HEALTH TIPS

No title

                ಆದೂರು ಎಸ್ಪಿಸಿ ಶಿಬಿರ ಆರಂಭ
    ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಜೂನಿಯರ್ ಕೆಡೇಟ್ಗಳ ಎಸ್ಪಿಸಿ ಶಿಬಿರ ಮಂಗಳವಾರ ಆರಂಭಗೊಂಡಿತು.
     ಜಲ ಸಂರಕ್ಷಣೆಯ ಉದ್ಧೇಶದೊಂದಿಗೆ  ಆರಂಭಗೊಂಡ ಶಿಬಿರವನ್ನು ಆದೂರು ಪೊಲೀಸ್ ಠಾಣೆಯ ಎಸ್ಐ ರಾಜನ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಗ್ರಾಮ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಪಟ್ಟಾಂಗ್, ಉಪಾಧ್ಯಕ್ಷ ಮುಹಮ್ಮದ್ ಹನೀಫ, ಆದೂರು ಪೊಲೀಸ್ ಠಾಣೆಯ ಮುಖ್ಯ ಕಾರಕೂನ ಸುರೇಶ್, ಡ್ರಿಲ್ ಇನ್ಸ್ಫೆಕ್ಟರ್ ಪ್ರಿಯೇಶ್, ಎ.ಕೆ.ಅಬ್ದುಲ್ ರಹಿಮಾನ್ ಹಾಜಿ, ಶಿಕ್ಷಕಕರಾದ ಪ್ರಕಾಶ್.ಎಂ, ಉಮ್ಮರ್, ಯುವಜನ ಸಹೃದಯ ಕೂಟದ ಅಲಿ.ಬಿ.ಎ. ಉಪಸ್ಥಿತರಿದ್ದರು. ಆದೂರಿನ ಯುವಜನ ಸಹೃದಯ ಕೂಟದ ವತಿಯಿಂದ ನೂತನವಾಗಿ ಶಾಲೆಗೆ ದಾಖಲುಗೊಳ್ಳುವ ವಿದ್ಯಾಥರ್ಿಗಳಿಗೆ ನೀಡುವ ಕಿಟ್ನ್ನು ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.
   ಸಿಪಿಒ ಮುಹಮ್ಮದ್ ಸಲೀಮ್ ಸ್ವಾಗತಿಸಿ, ಎಸಿಪಿಒ ಸರಸ್ವತಿ.ಕೆ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries