HEALTH TIPS

ವೈದ್ಯರ ಅಮಾನತು ಹಿಂತೆಗೆದ ಸರ್ಕಾರ

       ತಿರುವನಂತಪುರ: ವೈದ್ಯಕೀಯ ಕಾಲೇಜಿನಲ್ಲಿ ರೋಗಿಯೊಬ್ಬರ ಮೈಮೇಲೆ ಹುಳ ಉಂಟಾದ ಪ್ರಕರಣದಲ್ಲಿ ಅಮಾನತುಗೊಳಿಸಲಾಗಿದ್ದ ವೈದ್ಯರು ಮತ್ತು ದಾದಿಯರನ್ನು ಮರಳಿ ಸೇವೆಗೆ ಸೇರ್ಪಡೆಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಡಾ. ಅರುಣಾ, ಮುಖ್ಯ ದಾದಿಯರಾದ ಲೀನಾ ಕುಂಚನ್ ಮತ್ತು ರಜನಿ ಕೆ.ವಿ ಅವರ ಅಮಾನತುಗಳನ್ನು ಸರ್ಕಾರ ಹಿಗೆದುಕೊಂಡಿತು.

          ಏತನ್ಮಧ್ಯೆ, ಗಂಭೀರ ಕರ್ತವ್ಯ ಲೋಪದ ವರದಿಯ ಆಧಾರದ ಮೇಲೆ ನೌಕರರ ವಿರುದ್ಧ ಇಲಾಖಾ ಕ್ರಮ ಮುಂದುವರಿಯುತ್ತದೆ. ಸಹ ಪ್ರಾಂಶುಪಾಲರ ನೇತೃತ್ವದ ಮೇಲ್ವಿಚಾರಣಾ ಸಮಿತಿಯು ವೈಫಲ್ಯಗಳು ಮುಂದೆ ಪುನರಾವರ್ತಿಸದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಕಾರ್ಯದರ್ಶಿ ಸೂಚಿಸಿದರು.

      ಘಟನೆಯಲ್ಲಿ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ವೈದ್ಯರು ಮತ್ತು ದಾದಿಯರ ಸಂಘಟನೆಯೂ ಸರ್ಕಾರದ ವಿರುದ್ದ ಧ್ವನಿಯೆತ್ತಿದ್ದವು. ಸಾವಿರಾರು ರೋಗಿಗಳು ಆಗಮಿಸುತ್ತಿರುವ ಈ ಸಮಯದಲ್ಲಿ ಆರೋಗ್ಯ ವಲಯದ ಸಿಬ್ಬಂದಿಯಲ್ಲಿನ ಹೆಚ್ಚುವರಿ ಕರ್ತವ್ಯ ಮತ್ತು ಬಿಕ್ಕಟ್ಟನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂಬ ಆರೋಪ ಬಲವಾಗಿದೆ. ಇದರ ಬೆನ್ನಲ್ಲೇ ವೈದ್ಯಕೀಯ ಕಾಲೇಜಿನ ನೋಡಲ್ ಅಧಿಕಾರಿಗಳು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಮರುಪರಿಶೀಲಿಸಲು ಸರ್ಕಾರ ನಿರ್ಧರಿಸಿದೆ.


     ಅಲ್ಲದೆ, ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೋವಿಡ್ ಮೇಲ್ವಿಚಾರಣೆಗೆ ವಿಶೇಷ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ಕ್ರಮ ಡಿಎಂಇ ವರದಿಯನ್ನು ಆಧರಿಸಿದೆ. ಶಸ್ತ್ರಚಿಕಿತ್ಸೆ ವಿಭಾಗವು ಜವಾಬ್ದಾರಿಯನ್ನು ಪ್ರಾಧ್ಯಾಪಕರಿಗೆ ಹಸ್ತಾಂತರಿಸಿದೆ.

            ಅನಿಲ್ ಕುಮಾರ್ ಪ್ರಸ್ತುತ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ್‍ನಲ್ಲಿ ಸಮರ್ಪಕ ಆರೈಕೆ ವಿಫಲಗೊಂಡ ಕಾರಣ ಪೆರೂರ್ಕಾಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries