HEALTH TIPS

No title

ಮಂಜೇಶ್ವರ ಬ್ಲಾಕ್ ಪಂಚಾಯತು `` ನನ್ನ ಮಂಜೇಶ್ವರ - ಶುಚಿತ್ವ ಮಂಜೇಶ್ವರ '' ಸಾಕ್ಷ್ಯಚಿತ್ರ ಬಿಡುಗಡೆ
   ಮಂಜೇಶ್ವರ : ಮಂಜೇಶ್ವರ ಬ್ಲಾಕ್ ಪಂಚಾಯತು ಜಾರಿಗೊಳಿಸುತ್ತಿರುವ ಮಹತ್ವಾಕಾಂಕ್ಷಿ `` ನನ್ನ ಮಂಜೇಶ್ವರ - ಶುಚಿತ್ವ ಮಂಜೇಶ್ವರ '' ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭ ಶನಿವಾರ ಮಂಜೇಶ್ವರ ಕಲಾ ಸ್ಪರ್ಷಂ ಅಡಿಟೋರಿಯಂ ನಲ್ಲಿ ನಡೆಯಿತು.
   ಕೇರಳ ರಾಜ್ಯ ಚಲನ ಚಿತ್ರ ಪ್ರಶಸ್ತಿ ಪುರಸ್ಕ್ರತ, ಖ್ಯಾತ ನಟ ಇಂದ್ರನ್ಸ್ ಸಾಕ್ಷ್ಯ ಚಿತ್ರ ಬಿಡುಗಡೆಗೊಳಿಸಿದರು.
    ಬ್ಲಾಕ್ ಪಂ. ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ  ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ರಝಾಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನನ್ನ ಕ್ಷೇತ್ರದಲ್ಲಿ ತ್ಯಾಜ್ಯ ತುಂಬಿ ಗುಬ್ಬೆದ್ದು ನಾರುತ್ತಿರುವುದಕ್ಕೆ ಈ ತನಕ ಒಂದು ಪಯರ್ಾಯ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯವಾಗಲಿಲ್ಲವೆಂಬ ಸತ್ಯವನ್ನು ಹೇಳದೆ ನಿವರ್ಾಹವಿಲ್ಲ. ಅದೆಷ್ಟೋ ಯೋಜನೆಗಳನ್ನು ಸ್ಥಳೀಯಾಡಳಿತ ಸಂಸ್ಥೆ ಜ್ಯಾರಿಗೆ ತಂದರೂ ಯಾವುದೂ ಯಶಸ್ವಿಯಾಗಲಿಲ್ಲ. ಜನರ ಸಹಭಾಗಿತ್ವವಿಲ್ಲದೆ ಶುಚಿತ್ವದ ಪರಿಕಲ್ಪನೆ ಯಶಸ್ವಿಯಾಗದು ಎಂದು ಅವರು ತಿಳಿಸಿದರು.
   ಜಿಲ್ಲಾಧಿಕಾರಿ ಜೀವನ್ ಬಾಬು ಕೆ. ವಿವಿಧ ಗ್ರಾಮ  ಪಂಚಾಯತು ಅಧ್ಯಕ್ಷರುಗಳಾದ ಅಝೀಝ್ ಹಾಜಿ , ಶಾಹುಲ್ ಹಮೀದ್ , ಶಂಶಾದ್ ಶುಕೂರು , ಬಿ.ಎ ಅಬ್ದುಲ್ ಮಜೀದ್ , ಅರುಣಾ , ರೂಪವಾಣಿ ಆರ್.ಭಟ್ , ಜಿಲ್ಲಾ ಪಂಚಾಯತು ಸದಸ್ಯರುಗಳಾದ ಫರೀದಾ ಝಕೀರ್ ಅಹ್ಮದ್ ,  ಪುಷ್ಪಾ ಅಮೆಕ್ಕಳ ಸಹಿತ ವಿವಿಧ ವಿಭಾಗಗಳ ಗಣ್ಯರು ಉಪಸ್ಥಿತರಿದ್ದರು. ಬ್ಲಾಕ್ ಪಂಚಾಯತು ಉಪಾಧ್ಯಕ್ಷೆ ಮಮತಾ ದಿವಾಕರ್ ಸ್ವಾಗತಿಸಿ,ಬ್ಲಾಕ್ ಪಂ. ಆರೋಗ್ಯ ಹಾಗೂ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಫ ಉದ್ಯಾವರ ವಂದಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries