ಶ್ರೀಕ್ಷೇತ್ರ ಧರ್ಮಸ್ಥಳದ ಯೋಜನೆಗಳು ಭರವಸೆಯ ಬೆಳಕು-ಭಾಗವತ ನಾರಾಯಣ ಮಾಟೆ
ಗ್ರಾ.ಯೋಜನೆಯ ಎರಡು ಸ್ವಸಹಾಯ ಸಂಘಗಳ ಉದ್ಘಾಟನೆ
ಮುಳ್ಳೇರಿಯ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ವರ್ತಮಾನದ ಜನಜೀವನದ ಮೇಲೆ ಬೀರಿರುವ ಗಾಢ ಪರಿಣಾಮವು ಪರಿಣಾಮಕಾರಿಯಾಗಿ ಸಮಗ್ರ ಅಭಿವೃದ್ದಿಗೆ ಪೂರಕವಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ, ಯಕ್ಷಗಾನ ಭಾಗವತ ನಾರಾಯಣ ಮಾಟೆ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನೇತೃತ್ವದಲ್ಲಿ ಗಡಿಗ್ರಾಮ ಅಡೂರಿನ ಮಾಟೆಬಯಲಿನಲ್ಲಿ ನೂತನವಾಗಿ ರಚಿಸಲಾದ ಮಹಾವಿಷ್ಣು ಹಾಗೂ ವಿಷ್ಣು ಪ್ರಿಯಾ ಎಂಬೆರಡು ಸ್ವಸಹಾಯ ಸಂಘಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆ, ಸಾಮಾಜಿಕ ಏಕತೆ, ಸ್ವಾವಲಂಬನೆ, ಪಿಡುಗು ರಹಿತ ಸಮಾಜಾಭಿವೃದ್ದಿಗಳೇ ಮೊದಲದ ಹಲವು ಹತ್ತು ಕಾರ್ಯ ಯೋಜನೆಗಳು ಲಕ್ಷಾಂತರ ಕುಟುಂಬಗಳಿಗೆ ಭರವಸೆಯ ಬೆಳಕಾಗಿ ಮೂಡಿಬಂದಿದೆ. ಯೋಜನೆಯ ಸದುಪಯೋಗವನ್ನು ಗರಿಷ್ಠ ಮಟ್ಟದಲ್ಲಿ ಪಡೆಯಬೇಕು ಎಂದು ಅವರು ತಿಳಿಸಿದರು.
ಕುಂಟಾರು ಒಕ್ಕೂಟದ ಉಪಾಧ್ಯಕ್ಷ ದಾಕೋಜಿ ರಾವ್ ಸಂಜೆಕಡವು ಅಧ್ಯಕ್ಷತೆ ವಹಿಸಿದ್ದರು. ತುಕೋಜಿ ರಾವ್ ಮಾಟೆ ಉಪಸ್ಥಿತರಿದ್ದರು. ನೂತನ ಸಂಘಗಳ ಅಧ್ಯಕ್ಷರುಗಳಾದ ಸಾವಿತ್ರಿ ಹಾಗೂ ಯಶೋಧಾ ಉಪಸ್ಥಿತರಿದ್ದರು. ರೇಣುಕಾ ಸ್ವಾಗತಿಸಿ, ಜಯಲಕ್ಷ್ಮೀ ಮಾಟೆ ವಂದಿಸಿದರು.
ಗ್ರಾ.ಯೋಜನೆಯ ಎರಡು ಸ್ವಸಹಾಯ ಸಂಘಗಳ ಉದ್ಘಾಟನೆ
ಮುಳ್ಳೇರಿಯ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ವರ್ತಮಾನದ ಜನಜೀವನದ ಮೇಲೆ ಬೀರಿರುವ ಗಾಢ ಪರಿಣಾಮವು ಪರಿಣಾಮಕಾರಿಯಾಗಿ ಸಮಗ್ರ ಅಭಿವೃದ್ದಿಗೆ ಪೂರಕವಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ, ಯಕ್ಷಗಾನ ಭಾಗವತ ನಾರಾಯಣ ಮಾಟೆ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನೇತೃತ್ವದಲ್ಲಿ ಗಡಿಗ್ರಾಮ ಅಡೂರಿನ ಮಾಟೆಬಯಲಿನಲ್ಲಿ ನೂತನವಾಗಿ ರಚಿಸಲಾದ ಮಹಾವಿಷ್ಣು ಹಾಗೂ ವಿಷ್ಣು ಪ್ರಿಯಾ ಎಂಬೆರಡು ಸ್ವಸಹಾಯ ಸಂಘಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆ, ಸಾಮಾಜಿಕ ಏಕತೆ, ಸ್ವಾವಲಂಬನೆ, ಪಿಡುಗು ರಹಿತ ಸಮಾಜಾಭಿವೃದ್ದಿಗಳೇ ಮೊದಲದ ಹಲವು ಹತ್ತು ಕಾರ್ಯ ಯೋಜನೆಗಳು ಲಕ್ಷಾಂತರ ಕುಟುಂಬಗಳಿಗೆ ಭರವಸೆಯ ಬೆಳಕಾಗಿ ಮೂಡಿಬಂದಿದೆ. ಯೋಜನೆಯ ಸದುಪಯೋಗವನ್ನು ಗರಿಷ್ಠ ಮಟ್ಟದಲ್ಲಿ ಪಡೆಯಬೇಕು ಎಂದು ಅವರು ತಿಳಿಸಿದರು.
ಕುಂಟಾರು ಒಕ್ಕೂಟದ ಉಪಾಧ್ಯಕ್ಷ ದಾಕೋಜಿ ರಾವ್ ಸಂಜೆಕಡವು ಅಧ್ಯಕ್ಷತೆ ವಹಿಸಿದ್ದರು. ತುಕೋಜಿ ರಾವ್ ಮಾಟೆ ಉಪಸ್ಥಿತರಿದ್ದರು. ನೂತನ ಸಂಘಗಳ ಅಧ್ಯಕ್ಷರುಗಳಾದ ಸಾವಿತ್ರಿ ಹಾಗೂ ಯಶೋಧಾ ಉಪಸ್ಥಿತರಿದ್ದರು. ರೇಣುಕಾ ಸ್ವಾಗತಿಸಿ, ಜಯಲಕ್ಷ್ಮೀ ಮಾಟೆ ವಂದಿಸಿದರು.