HEALTH TIPS

No title

            ದೈವ ದೇವರುಗಳ ಆರಾಧನೆಯಿಂದ ಶಾಂತಿ, ಸಂತೃಪ್ತಿ : ವಿಷ್ಣು ಆಸ್ರ
   ಮಧೂರು: ದೈವ ದೇವರುಗಳ ಆರಾಧನೆಯಿಂದ ಮಾನಸಿಕ ತುಮುಲ ದೂರವಾಗಿ ಜೀವನದಲ್ಲಿ, ಸಮಾಜದಲ್ಲಿ ಶಾಂತಿ, ಸಂತೃಪ್ತಿ ನೆಲೆಸುವುದು. ಉತ್ಸವಾಚರಣೆಗಳಿಂದ ಸಮಾಜದಲ್ಲಿರುವ ಜನರ ನಡುವೆ ಇರುವ ಸ್ನೇಹ, ಸೌಹಾರ್ದ, ಒಗ್ಗಟ್ಟು ಇನ್ನಷ್ಟು ಸದೃಢವಾಗುವುದು ಎಂದು ಉಳಿಯತ್ತಾಯ ವಿಷ್ಣು ಆಸ್ರ ಅವರು ಹೇಳಿದರು.
   ಶ್ರೀ ವಿಷ್ಣುಮೂತರ್ಿ ದೈವದ ಒತ್ತೆಕೋಲ ಮಹೋತ್ಸವದ ಅಂಗವಾಗಿ ಪಟ್ಲ ಭಂಡಾರ ಮನೆ ತರವಾಡಿನ ಮುಂಭಾಗದಲ್ಲಿ ಇತ್ತೀಚೆಗೆ ನಡೆದ ಧಾಮರ್ಿಕ ಸಭೆಯಲ್ಲಿ ಆಶೀರ್ವಚನಗೈದು ಅವರು ಮಾತನಾಡಿದರು.
   ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ಪೆಜತ್ತಾಯ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಶ್ರೀ ವಿಷ್ಣು ಮೂತರ್ಿ ಸೇವಾ ಸಮಿತಿಯ ಅಧ್ಯಕ್ಷ ರಘುನಾಥ ಶೆಟ್ಟಿ ಕುದ್ರೆಪ್ಪಾಡಿ ಉಪಸ್ಥಿತರಿದ್ದರು. ಸೇವಾ ಸಮಿತಿ ಕಾರ್ಯದಶರ್ಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಉಪಾಧ್ಯಕ್ಷ ಸುಕುಮಾರ ಕುದ್ರೆಪ್ಪಾಡಿ ವಂದಿಸಿದರು.
   ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮದರು ಅಮ್ಮ ಸ್ಮಾರಕ ಕಲಾ ಸಮಿತಿ ಪುಳಿಂಕುನ್ನಂ ಇವರಿಂದ ಜಾನಪದ ಗೀತಾ ಗಾಯನ ಕಾರ್ಯಕ್ರಮ ಜರಗಿತು. ಬಳಿಕ ಶ್ರೀ ವಿಷ್ಣುಮೂತಿರ ದೈವದ ಒತ್ತೆಕೋಲ ಮಹೋತ್ಸವ ನಡೆಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries