HEALTH TIPS

No title

               ಉದ್ಯಾವರ ವಷರ್ಾವಧಿ ಉತ್ಸವ ಆರಂಭ
     ಮಂಜೇಶ್ವರ: ಇತಿಹಾಸ ಪ್ರಸಿದ್ದ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವ ಕ್ಷೇತ್ರದ ವಷರ್ಾವಧಿ ಉತ್ಸವ ಹಾಗೂ ಐತಿಹಾಸಿಕ ಬಂಡಿ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಧ್ವಜಾರೋಹಣಗೊಳ್ಳುವುದರೊಂದಿಗೆ ಐತಿಹಾಸಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
    ಬಳಿಕ ಕಂಚಿಲ ಸೇವೆ, ಕಟ್ಟೆ ಪೂಜೆ, ದೀಪೋತ್ಸವ, ಬುಧವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ತಾಳ ಮದ್ದಳೆ, ಭಕ್ತಿ ರಸಮಂಜರಿ, ರಾತ್ರಿ 1 ಗಂಟೆಯಿಂದ ಕೊಠ್ಯದಾಯನ ನೇಮ, ಕಟ್ಟೆ ಪೂಜೆ, ಕೆರೆ ದೀಪೋತ್ಸವ ನಡೆಯಿತು.
  ಗುರುವಾರ ಬೆಳಿಗ್ಗೆ ತಮ್ಮ ದೈವದ ನೇಮ, 12.30ಕ್ಕೆ ಮಡಸ್ಥಾನ,  ಸಂಜೆ 4 ಕ್ಕೆ ಮುಂಡತಾಯ ದೈವಗಳ ನೇಮ, ರಾತ್ರಿ 7 ಕ್ಕೆ ನಡು ಬಂಡಿ ಉತ್ಸವಗಳು ನೆರವೇರಿದವು.
  ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ತಮ್ಮ ದೈವದ ನೇಮ, ಸಂಜೆ 4 ಕ್ಕೆ ಮುಂಡತಾಯ ದೈವಗಳ ನೇಮ, ರಾತ್ರಿ 6.30 ಕ್ಕೆ  ಕಡೆ ಬಂಡಿ ಉತ್ಸವ, ಸುಡು ಮದ್ದು ಪ್ರದರ್ಶನ, ಮೇ. 14 ರಂದು ರಾತ್ರಿ 10 ಗಂಟೆಗೆ ಧ್ವಜಾವರೋಹಣ ನಡೆಯಲಿದೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries