತರಬೇತಿ ನೀಡಲಾಗುವುದು. ಮಕ್ಕಳ ಸಂಗೀತಾಸಕ್ತಿ, ಸಂಗೀತದ ಹಿರಿಮೆಯನ್ನು ತೋರಿಸಿಕೊಡಲು ಇದೊಂದು ಸುವಣರ್ಾವಕಾಶವಾಗಿದೆ. ಲಾಲ್ಗುಡಿ.ಜಿ. ಜಯರಾಮನ್ ಅವರ ಸಂಗೀತದ ಅತೀ ಮಾಧುರ್ಯ ಕ್ರಮವನ್ನು ಇಲ್ಲಿ ಕಲಿಸಿಕೊಡಲಾಗುವುದು. ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು ಮೇ.29ರಂದು ಬೆಳಿಗ್ಗೆ ತಮ್ಮ ಹೆಸರನ್ನು ನೋದಾಯಿಸಬೇಕು. ಶಿಬಿರಾಥರ್ಿಗಳು ನಾಲ್ಕು ದಿನಗಳ ಕಾಲ ಉಳಕೊಳ್ಳುವ ಸಿದ್ಧತೆಯೊಂದಿಗೆ ಬರತಕ್ಕದ್ದು.  ಹೆಚ್ಚಿನ ಮಾಹಿತಿಗಾಗಿ ಸಂಪಕರ್ಿಸಬೇಕಾದ ದೂರವಾಣಿ ಸಂಖ್ಯೆ: 7907896063, 9745304559.
   ಮೇ 28ರಂದು ಕುಂಟಾರು ಶ್ರೀ ಮಹಾವಿಷ್ಣುಮೂತರ್ಿ ಕ್ಷೇತ್ರದಲ್ಲಿ ಮೇ 31ರಂದು ಅಗಲ್ಪಾಡಿ ದುಗರ್ಾಪರಮೇಶ್ವರೀ ಕ್ಷೇತ್ರದಲ್ಲಿ ಸಂಜೆ 5.30ಕ್ಕೆ ಕು.ವಿಜಯಶ್ರೀ ವಿಠಲ್ ಚೆನ್ನೈ ಮತ್ತು ಕೃತಿ ಭಟ್ ಯುಎಸ್ಎ ಇವರಿಂದ ಸಂಗೀತ ಸೇವೆ ನಡೆಯಲಿದೆ.
   
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries