ಸುದರ್ಶನದಿಂದ "ಜಲ ಯಜ್ಞ " ಜಿಲ್ಲಾಧಿಕಾರಿ ಯವರಿಂದ ಪ್ರಶಂಸೆ
ಪೆರ್ಲ: ಗ್ರಾಮೀಣ ಅಭಿವೃದ್ಧಿ ಕನಸಿನೊಂದಿಗೆ ರೂಪುಗೊಂಡ ಕ್ರಿಯಾ ಸಮಿತಿ ಸುದರ್ಶನದ ಏತಡ್ಕ ಘಟಕದ ದಿಂದ "ಜಲ ಯಜ್ಞ" (ಮಿಶನ್ ವಾಟರ್ ಸಪ್ಲೈ) ಯೋಜನೆಯಂತೆ ಎಣ್ಮಕಜೆ, ಬೆಳ್ಳೂರು, ಕುಂಬ್ಡಾಜೆ ಈ ಮೂರು ವಾಡರ್ುಗಳಲ್ಲಿ ಕುಡಿನೀರಿನ ಅಭಾವ ಇರುವ ಮನೆಗಳನ್ನು ಗುರುತು ಹಚ್ಚಿ ನೀರಿನ ವಿತರಣೆ ನಡಸಲಾಯಿತು.
ಭಾನುವಾರ ಬೆಳಗ್ಗೆ ಎಣ್ಮಕಜೆ ಗ್ರಾಮ ಪಂಚಾಯಿತಿನ ಸದಸ್ಯೆ ಶಶಿಕಲ ಇಳಂತೋಡಿಯವರ ಮನೆಯಿಂದ ನೀರು ಸಂಗ್ರಹಿಸುವ ಮೂಲಕ ಸುದರ್ಶನ ಏತಡ್ಕ ಘಟಕದ ಸಂಚಾಲಕರಾದ ರಾಧಾಕೃಷ್ಣ ಇಳಂತೋಡಿಯವರು ನೀರಿನ ವಿತರಣೆಯ ಉದ್ಘಾಟನೆಯನ್ನು ನಿರ್ವಹಿಸಿದರು.ಸಂಗ್ರಹಿಸಿದ ನೀರನ್ನು
ಅನೋತ್ತಡ್ಕ, ಬೀಜದಕಟ್ಟೆ, ಬೈಲಮೂಲೆ ಅದೇ ರೀತಿ ಏತಡ್ಕದ ಸುಬ್ರಹ್ಮಣ್ಯ ಭಟ್ ಶಿವಸದನ ಅವರ ಮನೆಯಿಂದ ಸಂಗ್ರಹಿಸಿದ ನೀರನ್ನು ಆನೆಪ್ಪಳ್ಳ , ಏತಡ್ಕ, ಕಿಳಿಂಗಾರು ಟ್ರೇಡಸರ್್ ಮಾಲಕ ಮಹಾಲಿಂಗ ಭಟ್ ಅವರ ಮನೆಯಿಂದ ಸಂಗ್ರಹಿಸಿದ ನೀರನ್ನು ವಾಣೀನಗರ, ನಿವೃತ್ತ ಜವಾನ ಉಪ್ಪಳ ಅಗ್ನಿಶಾಮಕ ದಳದ ಸಿಬಂದಿ ಈಶ್ವರ ನಾಯ್ಕ್ ಸ್ವರ್ಗ ಹಾಗೂ ವಿವೇಕಾನಂದ ಭಟ್ ಬಿ.ಕೆ. ಅವರ ಮನೆಯಿಂದ ಸಂಗ್ರಹಿಸಿದ ನೀರನ್ನು ಸ್ವರ್ಗ- ಸೂರಂಬೈಲುಕಟ್ಟೆ, ಕೆದಂಬಾಯಿಮೂಲೆ, ಕೊಡೆಂಕೀರಿ, ಪೆರಿಯಾಲ್ ಭಾಗಗಳಿಗೆ ವಿತರಿಸಲಾಯಿತು. ಬೆಳಗ್ಗೆ ಒಂಭತ್ತು ಗಂಟೆಗೆ ಆರಂಭವಾದ ಸಂಗ್ರಹ ಹಾಗೂ ವಿತರಣಾ ಕಾರ್ಯವು ಸಂಜೆ 6 ಗಂಟೆಯವರೆಗೂ ನಡೆಯಿತು. ವಾಣೀನಗರ ಪ್ಲಸ್ ಟು ವಿಭಾಗದಲ್ಲಿ ಶೇಕಡಾವಾರು 86 ಅಂಕಗಳೊಂದಿಗೆ ಕಾಲೇಜು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿರುವ ಪ್ರದೀಪ್ ಶಾಂತಿಯಡಿ, ಸುದರ್ಶನ ಬಳಗದ ಇತರ ಸದಸ್ಯರಾದ ಜಗದೀಶ್ ಕುತ್ತಾಜೆ, ರವೀಶ್ ಏತಡ್ಕ, ಕೃಷ್ಣ ಜೆ, ತಿಲಕ್ ರಾಜ್ ಸ್ವರ್ಗ, ಪಿಕ್ ಅಪ್ ವಾಹನ ಚಾಲಕ ಜಯ ಬೆಳೇರಿ ಸಹಕರಿಸಿದರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ದಾನಿಗಳ ಸಹಾಯದೊಂದಿಗೆ ಈ ವಿತರಣಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಸುದರ್ಶನದ ಜನ ಪರ ಕಾರ್ಯಗಳಿಗೆ ಸರ್ವತ್ರ ಪ್ರಶಂಸೆಗೆ ವ್ಯಕ್ತವಾಗಿದ್ದು ಸಾಮಾಜಿಕ ಜಾಲತಾಣ ಮೂಲಕ ಈ ವಿಚಾರವನ್ನು ಅರಿತ ಕಾಸರಗೋಡು ಜಿಲ್ಲಾಧಿಕಾರಿ ಕೆ. ಜೀವನ್ ಬಾಬು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರಲ್ಲದೆ ನೀರಿನ ಉಳಿತಾಯಕ್ಕಾಗಿ ಕ್ರಿಯಾ ಚಟುವಟಿಕೆಗಳನ್ನು ನಡೆಸುವಂತೆ ಕೋರಿದರು.
ಪೆರ್ಲ: ಗ್ರಾಮೀಣ ಅಭಿವೃದ್ಧಿ ಕನಸಿನೊಂದಿಗೆ ರೂಪುಗೊಂಡ ಕ್ರಿಯಾ ಸಮಿತಿ ಸುದರ್ಶನದ ಏತಡ್ಕ ಘಟಕದ ದಿಂದ "ಜಲ ಯಜ್ಞ" (ಮಿಶನ್ ವಾಟರ್ ಸಪ್ಲೈ) ಯೋಜನೆಯಂತೆ ಎಣ್ಮಕಜೆ, ಬೆಳ್ಳೂರು, ಕುಂಬ್ಡಾಜೆ ಈ ಮೂರು ವಾಡರ್ುಗಳಲ್ಲಿ ಕುಡಿನೀರಿನ ಅಭಾವ ಇರುವ ಮನೆಗಳನ್ನು ಗುರುತು ಹಚ್ಚಿ ನೀರಿನ ವಿತರಣೆ ನಡಸಲಾಯಿತು.
ಭಾನುವಾರ ಬೆಳಗ್ಗೆ ಎಣ್ಮಕಜೆ ಗ್ರಾಮ ಪಂಚಾಯಿತಿನ ಸದಸ್ಯೆ ಶಶಿಕಲ ಇಳಂತೋಡಿಯವರ ಮನೆಯಿಂದ ನೀರು ಸಂಗ್ರಹಿಸುವ ಮೂಲಕ ಸುದರ್ಶನ ಏತಡ್ಕ ಘಟಕದ ಸಂಚಾಲಕರಾದ ರಾಧಾಕೃಷ್ಣ ಇಳಂತೋಡಿಯವರು ನೀರಿನ ವಿತರಣೆಯ ಉದ್ಘಾಟನೆಯನ್ನು ನಿರ್ವಹಿಸಿದರು.ಸಂಗ್ರಹಿಸಿದ ನೀರನ್ನು
ಅನೋತ್ತಡ್ಕ, ಬೀಜದಕಟ್ಟೆ, ಬೈಲಮೂಲೆ ಅದೇ ರೀತಿ ಏತಡ್ಕದ ಸುಬ್ರಹ್ಮಣ್ಯ ಭಟ್ ಶಿವಸದನ ಅವರ ಮನೆಯಿಂದ ಸಂಗ್ರಹಿಸಿದ ನೀರನ್ನು ಆನೆಪ್ಪಳ್ಳ , ಏತಡ್ಕ, ಕಿಳಿಂಗಾರು ಟ್ರೇಡಸರ್್ ಮಾಲಕ ಮಹಾಲಿಂಗ ಭಟ್ ಅವರ ಮನೆಯಿಂದ ಸಂಗ್ರಹಿಸಿದ ನೀರನ್ನು ವಾಣೀನಗರ, ನಿವೃತ್ತ ಜವಾನ ಉಪ್ಪಳ ಅಗ್ನಿಶಾಮಕ ದಳದ ಸಿಬಂದಿ ಈಶ್ವರ ನಾಯ್ಕ್ ಸ್ವರ್ಗ ಹಾಗೂ ವಿವೇಕಾನಂದ ಭಟ್ ಬಿ.ಕೆ. ಅವರ ಮನೆಯಿಂದ ಸಂಗ್ರಹಿಸಿದ ನೀರನ್ನು ಸ್ವರ್ಗ- ಸೂರಂಬೈಲುಕಟ್ಟೆ, ಕೆದಂಬಾಯಿಮೂಲೆ, ಕೊಡೆಂಕೀರಿ, ಪೆರಿಯಾಲ್ ಭಾಗಗಳಿಗೆ ವಿತರಿಸಲಾಯಿತು. ಬೆಳಗ್ಗೆ ಒಂಭತ್ತು ಗಂಟೆಗೆ ಆರಂಭವಾದ ಸಂಗ್ರಹ ಹಾಗೂ ವಿತರಣಾ ಕಾರ್ಯವು ಸಂಜೆ 6 ಗಂಟೆಯವರೆಗೂ ನಡೆಯಿತು. ವಾಣೀನಗರ ಪ್ಲಸ್ ಟು ವಿಭಾಗದಲ್ಲಿ ಶೇಕಡಾವಾರು 86 ಅಂಕಗಳೊಂದಿಗೆ ಕಾಲೇಜು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿರುವ ಪ್ರದೀಪ್ ಶಾಂತಿಯಡಿ, ಸುದರ್ಶನ ಬಳಗದ ಇತರ ಸದಸ್ಯರಾದ ಜಗದೀಶ್ ಕುತ್ತಾಜೆ, ರವೀಶ್ ಏತಡ್ಕ, ಕೃಷ್ಣ ಜೆ, ತಿಲಕ್ ರಾಜ್ ಸ್ವರ್ಗ, ಪಿಕ್ ಅಪ್ ವಾಹನ ಚಾಲಕ ಜಯ ಬೆಳೇರಿ ಸಹಕರಿಸಿದರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ದಾನಿಗಳ ಸಹಾಯದೊಂದಿಗೆ ಈ ವಿತರಣಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಸುದರ್ಶನದ ಜನ ಪರ ಕಾರ್ಯಗಳಿಗೆ ಸರ್ವತ್ರ ಪ್ರಶಂಸೆಗೆ ವ್ಯಕ್ತವಾಗಿದ್ದು ಸಾಮಾಜಿಕ ಜಾಲತಾಣ ಮೂಲಕ ಈ ವಿಚಾರವನ್ನು ಅರಿತ ಕಾಸರಗೋಡು ಜಿಲ್ಲಾಧಿಕಾರಿ ಕೆ. ಜೀವನ್ ಬಾಬು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರಲ್ಲದೆ ನೀರಿನ ಉಳಿತಾಯಕ್ಕಾಗಿ ಕ್ರಿಯಾ ಚಟುವಟಿಕೆಗಳನ್ನು ನಡೆಸುವಂತೆ ಕೋರಿದರು.