HEALTH TIPS

No title

            ಹಿರಿಯ ನಾಗರಿಕರಿಗೆ ವಿಶ್ರಾಂತಿ ಕೇಂದ್ರ ನಿಮರ್ಾಣ
     ಕಾಸರಗೋಡು: ಪೊಲೀಸ್ ಠಾಣೆಗಳಿಗೆ ದೂರು ನೀಡಲು ಮತ್ತಿತರ ಅಗತ್ಯಗಳಿಗಾಗಿ ಬರುವ ಹಿರಿಯ ನಾಗರಿಕರು ಮತ್ತು ಅಂಗವಿಕಲನಿಗಾಗಿ ಪೊಲೀಸ್ ಠಾಣೆ ಬಳಿಯಲ್ಲೇ ವಿಶ್ರಾಂತಿ ಕೇಂದ್ರ ನಿಮರ್ಿಸಲಾಗುವುದು.
   ಈ ಯೋಜನೆಯಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಇಂತಹ ವಿಶ್ರಾಂತಿ ಕೇಂದ್ರ ಕಟ್ಟಡದ ನಿಮರ್ಾಣ ಕೆಲಸ ಈಗಾಗಲೇ ಆರಂ`ಗೊಂಡಿದೆ. ಪೊಲೀಸ್ ಠಾಣೆಯ ಪಕ್ಕದಲ್ಲೇ ಈ ಕಟ್ಟಡ ನಿಮರ್ಿಸಲಾಗುತ್ತಿದೆ. ಇದಕ್ಕೆ ಎರಡು ಲಕ್ಷ ರೂ. ಸರಕಾರ ಮಂಜೂರು ಮಾಡಿದೆ.
   ಈ ವಿಶ್ರಾಂತಿ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೂ ಅಂಗವಿಕಲರಿಗೂ ಕುಳಿತುಕೊಳ್ಳಲು ಮತ್ತು ಕುಳಿತುಕೊಳ್ಳಲು ಸಾಧ್ಯವಾಗದ ಅಶಕ್ತರಿಗೆ  ಮಲಗಲು ಅಗತ್ಯದ ಸೌಕರ್ಯವನ್ನು ಒದಗಿಸಲಾಗುವುದು.ಜೊತೆಗೆ ಕುಡಿಯುವ ನೀರು, ಶೌಚಾಲಯ ಸೌಕರ್ಯವನ್ನೂ ಏರ್ಪಡಿಸಲಾಗುವುದು. ನಡೆಯಲು ಸಾಧ್ಯವಾಗದೆ ವೀಲ್ ಚೆಯರನ್ನೇ ಆಶ್ರಯಿಸುತ್ತಿರುವ ಅಂಗವಿಕಲರಿಗೆ ದೂರು ನೀಡಲು ಪೊಲೀಸ್ ಸಹಾಯಕ್ಕಾಗಿ ವಿದ್ಯಾನಗರ ಪೊಲೀಸ್ ಠಾಣೆಗಳಿಗೆ ವೀಲ್ ಚೆಯರ್ನೊಂದಿಗೆ ಪ್ರವೇಶಿಸಲು ಠಾಣೆಯಲ್ಲಿ ಅಗತ್ಯದ ರ್ಯಾಂಪ್ ನಿಮರ್ಿಸಲಾಗುತ್ತಿದೆ. ಈ ರ್ಯಾಂಪ್ ಮೂಲಕ ಅಂಗವಿಕಲರು ವೀಲ್ ಚೆಯರ್ನಲ್ಲೇ ಕುಳಿತು ಠಾಣೆಯೊಳಗೆ ಪ್ರವೇಶಿಸಿ ಪೊಲೀಸ್ ಸಹಾಯ ಪಡೆಯುವ ವ್ಯವಸ್ಥೆ ಈ ಮೂಲಕ ಸಾಕಾರಗೊಳಿಸಲು ಸಿದ್ದತೆಗಳು ನಡೆದಿವೆ 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries