ಗ್ರಾ.ಪಂ. ವತಿಯಿಂದ ಶಾಲೆಗಳಿಗೆ ಪುಸ್ತಕ ವಿತರಣೆ
ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ ವತಿಯಿಂದ ಬದಿಯಡ್ಕ ಗ್ರಾಮ ಪಂಚಾಯತಿಗೊಳಪಟ್ಟ ಎಲ್ಲಾ ಶಾಲಾ ಲೈಬ್ರೆರಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಬದಿಯಡ್ಕ ಗ್ರಾಮ ಪಂಚಾಯತು ಸಭಾಭವನದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬದಿಯಡ್ಕ ಗ್ರಾ.ಪಂ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅವರು ಮಾತನಾಡಿ ದಾನಗಳಲ್ಲೇ ಅತಿಶ್ರೇಷ್ಠ ದಾನವಾದ ವಿದ್ಯಾದಾನವನ್ನು ಪ್ರೋತ್ಸಾಹಿಸುವ ಕಾರ್ಯಚಟುವಟಿಕೆಗಳಾಗಬೇಕು. ವಿದ್ಯಾಭ್ಯಾಸವೆಂಬುದು ಕೇವಲ ಪಠ್ಯಗಳನ್ನು ಕೇಂದ್ರೀಕರಿಸಿ ಮಾತ್ರವಾದಲ್ಲಿ ಪೂರ್ಣತೆ ಪಡೆಯದು. ಪುಸ್ತಕಗಳ ಓದು ಅಪರಿಮಿತವಾದ ಜ್ಞಾನವನ್ನು ಒದಗಿಸುವಲ್ಲಿ ಪ್ರಧಾನ ಭೂಮಿಕೆಯಾಗಿದ್ದು, ವಿದ್ಯಾಥರ್ಿಗಳಿಗೆ ಪುಸ್ತಕಗಳನ್ನು ಒದಗಿಸುವ ಮೂಲಕ ಗ್ರಾ.ಪಂ. ವಿದ್ಯಾಭ್ಯಾಸಕ್ಕೆ ಹೊಸ ಅರ್ಥನೀಡುವಲ್ಲಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಬದಿಯಡ್ಕ ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿ ಮಾತಾಡಿ ಪಂಚಾಯತ್ಗೆ ಒಳಪಟ್ಟ ಎಲ್ಲಾ ಶಾಲೆಗಳಿಗೆ ಪುಸ್ತಕವನ್ನು ನೀಡುವುದರ ಮೂಲಕ ಮಹತ್ತರವಾದ ಕಾರ್ಯವನ್ನು ಮಾಡಿದೆ. ಬಡ ವಿದ್ಯಾಥರ್ಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೈಗೊಂಡ ಈ ತೀಮರ್ಾನವು ಮಾದರಿಯಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಬದಿಯಡ್ಕ ಪಂಚಾಯತಿ ವತಿಯಿಂದ ಇನ್ನು ಹೆಚ್ಚಿನ ಪ್ರೋತ್ಸಾಹದ ಯೋಜನೆಗಳನ್ನು ನೀಡಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ವಿಶ್ವನಾಥ ಪ್ರಭು, ಬ್ಲಾಕ್ ಪಂಚಾಯತು ಸದಸ್ಯ ಎ.ಎಸ್ ಅಹಮ್ಮದ್, ಮಾಜಿ ಪಂಚಾಯತಿ ಅಧ್ಯಕ್ಷ ಮಾಹೀನ್ ಕೇಳೋಟ್ ಶುಭಾಶಂಸನೆಗೈದರು. ರಾಮಕೃಷ್ಣ ಭಟ್, ಮಹಾಲಿಂಗೇಶ್ವರ ಭಟ್, ಶ್ಯಾಮ್ ಭಟ್, ಮೋಹನ್.ಎ.ವಿ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿ ಅಂಬಿಕಾ ಸರಸ್ವತಿ ಸ್ವಾಗತಿಸಿ, ಟಿ.ಗೋವಿಂದ ನಂಬೂದಿರಿ ವಂದಿಸಿದರು.
ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ ವತಿಯಿಂದ ಬದಿಯಡ್ಕ ಗ್ರಾಮ ಪಂಚಾಯತಿಗೊಳಪಟ್ಟ ಎಲ್ಲಾ ಶಾಲಾ ಲೈಬ್ರೆರಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಬದಿಯಡ್ಕ ಗ್ರಾಮ ಪಂಚಾಯತು ಸಭಾಭವನದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬದಿಯಡ್ಕ ಗ್ರಾ.ಪಂ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅವರು ಮಾತನಾಡಿ ದಾನಗಳಲ್ಲೇ ಅತಿಶ್ರೇಷ್ಠ ದಾನವಾದ ವಿದ್ಯಾದಾನವನ್ನು ಪ್ರೋತ್ಸಾಹಿಸುವ ಕಾರ್ಯಚಟುವಟಿಕೆಗಳಾಗಬೇಕು. ವಿದ್ಯಾಭ್ಯಾಸವೆಂಬುದು ಕೇವಲ ಪಠ್ಯಗಳನ್ನು ಕೇಂದ್ರೀಕರಿಸಿ ಮಾತ್ರವಾದಲ್ಲಿ ಪೂರ್ಣತೆ ಪಡೆಯದು. ಪುಸ್ತಕಗಳ ಓದು ಅಪರಿಮಿತವಾದ ಜ್ಞಾನವನ್ನು ಒದಗಿಸುವಲ್ಲಿ ಪ್ರಧಾನ ಭೂಮಿಕೆಯಾಗಿದ್ದು, ವಿದ್ಯಾಥರ್ಿಗಳಿಗೆ ಪುಸ್ತಕಗಳನ್ನು ಒದಗಿಸುವ ಮೂಲಕ ಗ್ರಾ.ಪಂ. ವಿದ್ಯಾಭ್ಯಾಸಕ್ಕೆ ಹೊಸ ಅರ್ಥನೀಡುವಲ್ಲಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಬದಿಯಡ್ಕ ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿ ಮಾತಾಡಿ ಪಂಚಾಯತ್ಗೆ ಒಳಪಟ್ಟ ಎಲ್ಲಾ ಶಾಲೆಗಳಿಗೆ ಪುಸ್ತಕವನ್ನು ನೀಡುವುದರ ಮೂಲಕ ಮಹತ್ತರವಾದ ಕಾರ್ಯವನ್ನು ಮಾಡಿದೆ. ಬಡ ವಿದ್ಯಾಥರ್ಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೈಗೊಂಡ ಈ ತೀಮರ್ಾನವು ಮಾದರಿಯಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಬದಿಯಡ್ಕ ಪಂಚಾಯತಿ ವತಿಯಿಂದ ಇನ್ನು ಹೆಚ್ಚಿನ ಪ್ರೋತ್ಸಾಹದ ಯೋಜನೆಗಳನ್ನು ನೀಡಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ವಿಶ್ವನಾಥ ಪ್ರಭು, ಬ್ಲಾಕ್ ಪಂಚಾಯತು ಸದಸ್ಯ ಎ.ಎಸ್ ಅಹಮ್ಮದ್, ಮಾಜಿ ಪಂಚಾಯತಿ ಅಧ್ಯಕ್ಷ ಮಾಹೀನ್ ಕೇಳೋಟ್ ಶುಭಾಶಂಸನೆಗೈದರು. ರಾಮಕೃಷ್ಣ ಭಟ್, ಮಹಾಲಿಂಗೇಶ್ವರ ಭಟ್, ಶ್ಯಾಮ್ ಭಟ್, ಮೋಹನ್.ಎ.ವಿ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿ ಅಂಬಿಕಾ ಸರಸ್ವತಿ ಸ್ವಾಗತಿಸಿ, ಟಿ.ಗೋವಿಂದ ನಂಬೂದಿರಿ ವಂದಿಸಿದರು.