HEALTH TIPS

No title

               ಶಿವಳ್ಳಿ ಬ್ರಾಹ್ಮಣ ವಲಯ ಸಭೆ
     ಮಂಜೇಶ್ವರ: ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆಯು ಮುಳ್ಳತ್ಯ ನಾರಾಯಣ ಮನೊಳಿತ್ತಾಯರ ಮನೆಯಲ್ಲಿ ಭಾನುವಾರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕಾಯತರ್ಿಮಾರು ಕೃಷ್ಣ ಸರಳಾಯ ವಹಿಸಿದ್ದರು. ಕಾರ್ಯದಶರ್ಿ ಎಂ ಅನಂತರಾಮ ವರದಿ ಮಂಡಿಸಿದರು. ಸಂಘಟನೆಯ ವಲಯ ಅಧ್ಯಕ್ಷ ಕೊಟೆಗದ್ದೆ ದಿನೇಶ್ ಕುಮಾರ್ ಅಡಿಗ ಉಪಸ್ಥಿತರಿದ್ದರು.
   ಸಂಘಟನೆಯ ಮುಖಂಡರಾದ ಬಾಲಕೃಷ್ಣ ಮನೊಳಿತ್ತಾಯ, ವಾಮನ ಮನೊಳಿತ್ತಾಯ, ಶ್ರೀಧರ ಕಾರಂತ, ಶ್ರೀಪ್ರಸಾದ ಭಾರಿತ್ತಾಯ, ಪ್ರಶಾಂತ ರಾಜ ವಿ ತಂತ್ರಿ, ಕಮಲಾಕ್ಷಿ, ಸರಸ್ವತಿ, ರವಿರಾಜ ಕೇಕುಣ್ಣಾಯ ಆಲಂತಡ್ಕ, ಅನ್ನಪೂಣೇಶ್ವರಿ, ಶ್ರೀನಿಧಿ, ಸವಿತ, ವಸಂತಿ ಮೊದಲಾದವರು ಭಾಗವಹಿಸಿದ್ದರು. ಮುಳ್ಳೇರಿಯ ಶಿವಳ್ಳಿ ಬ್ರಾಹ್ಮಣ ಸಭಾದ ವತಿಯಿಂದ ನೀಡುವ ವಿಶಿಷ್ಟ ಸನ್ಮಾನವನ್ನು ಕಾಸರಗೋಡು ಜಿಲ್ಲಾ ಪ್ರಾಣಿ ರೋಗ ನಿಯಂತ್ರಣ ಯೋಜನೆಯ ಕೋ-ಆಡರ್ಿನೇಟರ್ ಡಾ. ಪಿ ನಾಗರಾಜ್ ಅವರಿಗೆ ನೀಡಿ ಗೌರವಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅದೇ ರೀತಿ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಉತ್ತಮ ಸೇವಕ ಪ್ರಶಸ್ತಿಯನ್ನು ಅಂಬಿತ್ತಿಮಾರು ಉದಯ ಕುಮಾರ್ ಸರಳಾಯ ಹಾಗೂ ಉತ್ತಮ ಸೇವಕಿ ಪ್ರಶಸ್ತಿಯನ್ನು ಅಡೂರಿನ ಸುಮತಿ ಬಿ ತಂತ್ರಿ ಅವರಿಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
   ಈ ವರ್ಷದ ಎಸ್ಎಸ್ಎಲ್ ಸಿ ಶೈಕ್ಷಣಿಕ ಪ್ರತಿಭಾ ಪುರಸ್ಕಾರವನ್ನು ವಲಯದ ಅರ್ಹ ವಿದ್ಯಾಥರ್ಿಗಳಿಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ನಾರಾಯಣ ಮನೊಳಿತ್ತಾಯ ಸ್ವಾಗತಿಸಿ, ಅನಂತರಾಮ ಕಡಂಬಳಿತ್ತಾಯ ವಂದಿಸಿದರು. ಸಂಘಟನೆಯ ವಾಷರ್ಿಕ ಮಹಾಸಭೆಯನ್ನು ಜೂ.17ರಂದು ಮಾಲೆಂಕಿ ಶಂಕರ ಕಡಂಬಳಿತ್ತಾಯರ ಮನೆಯಲ್ಲಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries