HEALTH TIPS

No title

              ಪೆನ್ಶನರ್ಸ್ ಸಂಘದ ಉತ್ತರ ವಲಯ ಸಮ್ಮೇಳನ
   ಕುಂಬಳೆ: ರಾಷ್ಟ್ರೀಯತೆಯ ನಿಲುವಿನೊಂದಿಗೆ ಸಾಮಾಜಿಕ ಬದ್ದತೆಯಿಂದ ಕಾರ್ಯತತ್ಪರರಾಗಬೇಕೆಂದು ಬಿಎಂಎಸ್ ಪ್ರಾಂತ್ಯ ಪ್ರಧಾನ ಕಾರ್ಯದಶರ್ಿ ಎಂ.ಸಿ.ರಾಜೀವನ್ ಕರೆನೀಡಿದರು.
   ಕಳತ್ತೂರಿನ ಮಹಾದೇವ ಸಭಾಂಗಣದಲ್ಲಿ ಮಂಗಳವಾರದಿಂದ ಹಮ್ಮಿಕೊಂಡಿರುವ ಕೇರಳ ಸ್ಟೇಟ್ ಪೆನ್ಶನಸರ್್ ಸಂಘದ ಉತ್ತರ ವಲಯ ಸಮ್ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಪಿಂಚಣಿದಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಈಶ್ವರ ರಾವ್ ಅಧ್ಯಕ್ಷತೆ ವಹಿಸಿದ್ದರು. ಶಿವರಾಮ ಭಟ್, ಗೋಪಾಲ ಚೆಟ್ಟಿಯಾರ್, ಎಸ್.ಕೆ.ವಿ.ಶಮರ್ಾ, ಶಿವರಾಮ ಭಂಡಾರಿ ಉಪಸ್ಥಿತರಿದ್ದು ಶುಭಹಾರೈಸಿದರು. ಪ್ರಾಂತ್ಯ ಉಪಾಧ್ಯಕ್ಷ ಪಿ.ಎಂ.ವಾಸುದೇವನ್ ಸ್ವಾಗತಿಸಿ, ವಂದಿಸಿದರು.
   ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ "ಪಿಂಚಣಿದಾರರ ಬದ್ದತೆ" ಎಂಬ ವಿಷಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತೀಯ ಸಹ ಪ್ರಚಾರ ಪ್ರಮುಖ್ ಎಂ. ಬಾಲಕೃಷ್ಣನ್ ಮಾತನಾಡಿದರು. ಕೇಂದ್ರ ಸರಕಾರದ ವಿವಿಧ ಜನಕಲ್ಯಾಣ ಯೋಜನೆಯ ಬಗ್ಗೆ ನಿವೃತ್ತ ಜಿಲ್ಲಾ ಯೋಜನಾಧಿಕಾರಿ ಅಜಯನ್ ಮೆನೋತ್, ಸಂಘಟನಾ ವಿಕಾಸದ ಕುರಿತು ಪಿಂಚಣಿದಾರರ ಸಂಘದ ಪ್ರಾಂತ್ಯ ಕಾರ್ಯಕಾರಿಣೀ ಸದಸ್ಯ ಟಿ.ಎಂ.ನಾರಾಯಣನ್ ವಿಚಾರ ಮಂಡನೆಗೈದರು. ಬುಧವಾರ ಅಪರಾಹ್ನ ನಡೆದ ಆರೋಗ್ಯ ಪರಿಪಾಲನೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಬೇಳ ಕೌಮುದೀ ಗ್ರಾಮೀಣ ನೇತ್ರಾಲಯದ ಡಾ. ಸುನಿಲ್ ಮಾಹಿತಿ ನೀಡಿದರು. ಸಂಜೆ ಸಮಾರೋಪ ನಡೆಯಿತು.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries