HEALTH TIPS

No title

                 ಟಿ ಆರ್ ಕೆ ಭಟ್ 90 ನೇ ಹುಟ್ಟು ಹಬ್ಬದ ಆಚರಣೆ
      ಪೆರ್ಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ,ಬಿಜೆಪಿ ಧುರೀಣ, ತುತರ್ು ಪರಿಸ್ಥಿತಿ ವೇಳೆ ಜೈಲುವಾಸ ಅನುಭವಿಸಿದ್ದ ಮಂಜೇಶ್ವರ ಬ್ಲಾಕ್ ಪಂಚಾಯಿತಿನ ಮಾಜಿ ಅಧ್ಯಕ್ಷ ಎಣ್ಮಕಜೆ  ಗ್ರಾ.ಪಂ. ಮಾಜಿ ಅಧ್ಯಕ್ಷ  ಪೆರ್ಲ ತಡೆಗಲ್ಲು ರಾಮಕೃಷ್ಣ  ಭಟ್(ಟಿ.ಆರ್.ಕೆ.ಭಟ್)  ಅವರ  90 ನೇ ವರ್ಷ ದ ಹುಟ್ಟು ಹಬ್ಬವನ್ನು ಸೋಮವಾರ   ಇಡಿಯಡ್ಕ ಶ್ರೀ ದುಗರ್ಾ ಪರಮೇಶ್ವರಿ ಉಳ್ಳಾಲ್ತಿ ಕ್ಷೇತ್ರದಲ್ಲಿ ಆಚರಿಸಲಾಯಿತು.
  ಪ್ರಸಾದ್ ಭಟ್ ನೆಲ್ಲಿಕುಂಜೆ, ಶಶಿಧರ ಪಾತನಡ್ಕ ನೇತೃತ್ವದಲ್ಲಿ ನವತಿ ವರ್ಷದ ಪ್ರಯುಕ್ತ ಕಾಲ ಸ್ವರೂಪ ಶೌರಿಶಾಂತಿ ಹೋಮ ನಡೆಸಲಾಯಿತು. ನಿವೃತ್ತ ಅಧ್ಯಾಪಕ ಬನಾರಿ ನಾರಾಯಣ ಭಟ್ , ತಡೆಗಲ್ಲು ವಾಸುದೇವ ಭಟ್, ನಾಲಂದ ಮಹಾ ವಿಶ್ವ ವಿದ್ಯಾಲಯದ  ಆಡಳಿತ ಸಮಿತಿಯ ಶಿವ ಕುಮಾರ್ ಮಾಸ್ತರ್, ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್ ಭಟ್, ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾ ಅಮೆಕ್ಕಳ, ಬ್ಲಾಕ್  ಪಂಚಾಯಿತಿ ಸದಸ್ಯೆ ಸವಿತಾ ಬಾಳಿಕೆ, ಪಂ. ಉಪಾಧ್ಯಕ್ಷ ಕೆ ಪುಟ್ಟಪ್ಪ, ವಾಡರ್್ ಪ್ರತಿನಿಧಿಗಳು ಮತ್ತು ಹಲವರು ಆಗಮಿಸಿ ಶುಭ ಕೋರಿದರು. ವಿದ್ವಾನ್ ರಾಜೀವ್ ವೆಳ್ಳಿಕೋತ್ತ್, ಮಾ. ಸದ್ಗುಣ್ ಐತಾಳ್, ಮಾ. ಶ್ರೀ ನಿಧಿ ನೇತೃತ್ವದಲ್ಲಿ ಮೆಂಡಲಿನ್ ಕಛೇರಿ ನಡೆಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries