ಮಧೂರು : ಸುತ್ತು ದಳಿಯ ಅಧಿಷ್ಠಾನದ ಶಿಲಾನ್ಯಾಸ= ಉಪದೇವತೆಗಳ ಬಾಲಾಲಯ ಪ್ರತಿಷ್ಠೆ
ಮಧೂರು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪ್ರಧಾನ ಗರ್ಭಗುಡಿಯ ನವೀಕರಣದ ಅಂಗವಾಗಿ ಅದರ ಸುತ್ತು ದಳಿಯ ಅಧಿಷ್ಠಾನದ ಶಿಲಾನ್ಯಾಸ ಮತ್ತು ಉಪದೇವತೆಗಳ ಬಾಲಾಲಯ ಪ್ರತಿಷ್ಠೆ ಗುರುವಾರ ಬೆಳಿಗ್ಗೆ ನಡೆಯಿತು.
ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಡಾ.ಡಿ.ಶಿವಪ್ರಸಾದ್ ತಂತ್ರಿ ಅವರ ನೇತೃತ್ವದಲ್ಲಿ ತಾಂತ್ರಿಕ ವಿಧಿ ವಿಧಾನಗಳು ಜರಗಿತು.
ಶಿಲ್ಪಿಗಳಾದ ಎಂ.ಕೆ.ಪ್ರಸಾದ್ ಮುನಿಯಂಗಳ ಅವರು ಸೂಕ್ತ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಬಾಬು, ನವೀಕರಣ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಧೂರು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪ್ರಧಾನ ಗರ್ಭಗುಡಿಯ ನವೀಕರಣದ ಅಂಗವಾಗಿ ಅದರ ಸುತ್ತು ದಳಿಯ ಅಧಿಷ್ಠಾನದ ಶಿಲಾನ್ಯಾಸ ಮತ್ತು ಉಪದೇವತೆಗಳ ಬಾಲಾಲಯ ಪ್ರತಿಷ್ಠೆ ಗುರುವಾರ ಬೆಳಿಗ್ಗೆ ನಡೆಯಿತು.
ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಡಾ.ಡಿ.ಶಿವಪ್ರಸಾದ್ ತಂತ್ರಿ ಅವರ ನೇತೃತ್ವದಲ್ಲಿ ತಾಂತ್ರಿಕ ವಿಧಿ ವಿಧಾನಗಳು ಜರಗಿತು.
ಶಿಲ್ಪಿಗಳಾದ ಎಂ.ಕೆ.ಪ್ರಸಾದ್ ಮುನಿಯಂಗಳ ಅವರು ಸೂಕ್ತ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಬಾಬು, ನವೀಕರಣ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.