HEALTH TIPS

ಇಂದು ಕಿರು ಅಣೆಕಟ್ಟುಗಳ ಕುರಿತು ಕಾರ್ಯಾಗಾರ

Top Post Ad

Click to join Samarasasudhi Official Whatsapp Group

Qries

   
          ಕಾಸರಗೋಡು: ಜಿಲ್ಲೆಯಲ್ಲಿ ಜಲಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದಾದ ಮತ್ತು ಸುಲಭದಲ್ಲಿ ನಿರ್ಮಿಸಬಹುದಾದ ಅರ್ಧ ಸ್ಥಿರ ಕಿರು ಅಣೆಕಟ್ಟು( ಚೆಕ್ ಡ್ಯಾಂ) ಗಳ ಕುರಿತು ಕಾರ್ಯಾಗಾರ ಇಂದು(ಜ.30) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಂಭವನ್ನು ಜಿಲ್ಲಾಧಿಕಾರಿ ಡಾಡಿ.ಸಜಿತ್ ಬಾಬು ಉದ್ಗಾಟಿಸುವರು. ಜಲಸಂರ್ಷಣೆ, ಕೃಷಿ ಜಾಗಗಳ ನೀರಾವರಿ ಸಂರಕ್ಷಣೆ, ನದಿ ಜಲಸಂರಕ್ಷಣೆ ಇತ್ಯಾದಿಗಳನ್ನು ನಡೆಸುವ ನಿಟ್ಟಿನಲ್ಲಿ ಅರ್ಧ ಸ್ಥಿರ ಚೆಕ್ ಡ್ಯಾಂಗಳ ನಿರ್ಮಾಣ ನಡೆಸಲಾಗುವುದು. ಈ ಯೋಜನೆಯ ಜಾರಿ ಮೂಲಕ ಜಿಲ್ಲೆಯಲ್ಲಿ ಡ್ಯಾಂ ಗಳಿಲ್ಲದ ಕೊರತೆಯನ್ನು ಒಂದು ಹಂತದ ವರೆಗೆ ಪರಿಣಾಮಕಾರಿ ಫಲಿತಾಂಶ ಲಭಿಸಲಿದೆ. ಕಿರು ನೀರಾವರಿ ವಿಭಾಗ ಕಾರ್ಯಕಾರಿ ಇಂಜಿನಿಯರ್, ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ಮೊದಲಾದವರ ನೇತೃತ್ವದಲ್ಲಿ ಅರ್ಧ ಸ್ಥಿರ ಚೆಕ್ ಡ್ಯಾಂ ಗಳ ಕುರಿತು ಮಾಹಿತಿನೀಡಿ, ಚರ್ಚೆ ನಡೆಸುವರು. ಜಲಸಂರಕ್ಷಣೆ ಸಂಬಂಧ ಚಟುವಟಿಕೆನಡೆಸುತ್ತಿರುವ ಸ್ಥಳೀಯಾಡಳಿತೆ ಸಂಸ್ಥೆಗಳ ಇಂಇಜಿನಿಯರ್ ಗಳು, ಎಂ.ಜಿ.ಎಲ್.ಆರ್.ಇ.ಜಿ.ಎಸ್. ಇಂಜಿನಿಯರ್ ಗಳು, ಇನ್ನಿತರ ಸದಸ್ಯರು ಮೊದಲಾದವರು ಭಾಗವಹಿಸುವರು. 

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries