HEALTH TIPS

ಪ್ರೀಮೆಟ್ರಿಕ್ ಹಾಸ್ಟೆಲ್‍ಗಳ ಸಹಿತ 20 ಯೋಜನೆಗಳ ಉದ್ಘಾಟನೆ

       ಕಾಸರಗೋಡು: ಕುತ್ತಿಕೋಲು ಮತ್ತು ಕುಂಡಂಕುಳಿಯಲ್ಲಿ ನಿರ್ಮಿಸಲಾದ ಪ್ರೀಮೆಟ್ರಿಕ್ ಹಾಸ್ಟೆಲ್‍ಗಳ ಮತ್ತು ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ 20 ಯೋಜನೆಗಳ ಉದ್ಘಾಟನೆ ಜರುಗಿತು. 

        ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿ ಸಚಿವ ಎ.ಕೆ.ಬಾಲನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಕೆ.ಕುಂಞÂರಾಮನ್ ಮುಖ್ಯ ಅತಿಥಿಯಾಗಿದ್ದರು. ಪ್ರಧಾನ ಕಾರ್ಯದರ್ಶಿ ಪುನೀತ್ ಕುಮಾರ್, ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಪಿ.ಎ.ಶ್ರೀವಿದ್ಯಾ, ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಬುಡಕಟ್ಟು ಅಭಿವೃದ್ಧಿ ಇಲಾಖೆ ಪ್ರಭಾರ ಅಧಿಕಾರಿ ಎಂ.ಷಮೀಮಾ, ಕಾರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಓಮನಾ ರಾಮಚಂದ್ರನ್, ಕುತ್ತಿಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಜೆ.ಲಿಝಿ ಮೊದಲಾದವರು ಉಪಸ್ಥಿತರಿದ್ದರು.   

         ಅಭಿವೃದ್ಧಿಯ ಮುನ್ನಡೆ : ರಾಜ್ಯದಲ್ಲೇ ಪ್ರಥಮ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯ ಮುನ್ನಡೆಯಾಗಿದೆ ಎಂದು ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿ ಸಚಿವ ಎ.ಕೆ.ಬಾಲನ್ ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

       ರಾಜ್ಯ ಸರಕಾರದ ನೂರು ದಿನಗಳ ಅಂಗವಾಗಿ 14 ದಿನಗಳಲ್ಲಿ 44 ಯೋಜನೆಗಳನ್ನು ಅಧಿಕೃತವಾಗಿ ಉದ್ಘಾಟಿಸಲಾಗಿದೆ. ಇದರಲ್ಲಿ 4 ಯೋಜನೆಗಳು ನಿರ್ಮಾಣ ವಲಯಕ್ಕೆ ಸಂಬಂ„ಸಿದರೆ ಉಳಿದವೆಲ್ಲ ನಿರ್ಮಾಣ ಮುಗಿದು ಚಟುವಟಿಕೆಗಳ ಆರಂಭಕ್ಕಾಗಿ ಉದ್ಘಾಟನೆಗೊಂಡವು. ಮಹಾತ್ಮಾ ಗಾಂ„ ಅವರ 151ನೇ ಜನ್ಮ ದಿನಾಚರಣೆ ಅಂಗವಾಗಿ 2 ವಾರಗಳ ಅವ„ಯಲ್ಲಿ ನಡೆದ ಸಾಮಾಜಿಕ ಭಾವೈಕ್ಯ ಪಕ್ಷಾಚರಣೆಯ ಸಮಾರೋಪವೂ ಈ ಮೂಲಕ ನಡೆದಿದೆ ಎಂದವರು ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries