HEALTH TIPS

ಹತ್ತು ಸಾವಿರದ ಗಡಿ ದಾಟಿದ ಕೊರೊನಾ ಸೋಂಕು-ರಾಜ್ಯದಲ್ಲಿಂದು 10606 ಮಂದಿಗೆ ಸೋಂಕು- ಕಾಸರಗೋಡು : 432 ಮಂದಿಗೆ ಸೋಂಕು ದೃಢ

              

            ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 432 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. 417 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ ಒಬ್ಬರು ಇತರ ರಾಜ್ಯದಿಂದ ಹಾಗು 14 ಮಂದಿ ವಿದೇಶದಿಂದ ಬಂದವರು. 177 ಮಂದಿ ಗುಣಮುಖರಾಗಿದ್ದಾರೆಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. 

                              ಸೋಂಕು ಬಾಧಿತರ ಪಂಚಾಯತಿವಾರು ವಿವರ: 

         ಅಜಾನೂರು-46, ಬದಿಯಡ್ಕ-10, ಬಳಾಲ್-3, ಬೇಡಡ್ಕ-2, ಚೆಮ್ನಾಡ್-16, ಚೆಂಗಳ-9, ಚೆರ್ವತ್ತೂರು-14, ದೇಲಂಪಾಡಿ-1, ಈಸ್ಟ್ ಎಳೇರಿ-1, ಎಣ್ಮಕಜೆ-11, ಕಳ್ಳಾರ್-13, ಕಾಂಞಂಗಾಡ್-34, ಕಾರಡ್ಕ-5, ಕಾಸರಗೋಡು-20, ಕಯ್ಯೂರು ಚೀಮೇನಿ-4, ಕಿನಾನೂರು-10, ಕೋಡೋಂ ಬೇಳೂರು-2, ಕುಂಬ್ಡಾಜೆ-4, ಕುಂಬಳೆ-4, ಕುತ್ತಿಕ್ಕೋಲ್-1, ಮಧೂರು-13, ಮಡಿಕೈ-1, ಮಂಗಲ್ಪಾಡಿ-21, ಮಂಜೇಶ್ವರ-36, ಮೀಂಜ-1, ಮೊಗ್ರಾಲ್‍ಪುತ್ತೂರು-4, ಮುಳಿಯಾರು-2, ನೀಲೇಶ್ವರ-26, ಪಡನ್ನ-18, ಪೈವಳಿಕೆ-3, ಪಳ್ಳಿಕೆರೆ-29, ಪನತ್ತಡಿ-7, ಪಿಲಿಕೋಡ್-3, ಪುಲ್ಲೂರು-10, ಪುತ್ತಿಗೆ-2, ತೃಕ್ಕರಿಪುರ-7, ಉದುಮ-19, ವಲಿಯಪರಂಬ-6, ವರ್ಕಾಡಿ-1, ವೆಸ್ಟ್ ಎಳೇರಿ-5 ಎಂಬಂತೆ ರೋಗ ಬಾಧಿಸಿದೆ.   ಇತರ ಜಿಲ್ಲೆಗಳಲ್ಲಿ ಕಾಸರಗೋಡಿನ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

            ಕಾಸರಗೋಡು ಠಾಣೆಯ 8 ಮಂದಿಗೆ ಕೊರೊನಾ : 

   ಕಾಸರಗೋಡು ಪೆÇಲೀಸ್ ಠಾಣೆಯ ಇಬ್ಬರು ಎಸ್.ಐ. ಗಳ ಸಹಿತ ಎಂಟು ಮಂದಿಗೆ ಕೋವಿಡ್ ದೃಢೀಕರಿಸಲಾಗಿದೆ. ಇದರೊಂದಿಗೆ ಅಧಿಕಾರಿಗಳ ಸಹಿತ 67 ಮಂದಿ ಪೆÇಲೀಸರಿರುವ ಠಾಣೆಯಲ್ಲಿ 28 ಮಂದಿಗೆ ಕೋವಿಡ್ ದೃಢೀಕರಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ಐವರು ಗುಣಮುಖರಾಗಿದ್ದಾರೆ. 

       ಆದೂರು ಠಾಣೆಯ ಪೆÇಲೀಸರಿಗೆ ಕೋವಿಡ್ : 

   ಆದೂರು ಪೆÇಲೀಸ್ ಠಾಣೆಯ ಮೂವರು ಪೆÇಲೀಸರಿಗೆ ಕೋವಿಡ್ ದೃಢೀಕರಿಸಲಾಗಿದೆ. ಆದೂರಿನಿಂದ ಕಾಸರಗೋಡು ನಗರಠಾಣೆಗೆ ಕರ್ತವ್ಯಕ್ಕಾಗಿ ತೆರಳಿ ಮರಳಿದ ಪೆÇಲೀಸರಿಗೆ ಮೊದಲು ಕೋವಿಡ್ ದೃಢೀಕರಿಸಲಾಗಿದೆ. ಇವರಿಂದ ಇನ್ನಿಬ್ಬರು ಪೆÇಲೀಸರಿಗೆ ಕೋವಿಡ್ ಸೋಂಕು ಹರಡಿದೆ. 

          ಪ್ರಧಾನ ಅಂಚೆ ಕಚೇರಿ ಮುಚ್ಚುಗಡೆ :

     ನೌಕರರಿಗೆ ಕೋವಿಡ್ ದೃಢೀಕರಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಪ್ರಧಾನ ಅಂಚೆ ಕೀಚೆರಿ ಹಾಗು ಅದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪಾಸ್‍ಪೆÇೀರ್ಟ್ ಸೇವಾ ಕೇಂದ್ರವನ್ನು ಮುಚ್ಚಲಾಗಿದೆ. ಪ್ರಧಾನ ಅಂಚೆ ಕಚೇರಿಯ ನೌಕರನೋರ್ವನಿಗೆ ಕೋವಿಡ್ ದೃಢೀಕರಿಸಲಾಗಿತ್ತು. ಪಾಸ್‍ಪೆÇೀರ್ಟ್ ಸೇವಾ ಕೇಂದ್ರದಲ್ಲೂ ನೌಕರನೋರ್ವನಿಗೆ ಕೋವಿಡ್ ಬಾಧಿಸಿದೆ.

             ಕೇರಳದಲ್ಲಿ 10606 ಮಂದಿಗೆ ಸೋಂಕು : 

    ಕೇರಳ ರಾಜ್ಯದಲ್ಲಿ ಬುಧವಾರ 10606 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಕೇರಳದಲ್ಲಿ ಪ್ರಥಮವಾಗಿ ದಿನವೊಂದರಲ್ಲಿ 10 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ದೃಢಗೊಂಡಿರುವುದು ಪ್ರಥಮವಾಗಿದೆ. 22 ಮಂದಿ ಸಾವಿಗೆ ಕೊರೊನಾ ವೈರಸ್ ಸೋಂಕು ಎಂಬುದಾಗಿ ದೃಢೀಕರಿಸಲಾಗಿದೆ. ರಾಜ್ಯದಲ್ಲಿ ಒಟ್ಟು ಸತ್ತವರ ಸಂಖ್ಯೆ 906 ಕ್ಕೇರಿತು. ರೋಗ ಬಾಧಿತರಲ್ಲಿ 55 ಮಂದಿ ವಿದೇಶದಿಂದ ಹಾಗು 164 ಮಂದಿ ಇತರ ರಾಜ್ಯಗಳಿಂದ ಬಂದವರು. 9542 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 741 ಮಂದಿಯ ಸಂಪರ್ಕದ ಮೂಲ ಪತ್ತೆಯಾಗಿಲ್ಲ. 98 ಮಂದಿ ಆರೋಗ್ಯ ಕಾರ್ಯಕರ್ತರಿಗೆ, 6 ಮಂದಿ ಐಎನ್‍ಎಚ್‍ಎಸ್ ಸಿಬ್ಬಂದಿಗಳಿಗೆ ಸೋಂಕು ಬಾಧಿಸಿದೆ. 6161 ಮಂದಿ ಗುಣಮುಖರಾಗಿದ್ದಾರೆ. 

        ಜಿಲ್ಲಾವಾರು ವಿವರ:  ಕಲ್ಲಿಕೋಟೆ-1576, ಮಲಪ್ಪುರಂ-1350, ಎರ್ನಾಕುಳಂ-1201, ತಿರುವನಂತಪುರ-1182, ತೃಶ್ಶೂರು-948, ಕೊಲ್ಲಂ-852, ಆಲಪ್ಪುಳ-672, ಪಾಲ್ಘಾಟ್-650, ಕಣ್ಣೂರು-602, ಕೋಟ್ಟಯಂ-490, ಕಾಸರಗೋಡು-432, ಪತ್ತನಂತಿಟ್ಟ-393, ವಯನಾಡು-138, ಇಡುಕ್ಕಿ-120 ಎಂಬಂತೆ ರೋಗ ಬಾಧಿಸಿದೆ. 

         ರೋಗ ಮುಕ್ತ : ತಿರುವನಂತಪುರ-820, ಕೊಲ್ಲಂ-346, ಪತ್ತನಂತಿಟ್ಟ-222, ಆಲಪ್ಪುಳ-393, ಕೋಟ್ಟಯಂ-453, ಇಡುಕ್ಕಿ-89, ಎರ್ನಾಕುಳಂ-385, ತೃಶ್ಶೂರು-320, ಪಾಲ್ಘಾಟ್-337, ಮಲಪ್ಪುರಂ-743, ಕಲ್ಲಿಕೋಟೆ-589, ವಯನಾಡು-103, ಕಣ್ಣೂರು-1188, ಕಾಸರಗೋಡು-173 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ರಾಜ್ಯಗಳಲ್ಲಿ 92,161 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,60,253 ಮಂದಿ ಗುಣಮುಖರಾಗಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries