HEALTH TIPS

No title

            ಎಸ್ ಸಿ/ಎಸ್ ಟಿ ಕಾಯ್ದೆಗೆ ತಡೆ ನೀಡಲು ಸುಪ್ರೀಂ ನಕಾರ, ಶೇ.100ರಷ್ಟು ದಲಿತರ ಹಕ್ಕು ರಕ್ಷಣೆ
     ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್'ಸಿ/ಎಸ್ಟಿ) ದೌರ್ಜನ್ಯ ತಡೆ ಕಾಯ್ದೆಯ ಕೆಲವು ನಿಯಮಗಳನ್ನು ಬದಲಿಸಿ ಈ ಹಿಂದೆ ತಾನು ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋಟರ್್ ಗುರುವಾರ ನಿರಾಕರಿಸಿದೆ.
    ಎಸ್ ಸಿ/ಎಸ್ ಟಿ ಕಾಯ್ದೆ ಕುರಿತ ಆದೇಶವನ್ನು ಮರು ಪರಿಶೀಲಿಸಬೇಕು ಮತ್ತು ಈ ಕೂಡಲೇ ಆದೇಶಕ್ಕೆ ತಡೆ ನೀಡಬೇಕು ಎಂದು ಕೇಂದ್ರ ಸಕರ್ಾರ ಸಲ್ಲಿಸಿದ್ದ ಅಜರ್ಿಯ ವಿಚಾರಣೆ ನಡೆಸಿದ ನ್ಯಾಯಮೂತರ್ಿ ಎಕೆ ಗೋಯಲ್ ಮತ್ತು ನ್ಯಾಯಮೂತರ್ಿ ಯು ಯು ಲಲಿತ್ ಅವರನ್ನೊಳಗೊಂಡ ಸುಪ್ರೀಂ ಪೀಠ, ಕೋಟರ್್ ನೀಡಿದ ಆದೇಶ ಶೇ.100 ರಷ್ಟು ದಲಿತರ ಹಕ್ಕು ರಕ್ಷಣೆ ಮತ್ತು ಅಪರಾಧಿಗಳಿಗೆ ಶಿಕ್ಷೆ ನೀಡುವ ಪರವಾಗಿದೆ ಎಂದು ಹೇಳಿದೆ.
   ಸಕರ್ಾರದ ಪರವಾಗಿ ವಾದ ಮಂಡಿಸಿದ ಅಟಾನರ್ಿ ಜನರಲ್ ಕೆ ಕೆ ವೇಣುಗೋಪಾಲ್ ಅವರು, ಶಾಸಕಾಂಗ ಜಾರಿಗೆ ತಂದ ನಿಯಮಗಳಿಗೆ ವಿರುದ್ಧ ಸುಪ್ರೀಂ ಕೋಟರ್್ ನಿಯಮ ಅಥವಾ ಮಾರ್ಗದಶರ್ಿಗಳನ್ನು ರೂಪಿಸುವಂತಿಲ್ಲ ಎಂದು ವಾದಿಸಿದರು.
   ಕೋಟರ್್ ತೀಪರ್ಿನಿಂದಾಗಿ ದೇಶದಲ್ಲಿ ಜೀವ ಹಾನಿಯಾಗಿದೆ, ಗಲಭೆ, ಕೋಪ, ಅಸಮಾಧಾನ ಮತ್ತು ಸಾಮರಸ್ಯಕ್ಕೆ ಧಕ್ಕೆಯಾಗಿದೆ ಎಂದು ವೇಣುಗೋಪಾಲ್ ಅವರು ಕೋಟರ್್ ಗೆ ತಿಳಿಸಿದರು. ಆದರೆ ಸಕರ್ಾರದ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕೋಟರ್್, ಮಾಚರ್್ 20ರ ತನ್ನ ಆದೇಶವನ್ನು ಬಲವಾಗಿ ಸಮಥರ್ಿಸಿಕೊಂಡಿದೆ.
   ಕಳೆದ ಮಾಚರ್್ 20ರಂದು ಸವರ್ೋಚ್ಚ ನ್ಯಾಯಾಲಯ ಪ್ರಾಮಾಣಿಕ ಸಕರ್ಾರಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯಗಳನ್ನು ನಿರ್ಭಯದಿಂದ ನಿರ್ವಹಿಸಲು ಮತ್ತು ಬ್ಲಾಕ್ ಮೇಲ್ಗೆ ಗುರಿಯಾಗುವುದನ್ನು ತಪ್ಪಿಸಲು ಎಸ್ಸಿ/ಎಸ್ಟಿ ಕಾಯಿದೆಯ ಕಾಠಿನ್ಯವನ್ನು ಕಡಿಮೆ ಮಾಡುವ ಆದೇಶವನ್ನು ಪ್ರಕಟಿಸಿತ್ತು. ಇದರಿಂದಾಗಿ ಎಸ್ಸಿ/ಎಸ್ಟಿ ಕಾಯಿದೆ ದುರ್ಬಲವಾಯಿತೆಂದು ಭಾವಿಸಿದ ದಲಿತರು ಭಾರತ್ ಬಂದ್ ಕರೆ ನೀಡಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries