ಪೆರಡಾಲ ಕ್ಷೇತ್ರಕ್ಕೆ ಧನಸಹಾಯ ಹಸ್ತಾಂತರ
ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ಸಭಾಭವನದ ಮೇಲಂತಸ್ತಿನ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ ಮೊತ್ತದ ಡಿ.ಡಿ.ಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನ ಎಂ. ಅವರು ಶ್ರೀ ಉದನೇಶ್ವರ ಸೇವಾ ಸಮಿತಿಯ ಉಪಾಧ್ಯಕ್ಷ ಜಯದೇವ ಖಂಡಿಗೆ ಅವರಿಗೆ ಬುಧವಾರ ಶ್ರೀ ಉದನೇಶ್ವರ ಸಭಾಭವನದ ಮುಂಭಾಗ ಹಸ್ತಾಂತರಿಸಿ ಕಾಮಗಾರಿಯ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ಉದನೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ವೆಂಕಟಕೃಷ್ಣ, ಪ್ರಧಾನ ಅರ್ಚಕ ವೇ.ಮೂ.ಶಿವರಾಮ ಭಟ್, ಧ.ಗ್ರಾ.ಯೋಜನೆಯ ಬದಿಯಡ್ಕ ವಲಯ ಮೇಲ್ವಿಚಾರಕ ಧನಂಜಯ, ಟಿ.ಕೆ.ನಾರಾಯಣ ಭಟ್ ಪಂಜಿತ್ತಡ್ಕ, ರಂಜನ್ ಪೆರಡಾಲ, ಸಿಬ್ಬಂದಿ ವರ್ಗದವರಾದ ಮಹಾಲಿಂಗ ಭಟ್ ಪಟ್ಟಾಜೆ, ಶ್ರೀರಾಮ ಪೆರಡಾಲ, ಮಂಜುನಾಥ ಪಟ್ಟಾಜೆ ಜೊತೆಗಿದ್ದರು.
ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ಸಭಾಭವನದ ಮೇಲಂತಸ್ತಿನ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ ಮೊತ್ತದ ಡಿ.ಡಿ.ಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನ ಎಂ. ಅವರು ಶ್ರೀ ಉದನೇಶ್ವರ ಸೇವಾ ಸಮಿತಿಯ ಉಪಾಧ್ಯಕ್ಷ ಜಯದೇವ ಖಂಡಿಗೆ ಅವರಿಗೆ ಬುಧವಾರ ಶ್ರೀ ಉದನೇಶ್ವರ ಸಭಾಭವನದ ಮುಂಭಾಗ ಹಸ್ತಾಂತರಿಸಿ ಕಾಮಗಾರಿಯ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ಉದನೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ವೆಂಕಟಕೃಷ್ಣ, ಪ್ರಧಾನ ಅರ್ಚಕ ವೇ.ಮೂ.ಶಿವರಾಮ ಭಟ್, ಧ.ಗ್ರಾ.ಯೋಜನೆಯ ಬದಿಯಡ್ಕ ವಲಯ ಮೇಲ್ವಿಚಾರಕ ಧನಂಜಯ, ಟಿ.ಕೆ.ನಾರಾಯಣ ಭಟ್ ಪಂಜಿತ್ತಡ್ಕ, ರಂಜನ್ ಪೆರಡಾಲ, ಸಿಬ್ಬಂದಿ ವರ್ಗದವರಾದ ಮಹಾಲಿಂಗ ಭಟ್ ಪಟ್ಟಾಜೆ, ಶ್ರೀರಾಮ ಪೆರಡಾಲ, ಮಂಜುನಾಥ ಪಟ್ಟಾಜೆ ಜೊತೆಗಿದ್ದರು.