HEALTH TIPS

No title

                    ಕಟ್ಟತ್ತಬಯಲಿನಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವ ಆರಂಭ
       ಮುಳ್ಳೇರಿಯ: ಕುಂಟಾರು ಕಟ್ಟತ್ತಬಯಲು ಶ್ರೀ ಅಣ್ಣಪ್ಪ ಪಂಜುಲರ್ಿ, ಪರಿವಾರ ದೈವಗಳ ಪುನಃ ಪ್ರತಿಷ್ಠೆ; ದೈವಂಕಟ್ಟು ಮಹೋತ್ಸವ ಕಾರ್ಯಕ್ರಮಗಳು ಶನಿವಾರ ಆರಂಭಗೊಂಡಿದ್ದು ಮೇ 8ರ ತನಕ ನಡೆಯಲಿದೆ.
   ಕಾರ್ಯಕ್ರಮದ ಅಂಗವಾಗಿ ಶನಿವಾರ ಬೆಳಿಗ್ಗೆ ಕುಂಟಾರು ಶ್ರೀ ಮಹಾವಿಷ್ಣುಮೂತರ್ಿ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಸಂಜೆ ಬ್ರಹ್ಮಶ್ರೀ ವಾಸುದೇವ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು.
   ಮೇ 6ರಂದು ಭಾನುವಾರ ಬೆಳಿಗ್ಗೆ 7ರಿಂದ ಗಣಪತಿಹೋಮ, ಬ್ರಹ್ಮಕಲಶಪೂಜೆ, 8.16ಕ್ಕೆ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ ನಡೆಯಿತು. ಬಳಿಕ 9ಕ್ಕೆ ಜೋಡು ಗುಳಿಗನ ಕೋಲ, 12ಕ್ಕೆ ರಾಹುಗುಳಿಗ, ಮಧ್ಯಾಹ್ನ 1ಕ್ಕೆ ಅನ್ನದಾನ, 3ಕ್ಕೆ ಕೊರತ್ತಿ ಅಮ್ಮನ ಕೋಲ, ಸಂಜೆ 6ಕ್ಕೆ ದೀಪಾರಾಧನೆ, 6.30ಕ್ಕೆ ಭಂಡಾರ ಇಳಿಸುವುದು, 7ಕ್ಕೆ ಅಣ್ಣಪ್ಪ ಪಂಜುಲರ್ಿಯ ತೊಡಂಗಲ್, ರಾತ್ರಿ 8.30ಕ್ಕೆ ಕುಪ್ಪೆ ಪಂಜುಲರ್ಿ ತೊಡಂಗಲ್, 9ಕ್ಕೆ ಅನ್ನ ಸಂತರ್ಪಣೆಗಳು ನಡೆದವು. 10ಕ್ಕೆ  ಕುಪ್ಪೆ ಪಂಜುಲರ್ಿ ದೈವ, 1ಕ್ಕೆ ಕಲ್ಲುಟರ್ಿ ಅಮ್ಮನ ಕೋಲ ನಡೆಯಿತು.
   ಮೇ 7ರಂದು ಬೆಳಿಗ್ಗೆ ಶ್ರೀ ದೈವಗಳ ಪ್ರಸಾದ ವಿತರಣೆ, 8.30ಕ್ಕೆ ಶ್ರೀ ಅಣ್ಣಪ್ಪ ಪಂಜುಲರ್ಿ ಕೋಲ, ಮಧ್ಯಾಹ್ನ 12ಕ್ಕೆ ಪ್ರಸಾದ ವಿತರಣೆ, 1ಕ್ಕೆ ಅನ್ನ ಸಂತರ್ಪಣೆ, ರಾತ್ರಿ 8ಕ್ಕೆ ಕೊರಗ ತನಿಯ ದೈವದ ಭಂಡಾರ ಇಳಿಸುವುದು, 8.30ಕ್ಕೆ ಅನ್ನದಾನ, 10ಕ್ಕೆ ಕೊರಗ ತನಿಯ ದೈವಗಳ ಕೋಲ, ಮೇ 8ರಂದು ಬೆಳಿಗ್ಗೆ 6.30ಕ್ಕೆ  ಶ್ರೀ ದೈವಗಳ ಪ್ರಸಾದ ವಿತರಣೆ, ಮಂತ್ರಾಕ್ಷತೆ ನಡೆಯಲಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries