ಚಾರಿತ್ರಿಕ ದಾಖಲೆಗಳ ಸಂರಕ್ಷಣೆ ಅತ್ಯಗತ್ಯ-ಜಿ.ಪಂ ಅಧ್ಯಕ್ಷ ಎ.ಜಿ.ಸಿ ಬಶೀರ್
ಮುಳ್ಳೇರಿಯ: ಚಾರಿತ್ರಿಕವಾಗಿ ಅಚ್ಚರಿ ಮೂಡಿಸುವ ಐತಿಹಾಸಿಕ ದಾಖಲೆಗಳು, ಲಿಪಿಗಳು ಸಹಿತ ತಾಳೆ ಓಲೆಗಳ ಸಂರಕ್ಷಣೆ ಅತಿ ಅಗತ್ಯ ಎಂದು ಜಿ.ಪಂ ಅಧ್ಯಕ್ಷ ಎ.ಜಿ.ಸಿ ಬಶೀರ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಸಾಕ್ಷರತಾ ಮಿಶನ್ ಮತ್ತು ಪುರವಸ್ತು ಇಲಾಖೆ ಅಧೀನದಲ್ಲಿ ಆರಂಭಗೊಂಡ ಚಾರಿತ್ರಿಕ ದಾಖಲೆಗಳ ಅಂಕಿ ಅಂಶ ಸಂಗ್ರಹವನ್ನು ನೀಲೇಶ್ವರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಐತಿಹಾಸಿಕ ದಾಖಲೆಗಳಾದ ತಾಳೆಗರಿ ಲಿಪಿ ದಾಖಲೆಗಳನ್ನು ರಕ್ಷಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಗುರುತರ ಜವಾಬ್ದಾರಿ ಸರಕಾರ ಮತ್ತು ಸ್ಥಳೀಯಾಡಳಿತ ಸಹಿತ ಶಿಕ್ಷಣ ಇಲಾಖೆಗಿದೆ ಎಂದು ಅವರು ಹೇಳಿದರು. ನೀಲೇಶ್ವರ ಅರಮನೆ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಿ ಲಿಪಿಯಲ್ಲಿ ಬರೆದ ಹಲವು ತಾಳೆ ಓಲೆಗಳನ್ನು ಮಹಾರಾಣಿ ಟಿ.ಸಿ ಭಾಗಿರಥೀ ಅವರಿಂದ ಎ.ಜಿ.ಸಿ ಬಶೀರ್ ಸ್ವೀಕರಿಸಿದರು. ನೀಲೇಶ್ವರ ನಗರಸಭಾ ಅಧ್ಯಕ್ಷ ಪ್ರೊ.ಕೆ.ಪಿ ಜಯರಾಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಸದಸ್ಯರಾದ ಪಿ.ವಿ.ರಾಧಾಕೃಷ್ಣನ್, ವಿ.ಸಿ ಕೃಷ್ಣವರ್ಮ ರಾಜ, ಕೆ.ವಿ ರಾಘವನ್ ಮಾಸ್ಟರ್, ಜಿಲ್ಲಾ ಸಂಯೋಜಕ ಶಾಜು ಜೋ, ಸಹಾಯಕ ಪಿ.ಪಿ ಸಿರಾಜ್, ಇ.ರಾಧಾ, ವಿ ವಸುಮತಿ ಮೊದಲಾದವರು ಉಪಸ್ಥಿತರಿದ್ದರು.
ಮುಳ್ಳೇರಿಯ: ಚಾರಿತ್ರಿಕವಾಗಿ ಅಚ್ಚರಿ ಮೂಡಿಸುವ ಐತಿಹಾಸಿಕ ದಾಖಲೆಗಳು, ಲಿಪಿಗಳು ಸಹಿತ ತಾಳೆ ಓಲೆಗಳ ಸಂರಕ್ಷಣೆ ಅತಿ ಅಗತ್ಯ ಎಂದು ಜಿ.ಪಂ ಅಧ್ಯಕ್ಷ ಎ.ಜಿ.ಸಿ ಬಶೀರ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಸಾಕ್ಷರತಾ ಮಿಶನ್ ಮತ್ತು ಪುರವಸ್ತು ಇಲಾಖೆ ಅಧೀನದಲ್ಲಿ ಆರಂಭಗೊಂಡ ಚಾರಿತ್ರಿಕ ದಾಖಲೆಗಳ ಅಂಕಿ ಅಂಶ ಸಂಗ್ರಹವನ್ನು ನೀಲೇಶ್ವರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಐತಿಹಾಸಿಕ ದಾಖಲೆಗಳಾದ ತಾಳೆಗರಿ ಲಿಪಿ ದಾಖಲೆಗಳನ್ನು ರಕ್ಷಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಗುರುತರ ಜವಾಬ್ದಾರಿ ಸರಕಾರ ಮತ್ತು ಸ್ಥಳೀಯಾಡಳಿತ ಸಹಿತ ಶಿಕ್ಷಣ ಇಲಾಖೆಗಿದೆ ಎಂದು ಅವರು ಹೇಳಿದರು. ನೀಲೇಶ್ವರ ಅರಮನೆ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಿ ಲಿಪಿಯಲ್ಲಿ ಬರೆದ ಹಲವು ತಾಳೆ ಓಲೆಗಳನ್ನು ಮಹಾರಾಣಿ ಟಿ.ಸಿ ಭಾಗಿರಥೀ ಅವರಿಂದ ಎ.ಜಿ.ಸಿ ಬಶೀರ್ ಸ್ವೀಕರಿಸಿದರು. ನೀಲೇಶ್ವರ ನಗರಸಭಾ ಅಧ್ಯಕ್ಷ ಪ್ರೊ.ಕೆ.ಪಿ ಜಯರಾಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಸದಸ್ಯರಾದ ಪಿ.ವಿ.ರಾಧಾಕೃಷ್ಣನ್, ವಿ.ಸಿ ಕೃಷ್ಣವರ್ಮ ರಾಜ, ಕೆ.ವಿ ರಾಘವನ್ ಮಾಸ್ಟರ್, ಜಿಲ್ಲಾ ಸಂಯೋಜಕ ಶಾಜು ಜೋ, ಸಹಾಯಕ ಪಿ.ಪಿ ಸಿರಾಜ್, ಇ.ರಾಧಾ, ವಿ ವಸುಮತಿ ಮೊದಲಾದವರು ಉಪಸ್ಥಿತರಿದ್ದರು.