ಬದಿಯಡ್ಕ: ಶ್ರೀಮದ್ ಎಡನೀರು ಮಠದ ನಿಯೋಜಿತ ಪೀಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಮಂಗಳವಾರ ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯಕ್ಕೆ ಭೇಟಿ ನೀಡಿದರು.
ಮಧ್ಯಾಹ್ನ ಮಹಾಪೂಝೆಯ ವೇಳೆಗೆ ಆಗಮಿಸಿದ ಶ್ರೀಗಳನ್ನು ವಿಧಿವಿಧಾನಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಶ್ರೀದೇವರ ದರ್ಶನಗೈದ ಶ್ರೀಗಳು, ಮಹಾಮಂಗಳಾರತಿಯನ್ನು ಸ್ವೀಕರಿಸಿ ಪೀಠಾಧೀಶರಾಗುವ ಬಗ್ಗೆ ವಿಶೇಷ ಪ್ರಾರ್ಥನೆಗೈದರು.
ಬಳಿಕ ನಡೆದ ಸರಳ ಸಮಾರಂಭದಲ್ಲಿ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಶ್ರೀಮಠ ಈ ಹಿಂದಿನಂತೆ ಮುಂದೆಯೂ ಬದ್ದತೆಯಿಂದ ಕಾರ್ಯವೆಸಗಲಿದೆ. ಅ.26 ರಂದು ಕಾಂಚೀ ಶ್ರೀಗಳಿಂದ ಅಧಿಕೃತವಾಗಿ ಸನ್ಯಾಸ ಧೀಕ್ಷೆ ಪಡೆದು ಅ.28 ರಂದು ಶ್ರೀಎಡನೀರು ಮಠದಲ್ಲಿ ಪೀಠಾರೋಹಣ ವಿಧಿವಿಧಾನಗಳು ಸರಳ ಸಮಾರಂಭದ ಮೂಲಕ ನಡೆಯಲಿದೆ ಎಂದು ಶ್ರೀಮಠದ ಪರವಾಗಿ ಗೋಪಾಲಕೃಷ್ಣ ಅಡಿಗ ಅವರು ಮಾಹಿತಿ ನೀಡಿದರು. ಸಚ್ಚಿದಾನಂದ ಭಾರತಿ ಉಪಸ್ಥಿತರಿದ್ದರು.
ಆಡಳಿತ ಟ್ರಸ್ಟಿ ನರಸಿಂಹ ಭಟ್, ಟ್ರಸ್ಟಿಗಳಾದ ರಾಮ ಕಾರ್ಮಾರು,ಸುಂದರ ಶೆಟ್ಟಿ ಮಾಸ್ತರ್ ಕೊಲ್ಲಂಗಾನ, ರಾಧಾಕೃಷ್ಣ ರೈ ಕಾರ್ಮಾರು, ಸೇವಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಉಪಾಧ್ಯಕ್ಷ ಮಾನ ಮಾಸ್ತರ್, ಸಂತೋಷ್ ಕುಮಾರ್, ವಿಯಕುಮಾರ್ ಮಾನ್ಯ, ಪುರೋಹಿತರಾದ ಮಹೇಶ್ ಭಟ್, ನಿವೃತ್ತ ಪೋಲೀಸ್ ಅಧಿಕಾರಿ ರಾಧಾಕೃಷ್ಣ ಮಣಿಯಾಣಿ, ಎಂ.ಎಚ್.ಜನಾರ್ಧನ, ಪ್ರೊ.ಎ.ಶ್ರೀನಾಥ್, ರಾಮ ನಾಯ್ಕ ಕಾರ್ಮಾರು, ರಂಜಿತ್ ಯಾದವ್, ಗಣೇಶಕೃಷ್ಣ ಅಳಕ್ಕೆ, ಶ್ರೀಮಠದ ಪ್ರತಿನಿಧಿಗಳಾದ ರಾಘವೇಂದ್ರ ಕಲ್ಲೂರಾಯ ಮೊದಲಾದವರು ಉಪಸ್ಥಿತರಿದ್ದರು.
ಕೃಷ್ಣಮೂರ್ತಿ ಪುದುಕೋಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.