HEALTH TIPS

No title

                ಧರ್ಮನೇಮೋತ್ಸವ
   ಕುಂಬಳೆ: ಕೋಟೆಕ್ಕಾರು ರಾಜ್ಯಂದೈವ ಶ್ರೀಧೂಮಾವತಿ ದೈವಸ್ಥಾನದಲ್ಲಿ ಧರ್ಮನೇಮೋತ್ಸವ ಮೇ. 7 ರಿಂದ 10ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
   ಕಾರ್ಯಕ್ರಮದ ಅಂಗವಾಗಿ ಮೇ.7 ರಂದು ಸೋಮವಾರ ಬೆಳಿಗ್ಗೆ 7ಕ್ಕೆ ಗಣಪತಿಹೋಮ, 9ಕ್ಕೆ ನಾಗತಂಬಿಲ, ರಕ್ತೇಶ್ವರಿ ತಂಬಿಲ, 10ಕ್ಕೆ ದೈವದ ದೀಪಾರಾಧನೆ, 11ಕ್ಕೆ ಹರಿಸೇವೆ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 5 ರಿಂದ ಶ್ರೀಸತ್ಯನಾರಾಯಣ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ 7 ರಿಂದ ಶ್ರೀಧೂಮಾವತಿ ಭಜನಾ ಸಂಘ ಕೋಟೆಕ್ಕಾರು ತಂಡದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ರಾತ್ರಿ 9ಕ್ಕೆ ಅನ್ನಸಂತರ್ಪಣೆ, 10 ರಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 11 ರಿಂದ ಮಂಜೇಶ್ವರದ ಶಾರದಾ ಕಲಾ ಆಟ್ಸರ್್ ತಂಡದವರಿಂದ "ನಿತ್ಯೆ ಬನ್ನಗ" ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.
   ಮೇ.8 ರಂದು ಬೆಳಿಗ್ಗೆ 10ಕ್ಕೆ ಶ್ರೀಧೂಮಾವತಿ ದೈವದ ಧರ್ಮನೇಮ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನದಾನಗಳು ನಡೆಯಲಿವೆ. ಸಂಜೆ 6ಕ್ಕೆ ಕೊರತ್ತಿ ಮತ್ತು ಕಲ್ಲುಟರ್ಿ ದೈವದ ಕೋಲ, ಕಲ್ಲಾಳ್ತಾಯ ಗುಳಿಗನ ಕೋಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
  ಮೇ.9 ರಂದು ಬೆಳಿಗ್ಗೆ 11.30ಕ್ಕೆ ದೈವತಂಬಿಲ, ಮಧ್ಯಾಹ್ನ 1ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮೇ.10 ರಂದು ಬೆಳಿಗ್ಗೆ 9ಕ್ಕೆ ಶುದ್ದಿಕಲಶ, ದೀಪಾರಾಧನೆಯೊಂದಿಗೆ ಧರ್ಮನೇಮೋತ್ಸವ ಸಂಪನ್ನಗೊಳ್ಳಲಿದೆ.
       

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries