HEALTH TIPS

No title

               ತ್ಯಾಜ್ಯ ತೆರವಿಗೆ ಜಿಲ್ಲಾಧಿಕಾರಿಗಳೇ ಬರಬೇಕಾಯಿತು!
   ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಮಂಗಲ್ಪಾಡಿ ಗ್ರಾ.ಪಂ. ನ ಉಪ್ಪಳ ಬಸ್ ನಿಲ್ದಾಣ, ಕೈಕಂ, ನಯಾಬಝಾರ್, ಬಂದ್ಯೋಡು ಪರಿಸರಗಳಲ್ಲಿ ರಸ್ತೆ ಬದಿ ತುಂಬಿ ತುಳುಕಿ ತೀವ್ರ ದುನರ್ಾತ ಬೀರಿ ಅಪಾಯಕಾರಿಯಾಗಿದ್ದ ತ್ಯಾಜ್ಯ ವಿಲೇವಾರಿಗೆ ಭಾನುವಾರ ಸ್ವತಃ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
  ಭಾನುವಾರ ಉಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜೀವನ್ ಬಾಬು ಕೆ ತ್ಯಾಜ್ಯ ವಿಲೇಗೆ ಚಾಲನೆ ನೀಡಿದರು.ವಸತಿ ಸಮುಚ್ಚಯಗಳು, ಮದುವೆ ಸಮಾರಂಭಗಳ ಸಹಿತ ವಿವಿಧೆಡೆಗಳ ತ್ಯಾಜ್ಯಗಳನ್ನು ಹೆದ್ದಾರಿಯ ಬದಿಗಳಲ್ಲಿ ಬೀಕಾಬಿಟ್ಟಿ ಎಸೆಯುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಅಧಿಕೃತರಿಗೆ ಜಿಲ್ಲಾಧಿಕಾರಿಗಳು ಈ ಸಂದರ್ಭ ಸೂಚನೆ ನೀಡಿದರು.
  ಮಂಗಲ್ಪಾಡಿ ಗ್ರಾ.ಪಂ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೊಡು, ಮಂಗಲ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಮೋಹನನ್, ಗ್ರಾ.ಪಂ ಸದಸ್ಯರುಗಳು, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪದಾಧಿಕರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕುಟುಂಬಶ್ರೀ ಕಾರ್ಯಕತರ್ೆಯರ ಸಹಿತ ಹಲವರು ಪಾಲ್ಗೊಂಡಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries