ಸಂಗೀತವು ದೈವೀಕ ಕಲೆ
ಬದಿಯಡ್ಕ: ಶಾಸ್ತ್ರೀಯ ಸಂಗೀತ ದೈವೀಕವಾದ ಒಂದು ಕಲೆ. ಕಠಿಣ ಪರಿಶ್ರಮದಿಂದಷ್ಟೆ ಸಂಗೀತ ಸಿದ್ದಿ ಸಾಧ್ಯ ಎಂದು ಖ್ಯಾತ ಸಂಗೀತ ಕಲಾವಿದ ಹಾಗೂ ಗುರು ವಿದ್ವಾನ್ ಗೋವಿಂದನ್ ನಂಬೂದಿರಿ ತಾಮರಕ್ಕಾಡ್ ಅವರು ಹೇಳಿದರು.
ಬದಿಯಡ್ಕ ಸಮೀಪದ ಬಳ್ಳಪದವಿನಲ್ಲಿರುವ ನಾರಾಯಣೀಯಮ್ ಸಮುಚ್ಚಯದ ಶ್ರೀ ವೀಣಾವಾದಿನಿ ಸಂಗೀತ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಸಂಗೀತದ ಬೇಸಿಗೆ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತಾಡಿದರು.
ಶಾಸ್ತ್ರೀಯ ಕಲೆಗಳಲ್ಲಿ ಪಾರಂಪರಿಕವಾದ ಭಾರತೀಯತ್ವ ಅಡಗಿದೆ. ಅವುಗಳನ್ನು ಕರಗತ ಮಾಡಿಕೊಂಡರೆ ನಾವು ನಿಜವಾದ ಭಾರತೀಯರಾಗುವುದಷ್ಟೇ ಅಲ್ಲ, ಸಾಂಸ್ಕೃತಿಕ ರಾಯಭಾರಿಗಳೂ ಆಗುತ್ತೇವೆ ಎಂದು ಅವರು ತಿಳಿಸಿದರು.
ನಾರಾಯಣೀಯಮ್ ಸಂಗೀತ ಪ್ರತಿಷ್ಠಾನದ ಸಂಚಾಲಕ ವಿದ್ವಾನ್ ಬಳ್ಳಪದವು ಯೋಗೀಶ ಶಮರ್ಾ ಸ್ವಾಗತಿಸಿದರು. ಮೂರು ದಿನಗಳ ಕಾಲ ಸಂಗೀತ ಶಿಬಿರವು ನಡೆಯುತ್ತಿದ್ದು, ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜೆಲ್ಲೆಯಿಂದ ಆಗಮಿಸಿದ ಸುಮಾರು ಮೂವತ್ತರಷ್ಟು ಶಿಬಿರಾಥರ್ಿಗಳು ಭಾಗವಹಿಸುತ್ತಿದ್ದಾರೆ. ಸಂಗೀತ ಪ್ರೇಮಿಗಳು ಮತ್ತು ಹೆತ್ತವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬದಿಯಡ್ಕ: ಶಾಸ್ತ್ರೀಯ ಸಂಗೀತ ದೈವೀಕವಾದ ಒಂದು ಕಲೆ. ಕಠಿಣ ಪರಿಶ್ರಮದಿಂದಷ್ಟೆ ಸಂಗೀತ ಸಿದ್ದಿ ಸಾಧ್ಯ ಎಂದು ಖ್ಯಾತ ಸಂಗೀತ ಕಲಾವಿದ ಹಾಗೂ ಗುರು ವಿದ್ವಾನ್ ಗೋವಿಂದನ್ ನಂಬೂದಿರಿ ತಾಮರಕ್ಕಾಡ್ ಅವರು ಹೇಳಿದರು.
ಬದಿಯಡ್ಕ ಸಮೀಪದ ಬಳ್ಳಪದವಿನಲ್ಲಿರುವ ನಾರಾಯಣೀಯಮ್ ಸಮುಚ್ಚಯದ ಶ್ರೀ ವೀಣಾವಾದಿನಿ ಸಂಗೀತ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಸಂಗೀತದ ಬೇಸಿಗೆ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತಾಡಿದರು.
ಶಾಸ್ತ್ರೀಯ ಕಲೆಗಳಲ್ಲಿ ಪಾರಂಪರಿಕವಾದ ಭಾರತೀಯತ್ವ ಅಡಗಿದೆ. ಅವುಗಳನ್ನು ಕರಗತ ಮಾಡಿಕೊಂಡರೆ ನಾವು ನಿಜವಾದ ಭಾರತೀಯರಾಗುವುದಷ್ಟೇ ಅಲ್ಲ, ಸಾಂಸ್ಕೃತಿಕ ರಾಯಭಾರಿಗಳೂ ಆಗುತ್ತೇವೆ ಎಂದು ಅವರು ತಿಳಿಸಿದರು.
ನಾರಾಯಣೀಯಮ್ ಸಂಗೀತ ಪ್ರತಿಷ್ಠಾನದ ಸಂಚಾಲಕ ವಿದ್ವಾನ್ ಬಳ್ಳಪದವು ಯೋಗೀಶ ಶಮರ್ಾ ಸ್ವಾಗತಿಸಿದರು. ಮೂರು ದಿನಗಳ ಕಾಲ ಸಂಗೀತ ಶಿಬಿರವು ನಡೆಯುತ್ತಿದ್ದು, ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜೆಲ್ಲೆಯಿಂದ ಆಗಮಿಸಿದ ಸುಮಾರು ಮೂವತ್ತರಷ್ಟು ಶಿಬಿರಾಥರ್ಿಗಳು ಭಾಗವಹಿಸುತ್ತಿದ್ದಾರೆ. ಸಂಗೀತ ಪ್ರೇಮಿಗಳು ಮತ್ತು ಹೆತ್ತವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.