ಗ್ರಾಮಾಭಿವೃದ್ದಿ ಯೋಜನೆಯಿಂದ ಸಾಧಕರಿಗೆ ಸನ್ಮಾನ
ಮುಳ್ಳೇರಿಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮವ್ವಾರು ಒಕ್ಕೂಟದ ತ್ರೈಮಾಸಿಕ ಸಭೆಯು ಇತ್ತಿಚೆಗೆ ಮವ್ವಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಲೆಯ ಎಟೆಂಡರ್ ಆಗಿ 30ವರ್ಷಗಳ ಕಾಲ ಸೇವೆ ಸಲ್ಲಿಸಿದ ಅತ್ಯುತ್ತಮ ಸಮಾಜ ಸೇವಕ ಸೀತಾರಾಮ ಭಟ್ ಮುಂಡೋಳಿ ಮತ್ತು ಅಂತಾರಾಷ್ಟ್ರೀಯ ತ್ರೋಬಾಲ್ ಪಂದ್ಯಾಟದಲ್ಲಿ ಚಿನ್ನದ ಪದಕವನ್ನು ಗಳಿಸಿ ಊರಿಗೆ ಕೀತರ್ಿಯನ್ನು ತಂದ ದೀಪಿಕಾ ರೈ ಮರತ್ತಿಲ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಸ್ನೇಹಕೂಟ ಕಾರ್ಯಕ್ರಮದಲ್ಲಿ ಕಾರಡ್ಕ ವಲಯ ಮಟ್ಟದ ಸಾಧನೆಯಲ್ಲಿ ಬಹುಮಾನವನ್ನು ಗಳಿಸಿದ ಸೇವಾ ಪ್ರತಿನಿಧಿ ಚಂದ್ರಕಲಾ ಇವರನ್ನು ಒಕ್ಕೂಟದ ವತಿಯಿಂದ ಒಕ್ಕೂಟದ ಅಧ್ಯಕ್ಷ ಕೊರಗಪ್ಪ ಸನ್ಮಾನಿಸಿದರು.
ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳಾದ ಗಿರೀಶ್, ಜಯಂತಿ, ಶಶಿಕಲಾ, ಚಂದ್ರಶೇಖರ ಹಾಗೂ ಒಕ್ಕೂಟದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಶಶಿಕಲಾ ಸ್ವಾಗತಿಸಿ, ಸುನೀತಾ ವಂದಿಸಿದರು. ಮಂಜುನಾಥ ತಂಡದ ಸದಸ್ಯರು ನೇತೃತ್ವ ನೀಡಿದ್ದರು.
ಮುಳ್ಳೇರಿಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮವ್ವಾರು ಒಕ್ಕೂಟದ ತ್ರೈಮಾಸಿಕ ಸಭೆಯು ಇತ್ತಿಚೆಗೆ ಮವ್ವಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಲೆಯ ಎಟೆಂಡರ್ ಆಗಿ 30ವರ್ಷಗಳ ಕಾಲ ಸೇವೆ ಸಲ್ಲಿಸಿದ ಅತ್ಯುತ್ತಮ ಸಮಾಜ ಸೇವಕ ಸೀತಾರಾಮ ಭಟ್ ಮುಂಡೋಳಿ ಮತ್ತು ಅಂತಾರಾಷ್ಟ್ರೀಯ ತ್ರೋಬಾಲ್ ಪಂದ್ಯಾಟದಲ್ಲಿ ಚಿನ್ನದ ಪದಕವನ್ನು ಗಳಿಸಿ ಊರಿಗೆ ಕೀತರ್ಿಯನ್ನು ತಂದ ದೀಪಿಕಾ ರೈ ಮರತ್ತಿಲ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಸ್ನೇಹಕೂಟ ಕಾರ್ಯಕ್ರಮದಲ್ಲಿ ಕಾರಡ್ಕ ವಲಯ ಮಟ್ಟದ ಸಾಧನೆಯಲ್ಲಿ ಬಹುಮಾನವನ್ನು ಗಳಿಸಿದ ಸೇವಾ ಪ್ರತಿನಿಧಿ ಚಂದ್ರಕಲಾ ಇವರನ್ನು ಒಕ್ಕೂಟದ ವತಿಯಿಂದ ಒಕ್ಕೂಟದ ಅಧ್ಯಕ್ಷ ಕೊರಗಪ್ಪ ಸನ್ಮಾನಿಸಿದರು.
ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳಾದ ಗಿರೀಶ್, ಜಯಂತಿ, ಶಶಿಕಲಾ, ಚಂದ್ರಶೇಖರ ಹಾಗೂ ಒಕ್ಕೂಟದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಶಶಿಕಲಾ ಸ್ವಾಗತಿಸಿ, ಸುನೀತಾ ವಂದಿಸಿದರು. ಮಂಜುನಾಥ ತಂಡದ ಸದಸ್ಯರು ನೇತೃತ್ವ ನೀಡಿದ್ದರು.