HEALTH TIPS

No title

            ಮಂದಿರ ಲೋಕಾರ್ಪಣೆ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಛಾಯಾಬಿಂಬ ಪ್ರತಿಷ್ಠೆ ಸಂಪನ್ನ
     ಪೆರ್ಲ:  ಇಲ್ಲಿನ ನೂತನ ಶ್ರೀ ಅಯ್ಯಪ್ಪ ಭಜನಾ ಮಂದಿರದ ಲೋಕಾರ್ಪಣೆ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಛಾಯಾಬಿಂಬ ಪ್ರತಿಷ್ಠೆಯು ಮಂಗಳವಾರ ವಿವಿಧ ತಂಡಗಳ ಭಜನಾ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
     ಮಂಗಳವಾರ ಬೆಳಿಗ್ಗೆ 6.30 ಕ್ಕೆ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ವೇದಮೂತರ್ಿ ಶುಳುವಾಲಮೂಲೆ ಶಿವಸುಬ್ರಹ್ಮಣ್ಯ ಭಟ್  ದೀಪಪ್ರಜ್ವಲನೆಗೊಳಿಸಿದರು.  ಗಣಪತಿ ಹವನ ನಡೆದ ಬಳಿಕ ರಾತ್ರಿ 9.15ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆಗಳು ನಡೆದವು. ಪೆರ್ಲದ ಅಯ್ಯಪ್ಪ ಸ್ವಾಮಿ ಭಜನಾ ತಂಡ, ಬೇಂಗಪದವು ಶ್ರಶಾರದಾಂಬಾ ಭಜನಾ ಸಂಘ, ನಲ್ಕ ಶ್ರೀವಾಗ್ದೇವಿ ಭಜನಾ ಸಂಘ, ಇಡಿಯಡ್ಕ ಶ್ರೀಉಳ್ಳಾಲ್ತಿ ಭಜನಾ ಸಂಘ, ಉಕ್ಕಿನಡ್ಕ ಅಯ್ಯಪ್ಪ ಸ್ವಾಮಿ ಭಜನಾ ಸಂಘ, ಬಜಕ್ಕೂಡ್ಳು ಶ್ರೀಮಹಾಲಿಂಗೇಶ್ವರ ಭಜನಾ ಸಂಘ, ಕಾಸರಗೋಡು ತೆರುವತ್ತ್ನ ಚೀರುಂಬಾ ಭಗವತೀ ಭಜನಾ ಸಂಘದವರ ಕುಣಿತ ಭಜನೆ, ಮೊಗೇರು ಶ್ರೀದುಗರ್ಾಪರಮೇಶ್ವರಿ ಭಜನಾ ಸಂಘ, ಪೆರ್ಲ ವಿಶ್ವರೂಪ ಭಜನಾ ಸಂಘ, ಬಣ್ಪುತ್ತಡ್ಕ ಶ್ರೀಅಯ್ಯಪ್ಪ ಸ್ವಾಮಿ ಭಜನಾ ಸಂಘ, ಮಣಿಯಂಪಾರೆ ದುಗರ್ಾಪರಮೇಶ್ವರಿ ಭಜನಾ ಸಂಘ, ಬೆದ್ರಂಪಳ್ಳ ಗಣೇಶ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆಗಳು ನಡೆದವು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಬೆಳಿಗ್ಗೆ ಭಜನಾ ಸಮಕೀರ್ತನದಲ್ಲಿ ಪಾಲ್ಗೊಂಡರು.
     ರಾತ್ರಿ 10 ರಿಂದ ಸಸಿಹಿತ್ಲು ಶ್ರೀಭಗವತೀ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಪುಣ್ಣಮೆದ ಪೊಣ್ಣು ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries