ಕುಂಬಳೆ ಕಣಿಪುರ ಕ್ಷೇತ್ರದಲ್ಲಿ 6ನೇ ವರ್ಷದ ಶ್ರೀಮದ್ ಭಾಗವತ ಯಜ್ಞಕ್ಕೆ ಚಾಲನೆ
ಕುಂಬಳೆ: ತುಳುನಾಡಿನ ಖ್ಯಾತ ಸೀಮೆಗಳಲ್ಲೊಂದಾದ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾದ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ಸಮಾಜ ಮತ್ತು ಜೀವಕೋಟಿಗಳ ಸೌಖ್ಯ ಸಮಾಧಾನಗಳಿಗೆ ವಿವಿಧ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಿ ಭಗವತ್ ಸಂಪ್ರೀತಿಗೆ ಬೇಡಿಕೊಳ್ಳಲಾಗುತ್ತಿದ್ದು, ಕಳೆದ ಐದು ವರ್ಷಗಳಿಂದ ಶ್ರೀಮದ್ ಭಾಗವತ ಸಪ್ತಾಹ ಯಶಸ್ವಿಯಾಗಿ ನೆರವೇರಿದ್ದು ಪ್ರಸ್ತುತ ವರ್ಷದ ಶ್ರೀಭಾಗವತ ಯಜ್ಞಕ್ಕೆ ಬುಧವಾರ ಅಧಿಕೃತ ಚಾಲನೆ ನೀಡಲಾಯಿತು.
ಶ್ರೀಮದ್ ಭಾಗವತ ಸಪ್ತಾಹದ ಅಂಗವಾಗಿ ಬುಧವಾರ ಸಂಜೆ 5ಕ್ಕೆ ಯಜ್ಞಾಚಾರ್ಯ ಪ್ರೊ.ಕೆ. ನಾರಾಯಣ ಪೋತ್ತಿ ಹಾಗೂ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರು ಶ್ರೀಕಣಿಪುರ ಕ್ಷೇತ್ರಕ್ಕೆ ಆಗಮಿಸಿದರು.ಅವರನ್ನು ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಯಿತು. 5.30ಕ್ಕೆ ಭಾಗವತ ಯಜ್ಞಾರಂಭ ಅಂಗವಾಗಿ ಮೆರವಣಿಗೆಯ ಮೂಲಕ ಶ್ರೀಕೃಷ್ಣ ವಿಗ್ರಹದೊಂದಿಗೆ ಪುರ ಮೆರವಣಿಗೆ ನಡೆಯಿತು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಬಳಿಕ ಸಮಾರಂಭವನ್ನು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ದೀಪ ಪ್ರಜ್ವಲನೆಗೈದು ಚಾಲನೆ ನೀಡಿ ಹಾರೈಸಿದರು. ಕಣಿಪುರ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂತರ್ಿ ಮಾಧವ ಅಡಿಗ ಉಪಸ್ಥಿತರಿದ್ದರು. ಯಜ್ಞಾಚಾರ್ಯ ಬ್ರಹ್ಮಶ್ರೀ ಪ್ರೊ.ಕೆ ನಾರಾಯಣನ್ ಪೋತ್ತಿ, ಪ್ರವಚನಕಾರ ಬ್ರಹ್ಮಶ್ರೀ ಕೇಶವ ಭಟ್ ಕೇಕಣಾಜೆ ಉಪಸ್ಥಿತದ್ದರು.
ಮೇ.17 ರಮದು ಬೆಳಿಗ್ಗೆ 6 ಕ್ಕೆ ಗಣಪತಿಹವನ, ಹರಿನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ, 7.45 ಕ್ಕೆ ಗ್ರಂಥ ನಮಸ್ಕಾರ, ಬಳಿಕ 8 ರಿಂದ 12ರ ತನಕ ಹಾಗೂ ಅಪರಾಹ್ನ 3 ರಿಂದ 6ರ ತನಕ ಶ್ರೀಮದ್ ಭಾಗವತ ಪಾರಾಯಣ ಹಾಗೂ ಪ್ರವಚನ ವರಾಹಾವತಾರದ ವಿವರಣೆಗಳೊಂದಿಗೆ ನಡೆಯಿತು. ಸಂಜೆ 6 ರಿಂದ 7ರ ತನಕ ಯಜ್ಞಾಚಾರ್ಯರಿಂದ ಉಪನ್ಯಾಸ, ನಾಮಸಂಕೀರ್ತನೆ, ದೀಪಾರಾಧನೆ ನಡೆಯಿತು.
ಶುಕ್ರವಾರ ಬೆಳಿಗ್ಗೆ 6 ರಿಂದ ಗಣಪತಿ ಹವನ, ಹರಿನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ. 7.45ಕ್ಕೆ ಗ್ರಂಥ ನಮಸ್ಕಾರ, ಬಳಿಕ 8 ರಿಂದ 12ರ ತನಕ ಮತ್ತು ಅಪರಾಹ್ನ 3 ರಿಂದ 6ರ ತನಕ ಶ್ರೀಮದ್ಭಾಗವತ ಪಾರಾಯಣ ಮತ್ತು ಪ್ರವಚನ ನಡೆಯಲಿದೆ.
ಕುಂಬಳೆ: ತುಳುನಾಡಿನ ಖ್ಯಾತ ಸೀಮೆಗಳಲ್ಲೊಂದಾದ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾದ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ಸಮಾಜ ಮತ್ತು ಜೀವಕೋಟಿಗಳ ಸೌಖ್ಯ ಸಮಾಧಾನಗಳಿಗೆ ವಿವಿಧ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಿ ಭಗವತ್ ಸಂಪ್ರೀತಿಗೆ ಬೇಡಿಕೊಳ್ಳಲಾಗುತ್ತಿದ್ದು, ಕಳೆದ ಐದು ವರ್ಷಗಳಿಂದ ಶ್ರೀಮದ್ ಭಾಗವತ ಸಪ್ತಾಹ ಯಶಸ್ವಿಯಾಗಿ ನೆರವೇರಿದ್ದು ಪ್ರಸ್ತುತ ವರ್ಷದ ಶ್ರೀಭಾಗವತ ಯಜ್ಞಕ್ಕೆ ಬುಧವಾರ ಅಧಿಕೃತ ಚಾಲನೆ ನೀಡಲಾಯಿತು.
ಶ್ರೀಮದ್ ಭಾಗವತ ಸಪ್ತಾಹದ ಅಂಗವಾಗಿ ಬುಧವಾರ ಸಂಜೆ 5ಕ್ಕೆ ಯಜ್ಞಾಚಾರ್ಯ ಪ್ರೊ.ಕೆ. ನಾರಾಯಣ ಪೋತ್ತಿ ಹಾಗೂ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರು ಶ್ರೀಕಣಿಪುರ ಕ್ಷೇತ್ರಕ್ಕೆ ಆಗಮಿಸಿದರು.ಅವರನ್ನು ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಯಿತು. 5.30ಕ್ಕೆ ಭಾಗವತ ಯಜ್ಞಾರಂಭ ಅಂಗವಾಗಿ ಮೆರವಣಿಗೆಯ ಮೂಲಕ ಶ್ರೀಕೃಷ್ಣ ವಿಗ್ರಹದೊಂದಿಗೆ ಪುರ ಮೆರವಣಿಗೆ ನಡೆಯಿತು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಬಳಿಕ ಸಮಾರಂಭವನ್ನು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ದೀಪ ಪ್ರಜ್ವಲನೆಗೈದು ಚಾಲನೆ ನೀಡಿ ಹಾರೈಸಿದರು. ಕಣಿಪುರ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂತರ್ಿ ಮಾಧವ ಅಡಿಗ ಉಪಸ್ಥಿತರಿದ್ದರು. ಯಜ್ಞಾಚಾರ್ಯ ಬ್ರಹ್ಮಶ್ರೀ ಪ್ರೊ.ಕೆ ನಾರಾಯಣನ್ ಪೋತ್ತಿ, ಪ್ರವಚನಕಾರ ಬ್ರಹ್ಮಶ್ರೀ ಕೇಶವ ಭಟ್ ಕೇಕಣಾಜೆ ಉಪಸ್ಥಿತದ್ದರು.
ಮೇ.17 ರಮದು ಬೆಳಿಗ್ಗೆ 6 ಕ್ಕೆ ಗಣಪತಿಹವನ, ಹರಿನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ, 7.45 ಕ್ಕೆ ಗ್ರಂಥ ನಮಸ್ಕಾರ, ಬಳಿಕ 8 ರಿಂದ 12ರ ತನಕ ಹಾಗೂ ಅಪರಾಹ್ನ 3 ರಿಂದ 6ರ ತನಕ ಶ್ರೀಮದ್ ಭಾಗವತ ಪಾರಾಯಣ ಹಾಗೂ ಪ್ರವಚನ ವರಾಹಾವತಾರದ ವಿವರಣೆಗಳೊಂದಿಗೆ ನಡೆಯಿತು. ಸಂಜೆ 6 ರಿಂದ 7ರ ತನಕ ಯಜ್ಞಾಚಾರ್ಯರಿಂದ ಉಪನ್ಯಾಸ, ನಾಮಸಂಕೀರ್ತನೆ, ದೀಪಾರಾಧನೆ ನಡೆಯಿತು.
ಶುಕ್ರವಾರ ಬೆಳಿಗ್ಗೆ 6 ರಿಂದ ಗಣಪತಿ ಹವನ, ಹರಿನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ. 7.45ಕ್ಕೆ ಗ್ರಂಥ ನಮಸ್ಕಾರ, ಬಳಿಕ 8 ರಿಂದ 12ರ ತನಕ ಮತ್ತು ಅಪರಾಹ್ನ 3 ರಿಂದ 6ರ ತನಕ ಶ್ರೀಮದ್ಭಾಗವತ ಪಾರಾಯಣ ಮತ್ತು ಪ್ರವಚನ ನಡೆಯಲಿದೆ.