HEALTH TIPS

ಐಎಂಎ ಜಿಲ್ಲಾಘಟಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

 

       ಕಾಸರಗೋಡು: ಐಎಂಎ ಕಾಸರಗೋಡು ಶಾಖೆಯ ಅಧ್ಯಕ್ಷರಾಗಿ ಡಾ. ಬಿ. ನಾರಾಯಣ ನಾಯ್ಕ್ ಅವರು ಅಧಿಕಾರ ವಹಿಸಿಕೊಂಡರು. ಕಾಸರಗೋಡು ಸಿಟಿ ಟವರ್ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಐಎಂಎ ರಾಜ್ಯ ಸಮಿತಿ ಅಧ್ಯಕ್ಷ ಡಾ. ಅಬ್ರಹಾಂ ವರ್ಗೀಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಡಾ.ನಾರಾಯಣ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು.

       ಸಂಘಟನೆ ರಾಜ್ಯ ಕಾರ್ಯದರ್ಶಿ  ಡಾ. ಗೋಪಿಕುಮಾರ್ ಮುಖ್ಯ ಭಾಷಣ ಮಾಡಿದರು. ಉತ್ತರ ವಲಯದ ಉಪಾಧ್ಯಕ್ಷ ಡಾ. ಸ್ಯಾಮ್ಯುಯೆಲ್ ಕೋಶಿ  ಶುಭಾಶಂಸೆಗೈದರು. ನಿಕಟಪೂರ್ವ ಅಧ್ಯಕ್ಷ ಡಾ. ಜೋಸೆಫ್ ಬೆನೆವೆನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಾ.ವೆಂಕಟ್ ತೇಜಸ್ವಿ, ಡಾ.ಜಿತೇಂದ್ರ ರೈ, ಡಾ.ಜೋಸೆಫ್, ಡಾ.ರಾಜರಾಮ್ ಡಿ.ಕೆ, ಡಾ. ಹರಿಕೃಷ್ಣನ್, ಹಿರಿಯ ಪತ್ರಕರ್ತ ಚಂದ್ರಮೋಹನ್, ಡಾ ಕಿಶೋರ್, ಡಾ. ಸುರೇಶ್ ಬಾಬು, ಡಾ ಜನಾರ್ದನ ನಾಯಕ್, ಡಾ.ವೆಂಕಟಗಿರಿ, ಡಾ.ಅನಂತ ಕಾಮತ್, ಕಾರ್ಯದರ್ಶಿ ರಾಕೇಶ್, ಡಾ.ಮಹೇಶ್ ಉಪಸ್ಥಿತರಿದ್ದರು. ಡಾ. ರೇಖಾ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ.ರಾಕೇಶ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries