HEALTH TIPS

ಬಾಯಾರು ಸೇವಾ ಸಹಕಾರಿ ಬ್ಯಾಂಕ್ ಮಹಾಸಭೆ

Top Post Ad

Click to join Samarasasudhi Official Whatsapp Group

Qries

         
     ಉಪ್ಪಳ:  ಬಾಯಾರು ಸೇವಾ ಸಹಕಾರಿ ಬ್ಯಾಂಕ್ ನ  2018-19 ವರ್ಷದ ವಾರ್ಷಿಕ ಮಹಾಸಭೆಯು ಸೆ. 28 ರಂದು ಶನಿವಾರ ಅಪರಾಹ್ನ 2 ರಿಂದ ಬ್ಯಾಂಕ್ ನ ಪ್ರಧಾನ ಕಛೇರಿಯ ಪರಿಸರದಲ್ಲಿ ನಡೆಯಿತು.
    ಬ್ಯಾಂಕ್ ಅಧ್ಯಕ್ಷ  ಸುಬ್ಬಣ್ಣ ಭಟ್ ಅವರು ಮಾತಾಡಿ ಬ್ಯಾಂಕ್ ನ ಸರ್ವತೋಮುಖ ಅಭಿವೃದ್ಧಿಗೆ ಸರ್ವ ಸದಸ್ಯರುಗಳು ಕಾರಣರಾಗಿದ್ದಾರೆ. ಸದಸ್ಯರ ಅವಶ್ಯಕತೆಗಳಾನುಸಾರವಾಗಿ ಬ್ಯಾಂಕ್ ವಿವಿಧ ಸಾಲಗಳನ್ನು ನೀಡುತ್ತಿದೆ. ಸಾಲವನ್ನು ಕ್ಲಪ್ತ ಸಮಯಕ್ಕೆ ಮರುಪಾವತಿ ಮಾಡಿದರೆ ಬ್ಯಾಂಕ್ ಇನ್ನಷ್ಟು ಅಭಿವೃದ್ದಿ ಹೊಂದಲಿದೆ ಎಂದರು.
     ಬ್ಯಾಂಕ್ ನ ಕಾರ್ಯದರ್ಶಿ ಪ್ರಕಾಶ್ ಅವರು  ಮಹಾಸಭೆಯಲ್ಲಿ  2018-19  ನೇ ವರ್ಷದ ವಾರ್ಷಿಕ ವರದಿ ಹಾಗೂ ಆಯವ್ಯಯ ಮಂಡಿಸಿದರು. ಬಳಿಕ 2018-19  ನೇ ವರ್ಷದ ಮುಂಗಡಪತ್ರಕ್ಕಿಂತ ಅಧಿಕ ಖರ್ಚಿನ ಅಂಗೀಕಾರ,  2020-21 ನೇ ವರ್ಷದ ಮುಂಗಡಪತ್ರ ಹಾಗೂ 2018-19  ನೇ ವರ್ಷದ ಅಡಿಟ್ ವರದಿಯನ್ನು ಅಂಗೀಕರಿಸಲಾಯಿತು. ನಿರ್ದೇಶಕ ಸುಬ್ರಮಣ್ಯ ಭಟ್ ಸ್ವಾಗತಿಸಿ,  ಹರಿಣಾಕ್ಷ ವಂದಿಸಿದರು. ಸಂತೋಷ್ ಸಭೆ ನಿರ್ವಹಿಸಿದರು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries